ಪ್ರಹ್ಲಾದ್ ಜೋಶಿ ವಿರುದ್ಧ ಮುತಾಲಿಕ್ ಸ್ಪರ್ಧೆ
ಹುಬ್ಬಳ್ಳಿ, ಮಾ.10 : ಲೋಕಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದ ಶ್ರೀರಾಮ ಸೇನೆ ಭಾನುವಾರ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೇನಾದ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಧಾರವಾಡ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ
ಭಾನುವಾರ
ಪತ್ರಿಕಾಗೋಷ್ಠಿ
ನಡೆಸಿದ
ಶ್ರೀರಾಮ
ಸೇನೆಯ
ರಾಷ್ಟ್ರಾಧ್ಯಕ್ಷ
ಪ್ರಮೋದ್
ಮುತಾಲಿಕ್,
ಬಿಜೆಪಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ
ಅವರನ್ನು
ಬೆಂಬಲಿಸಲು
ಪಕ್ಷೇತರರಾಗಿ
ಸೇನೆಯ
ಅಭ್ಯರ್ಥಿಗಳು
ಆರು
ಕ್ಷೇತ್ರಗಳಲ್ಲಿ
ಸ್ಪರ್ಧಿಸಲಿದ್ದಾರೆ
ಎಂದು
ತಿಳಿಸಿದರು.[ಜೋಶಿ
ಮುತಾಲಿಕ್
ಹಣಾಹಣಿ]
ಧಾರವಾಡ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಅದರಂತೆ ಅವರು ಜೋಶಿ ವಿರುದ್ಧ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಉಳಿದಂತೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ ಮತ್ತು ಚಿಕ್ಕಮಗಳೂರಿನಿಂದ ಸೇನೆಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. [ಜೋಶಿ ವಿರುದ್ಧ ಸ್ಪರ್ಧಿಸದಂತೆ ಮುತಾಲಿಕ್ ಗೆ ಬೆದರಿಕೆ]
ಶ್ರೀರಾಮ ಸೇನೆ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇವೆ. ಇಲ್ಲವಾದಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದರು. ಅದರಂತೆ ಸದ್ಯ ಪಕ್ಷೇತರರಾಗಿ ಸ್ಪರ್ಧಿಸಲು 6 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.[ಚುನಾವಣಾ ವೇಳಾಪಟ್ಟಿ]
ಅಭ್ಯರ್ಥಿಗಳ
ಪಟ್ಟಿ
ಧಾರವಾಡ
-
ಪ್ರಮೋದ್
ಮುತಾಲಿಕ್
ಬೆಳಗಾವಿ-
ರಮಾಕಾಂತ
ಕೊಂಡೂಸ್ಕರ
ಚಿಕ್ಕೋಡಿ
-
ಜಯದೀಪ
ದೇಸಾಯಿ
ಬಾಗಕೋಟೆ
-
ಬಸವರಾಜ
ಮಹಾಲಿಂಗೇಶ್ವರಮಠ
ಹಾವೇರಿ
-
ಕುಮಾರ
ಹಕಾರಿ
ಚಿಕ್ಕಮಗಳೂರು
-
ಪಿ.ಎಸ್.
ಶಾರದಮ್ಮ