ಬಿಜೆಪಿಗೆ ಸೆಡ್ಡು ಹೊಡೆದ ಮುತಾಲಿಕ್, ಪಕ್ಷೇತರರಾಗಿ ಸ್ಪರ್ಧೆ
ಹುಬ್ಬಳ್ಳಿ, ಮಾ. 25 : ಬಿಜೆಪಿ ಸೇರಲು ವಿಫಲವಾದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿರುವ ಅವರು, ಚುನಾವಣೆಯಲ್ಲಿ ನಾನು ಗೆದ್ದು ಬಿಜೆಪಿ ನಾಯಕರಿಗೆ ಪಾಠ ಕಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಭಾನುವಾರ
ಬೆಳಗ್ಗೆ
ಬಿಜೆಪಿಗೆ
ಸೇರ್ಪಡೆಗೊಂಡು,
ಸಂಜೆ
ಪಕ್ಷದಿಂದ
ಹೊರಬಿದ್ದ
ಪ್ರಮೋದ್
ಮುತಾಲಿಕ್,
ಮಂಗಳವಾರ
ಹುಬ್ಬಳ್ಳಿಯಲ್ಲಿ
ಬೆಂಬಲಿಗರ
ಸಭೆ
ನಡೆಸಿದರು.
ಸಭೆಯ
ಬಳಿಕ
ಪತ್ರಿಕಾಗೋಷ್ಠಿ
ಉದ್ದೇಶಿಸಿ
ಮಾತನಾಡಿದ
ಅವರು,
ಎಲ್ಲಾ
ಕಾರ್ಯಕರ್ತರ
ಅಭಿಪ್ರಾಯ
ಸಂಗ್ರಹಿಸಿ
ಅಂತಿಮ
ನಿರ್ಧಾರ
ಕೈಗೊಂಡಿದ್ದೇವೆ.
ಬಿಜೆಪಿಗೆ
ತನ್ನ
ನಿರ್ಧಾರ
ತಿಳಿಸಲು
ಗಡುವು
ನೀಡಿದ್ದೆವು.
ಆದರೆ,
ಯಾವುದೇ
ಪ್ರತಿಕ್ರಿಯೆ
ಬಂದಿಲ್ಲ
ಎಂದು
ಹೇಳಿದರು.
[ಸೂತ್ರದಾರವೂ
ಇಲ್ಲ,
ಮೂಗುದಾರವೂ
ಇಲ್ಲದ
ಬಿಜೆಪಿ]
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು, ಅಂದು 1 ಗಂಟೆಗೆ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಹಿಂದುತ್ವದ ರಕ್ಷಣೆಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಬಿಜೆಪಿ ಜೊತೆ ಸಂಧಾನ ಮುಗಿದು ಹೋದ ಅಧ್ಯಾಯ ಎಂದು ಹೇಳಿದ ಮುತಾಲಿಕ್, ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಹಿಂದುತ್ವದ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಬಿಜೆಪಿ ನಾಯಕರು ಮಾಡಿದ ಅಪಮಾನಗಳನ್ನು ಜನರಿಗೆ ತಿಳಿಸುತ್ತೇನೆ. ಯಾರಿಗೆ ಮತ ನೀಡಬೇಕೆಂದು ಜನರು ನಿರ್ಧರಿಸಲಿ ಎಂದು ತಿಳಿಸಿದರು. [ಬಿಜೆಪಿಗೆ ಡೆಡ್ ಲೈನ್ ಕೊಟ್ಟ ಮುತಾಲಿಕ್]
ಬಿಜೆಪಿಯಿಂದ ನನಗೆ ಅನ್ಯಾಯವಾಗಿದ್ದು, ತೀರ ಅಪಮಾನವಾಗಿದೆ. ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿ ಮುತಾಲಿಕ್ ಅಚ್ಚರಿ ಮೂಡಿಸಿದರು. ಬೆಳಗಾವಿ ಮತ್ತು ಧಾರವಾಡದಲ್ಲಿ ಶ್ರೀರಾಮಸೇನೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಮುತಾಲಿಕ್ ಹೇಳಿದರು.