ಬೆಂಗಳೂರು ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಈಗ ಧಾರವಾಡ ಡಿಸಿ
ಧಾರವಾಡ, ಜುಲೈ 18 : ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಎಂ.ದೀಪಾ ಅಧಿಕಾರ ವಹಿಸಿಕೊಂಡರು. ದೀಪಾ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು.
ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ಡಾ.ಎಸ್.ಬಿ.ಬೊಮ್ಮನಹಳ್ಳಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ಅವರು ಬುಧವಾರ ಎಂ.ದೀಪಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್ ವರ್ಗಾವಣೆ: ಯಾವ ಇಲಾಖೆಗೆ ಯಾರು?
ಎಂ.ದೀಪಾ ಅವರು ಈ ಹಿಂದೆ ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆದ್ದರಿಂದ, ಸ್ಥಳೀಯ ವಿಷಯಗಳ ಬಗ್ಗೆ ಅವರಿಗೆ ಸೂಕ್ಷ್ಮ ಪರಿಚಯವಿದೆ.
2008ರ
ಬ್ಯಾಚ್
ಐಎಎಸ್
ಅಧಿಕಾರಿ
:
ಎಂ.ದೀಪಾ
ಅವರು
2008ನೇ
ಬ್ಯಾಚ್
ಐಎಎಸ್
ಅಧಿಕಾರಿ.
ಬೆಂಗಳೂರಿನ
ಮೌಂಟ್
ಕಾರ್ಮೆಲ್
ಕಾಲೇಜಿನಿಂದ
ಪದವಿ
ಪಡೆದಿದ್ದಾರೆ.
ಬೆಂಗಳೂರು
ವಿಶ್ವವಿದ್ಯಾಲಯದಿಂದ
ಅರ್ಥಶಾಶ್ತ್ರದಲ್ಲಿ
ಸ್ನಾತಕೋತ್ತರ
ಪದವಿ
ಪಡೆದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಿಜಯ ಭಾಸ್ಕರ್ ನೇಮಕ
ಗದಗ ಉಪವಿಭಾಗಾಧಿಕಾರಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯ ನಿರ್ದೇಶಕಿ, ಬೆಳಗಾವಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹುಬ್ಬಳ್ಳಿ ಧಾರವಾಡ ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ದೀಪಾ ಅವರು ಸೇವೆ ಸಲ್ಲಿಸಿದ್ದಾರೆ.
ಎಂ.ದೀಪಾ ಅವರ ಪತಿ ರಾಜೇಂದ್ರ ಚೋಳನ್ ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.