ಶರಣಾಗುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ತ್ತೀನಿ: ರವಿ ಬೆಳಗೆರೆ
ಧಾರವಾಡ, ಜೂನ್ 24: "ನಾನು ಕೈಕಟ್ಟಿ ನಿಲ್ಲವ ಪರಿಸ್ಥಿತಿಯೇ ಇಲ್ಲ. ಅಂಥ ಸ್ಥಿತಿ ಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ" ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಅವರಿಗೆ ವಿಧಿಸಿದ ಜೈಲು ಶಿಕ್ಷೆ ಹಾಗೂ ದಂಡದ ಕುರಿತಂತೆ ಆವರು ವಿಡಿಯೋ ಒಂದರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ 1 ವರ್ಷ ಜೈಲು, ₹ 10 ಸಾವಿರ ದಂಡ ಅಂತ ಈ ಸದನ ಸಮಿತಿ ತೀರ್ಪು ನೀಡಿದೆ. ಅದರ ವಿರುದ್ಧ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ವರೆಗೂ ಹೋಗಿ ನಾನು ಬಡಿದಾಡ್ತೀನಿ. ಈ ಸರಕಾರಕ್ಕೆ ಇನ್ನು ಒಂದು ವರ್ಷ ಇದೆ. ಇವರ ಜೀವನ ಮುಗೀತು ಇನ್ನು. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ವಿಚಾರಕ್ಕೆ ನನ್ನನ್ನು ಯಾಕೆ ಜವಾಬ್ದಾರನನ್ನಾಗಿ ಮಾಡ್ತೀರಿ. ಇದು ಬಹಳ ದಮನಕಾರಿ ಆಕ್ರಮಣ. ನಾನು ಇದನ್ನು ವಿರೋಧಿಸುತ್ತೇನೆ. ಈ ವ್ಯವಸ್ಥೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ನಾನು ಕೈ ಕಾಲು ಇಲ್ಲದವನಲ್ಲ. ನಾನು ಕೋಳಿವಾಡರಂತೆ ದಡ್ಡ, ಮೂರ್ಖ ಅಲ್ಲ. ಅವರು ಬೇಕಾದ್ದು ಮಾಡಲಿ. ಹೋರಾಟ ಮಾಡದೆ ಕೈಕಟ್ಟಿಕೊಂಡು ನಿಂತು ಅವರಿಗೆ ಶರಣಾಗುವಂತಹ ಪರಿಸ್ಥಿತಿ ನನಗಿಲ್ಲ. ಅಂತಹ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ನಾಗರಾಜ್ ಅವರನ್ನು ನಾನು ನೋಡಿಲ್ಲ. ಶುಕ್ರವಾರ ಅವರು ಫೋನ್ಗೆ ಸಿಕ್ಕಿದ್ದರು. ಅವರದ್ದೇನೋ ಯಲಹಂಕದ ಮಠದ ಗಲಾಟೆ. ವಿಶ್ವನಾಥ್ ಅಂದ.. ನನಗೆ ವೈಯಕ್ತಿಕವಾಗಿ ಶತ್ರುಗಳು ಅಂತ ಇಲ್ಲ. ಸದನಕ್ಕೆ ಕಾಲಿಟ್ಟರೆ ಎಲ್ಲರೂ ಮಿತ್ರರೇ, ಹೊರಗೆ ಬಂದರೆ ಎಲ್ಲರೂ ಶತ್ರುಗಳೇ. ನನ್ನ ಪರಿಚಯದ, ನನ್ನ ಸ್ನೇಹದ, ಆತ್ಮೀಯವಾದ ಅಷ್ಟೂ ಜನ ರಾಜಕಾರಣಿಗಳು ಬಹಳ ಇದ್ದಾರೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದು, ಅವರು ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾರೆ.
ಇನ್ನು ಇದಕ್ಕೂ ಮುನ್ನ ಒಕ್ಕಣೆಯೊಂದನ್ನು ಫೇಸ್ ಬುಕ್ ನಲ್ಲಿ ಬೆಳಗೆರೆ ಹಾಕಿದ್ದಾರೆ. ರಾಜಕಾರಣಿಗಳ ವಿರುದ್ಧ ಬರೆದರೆ ನೀವು ಜೈಲಲ್ಲಿ ಇರ್ತೀರಾ ಎಂಬ ಸಂದೇಶ ನಮಗೆ ಈಗ ಸಿಕ್ಕಿದೆ. ನೀವು ಕಾಮೆಂಟ್ ಮಾಡಬೇಡಿ ಎಂಬ ನಿಯಮ ಮಾಡಿದರೆ ನೀವು ಏನು ಮಾಡ್ತೀರಿ? ನನಗಿಗಲೂ ನಂಬಿಕೆ ಇದೆ. ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ನಂಬ್ತೀನಿ ಎಂದಿದ್ದಾರೆ.
ನಾನು ಈ ತೀರ್ಪಿನಿಂದ ವಿಚಲಿತನಾಗಿಲ್ಲ. ಈ ಹೋರಾಟದಲ್ಲಿ ಶೇ ನೂರರಷ್ಟು ಗೆದ್ದೇಗೆಲ್ತೀನಿ ಎಂಬ ನಂಬಿಕೆ ಇದೆ. ನೀವು ನನ್ನೊಂದಿಗೆ ಇದ್ದೀರಿ. ಈ ಯುದ್ಧದಲ್ಲಿ ಜತೆಗೆ ಸೇರಿ. ಅವರಿಗೊಂದು ಪಾಠ ಕಲಿಸೋಣ ಎಂದು ಪೋಸ್ಟ್ ಮಾಡಿದ್ದಾರೆ ರವಿ ಬೆಳಗೆರೆ.
-
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ?












Click it and Unblock the Notifications