ಮಾಜಿ ಸಚಿವ ಉಮೇಶ್ ಕತ್ತಿ ಕಾರು ಡಿಕ್ಕಿ, ಮಹಿಳೆ ಸಾವು

ಕಲಘಟಗಿ ತಾಲೂಕಿನ ಮಂಡಗತ್ತಿ ಗ್ರಾಮದ ಪುಷ್ಪಾ ಚೌಹಾಣ್ (26) ಅವರಿಗೆ ಮೇ 2ರಂದು ವರೂರು ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದಾಗ ಮಾಜಿ ಸಚಿವ ಉಮೇಶ್ ಕತ್ತಿ ಪತ್ನಿ ಶೀಲಾ ಕತ್ತಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಹೊಡೆದಿತ್ತು.
ಕಾರು ಡಿಕ್ಕಿ ಹೊಡೆದಿದ್ದರಿಂದ ಗರ್ಭಿಣಿ ಪುಷ್ಪಾ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 3ರಂದು ಪುಷ್ಪಾ ಗರ್ಭದಲ್ಲಿದ್ದ ಅವಳಿ ಮಕ್ಕಳು ಮೃತಪಟ್ಟಿದ್ದವು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಾಲಾಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಎಲ್ಲಿದ್ದಾರೆ ಮಾಜಿ ಸಚಿವರು : ತಮ್ಮ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡರು ಆಸ್ಪತ್ರೆಗೆ ಆಗಮಿಸಿ ಉಮೇಶ್ ಕತ್ತಿ ಮಹಿಳೆಯ ಆರೋಗ್ಯ ವಿಚಾರಿಸಿಲ್ಲ ಎಂದು ಪುಷ್ಪಾ ಸಂಬಂಧಿಕರು ದೂರಿದ್ದಾರೆ. ಚಿಕಿತ್ಸೆಗಾಗಿ ಹಣವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಸೋಮವಾರ ಆಸ್ಪತ್ರೆಗೆ ಬಂದಿದ್ದ ಉಮೇಶ್ ಕತ್ತಿ ಆಪ್ತ ಸಹಾಯಕರು ಚಿಕಿತ್ಸೆಗೆ ಹಣ ನೀಡಿಲ್ಲ ಎಂದು ಆಸ್ಪತ್ರೆ ಆವರಣದಲ್ಲಿಯೇ ಪುಷ್ಪಾ ಸಂಬಂಧಿಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂದು ಪುಷ್ಪಾ ಮೃತಪಟ್ಟರೂ ಮಾಜಿ ಸಚಿವರು ಮಾತ್ರ ಆಸ್ಪತ್ರೆಗೆ ಆಗಮಿಸಿಲ್ಲ.











Click it and Unblock the Notifications