ಕೊರೊನಾದಿಂದ ಗ್ರಾ.ಪಂ ಸಿಬ್ಬಂದಿ ಸಾವು: ಪರಿಹಾರಕ್ಕಾಗಿ 1.5 ವರ್ಷದಿಂದ ಪತ್ನಿ ಅಲೆದಾಟ
ಹುಬ್ಬಳ್ಳಿ, ನವೆಂಬರ್ 17 : ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ವಿದೇಶದಿಂದ ಬಂದ ಕೊರೊನಾ ಕಾಯಿಲೆಯಿಂದ ದೇಶದ ಲಕ್ಷಾಂತರ ಜನ ಬಲಿಯಾಗಿದ್ದಾರೆ. ಸದ್ಯ ಕೊರೊನಾ ಕಾಯಿಲೆ ಕ್ರಮೇಣ ಕಡಿಮೆಯಾಗಿದ್ದು, ಜನ ಎಂದಿನಂತೆ ಜೀವನ ನಡೆಸುತ್ತಿದ್ದಾರೆ.
ಕೊರೊನಾ ತೊಗಲಿದರು ಅದರ ಕರಿ ಛಾಯೆ ಇನ್ನೂ ಹಾಗೆ ಇದೆ. ಈ ಕಾಯಿಲೆಯ ಹೊಡೆತದಿಂದ ಎಷ್ಟೋ ಜನ ಉದ್ಯೋಗವನ್ನು ಕಳೆದುಕೊಂಡರೆ, ಇನ್ನು ಎಷ್ಟೋ ಜನ ತಂದೆ,ತಾಯಿ, ಸಹೋದರ ಸಹೋದರಿಯನ್ನು ಕಳೆದುಕೊಂಡಿದ್ದಾರೆ.
ಕೊರೊನಾಕ್ಕೆ ಬಲಿಯಾದ ಜನರ ಕುಟುಂಬಗಳು ಈಗಲೂ ಪರದಾಡುತ್ತಿವೆ. ಸರ್ಕಾರದಿಂದ ಸಿಗುವ ಪರಿಹಾರವೂ ಬರದೇ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ರೋಗಿಗಳ ಜಿ.ಪಿ.ಎಸ್ ವೇಳೆ ತಗುಲಿದ ಸೋಂಕು
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮ ಪಂಚಾಯತಿಯಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿದ್ದ ಪ್ರಕಾಶ ಯಲ್ಲಪ್ಪ ಹೂಗಾರ ಕೊರೊನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಗುಡಿಸಾಗರ ಗ್ರಾಮ ಪಂಚಾಯತಿಯ ಆದೇಶ ಮೇರೆಗೆ ಗುಡಿಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡಿಸಾಗರ, ಸೊಟಕನಾಳ. ನಾಗನೂರ ಮತ್ತು ಕಡದಳ್ಳಿ ಗ್ರಾಮಗಳಲ್ಲಿ ಕೋವಿಡ್ 19 ಸಂದರ್ಭದಲ್ಲಿ ಸೋಂಕಿತರನ್ನು ಮನೆ ಮನೆಗೆ ಹೋಗಿ ರೋಗಿಗಳ ಜಿ.ಪಿ.ಎಸ್. ಮಾಡುವಾಗ ರೋಗಿಗಳ ಸಂಪರ್ಕದಿಂದ ಪ್ರಕಾಶ ಯಲ್ಲಪ್ಪ ಅವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಅವರು ನವಲಗುಂದ ತಾಲೂಕು ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಫಲಕಾರಿಯಾಗದೆ ದಿನಾಂಕ 27/5/ 2021ರಲ್ಲಿ ಮೃತಪಟ್ಟರು.

ಒಂದೂವರೆ ವರ್ಷದಿಂದ ಪರಿಹಾರಕ್ಕಾಗಿ ಅಲೆದಾಟ
ಪ್ರಕಾಶ ಯಲ್ಲಪ್ಪ ಮೃತಪಟ್ಟ ನಂತರ ಅವರ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಸರ್ಕಾರದಿಂದ ಬರುವ ಪರಿಹಾರ ಈವರೆಗೂ ಆ ಕುಟುಂಬಕ್ಕೆ ಬಂದಿಲ್ಲ. ಅದಕ್ಕಾಗಿ ಮೃತರ ಪತ್ನಿ ಶಿಲ್ಪಾ ಪ್ರಕಾಶ ಹೂಗಾರ ಅವರು ಕಳೆದ ಒಂದೂವರೆ ವರ್ಷದಿಂದ ಅಲೆದಾಡುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಸಿಗುತ್ತಿಲ್ಲ. ನವಲಗುಂದ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಗೊಗರೆದರು ಕೂಡಾ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಿಲ್ಪಾ ನೋವು ತೋಡಿಕೊಂಡಿದ್ದಾರೆ.

ಪರಿಹಾರ ವಿಚಾರದಲ್ಲಿ ನಮ್ಮ ಪ್ರಯತ್ನ ಮುಗಿದಿದೆ ಎನ್ನುವ ಅಧಿಕಾರಿಗಳು
ಪ್ರಕಾಶ್ ಹೂಗಾರ ಅವರು ಕೆಲಸ ಮಾಡಿರುವ ಬಗ್ಗೆ ಎಲ್ಲ ಪತ್ರಗಳು ಸರಿಯಾಗಿದ್ದರೂ, ನವಲಗುಂದ ತಾಲೂಕು ಪಂಚಾಯತಿ ಅಧಿಕಾರಿಗಳು ಪ್ರಕಾಶ್ ಹೂಗಾರ ಅವರು ಕೋವಿಡ್ ಸಮಯದಲ್ಲಿ ಕೆಲಸವನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಪರಿಹಾರ ವಿಚಾರದಲ್ಲಿ ನಮ್ಮ ಪ್ರಯತ್ನ ಮುಗಿದಿದೆ, ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಅವರನ್ನು ಭೇಟಿ ಮಾಡಿ ಎಂದು ನವಲಗುಂದ ತಾಲೂಕು ಪಂಚಾಯತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಅವರು, ಮೃತ ಪ್ರಕಾಶ್ ಹೂಗಾರ ಅವರ ಕಾಗದ ಪತ್ರಗಳನ್ನು ನೋಡದೆ ನಮಗೆ ಆಗಲ್ಲ ಎನ್ನುತ್ತಾರೆ.

ಪರಿಹಾರಕ್ಕಾಗಿ ಅಲೆದ ಮಹಿಳೆ ಅಳಲು
ಇನ್ನು ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂದು ಸಿಇಓ ಸುರೇಶ ಹಿಟ್ನಾಳ ಸಿಡುಕಿ ಹೇಳುತ್ತಿದ್ದಾರೆ ಎಂದು ಮೃತರ ಪತ್ನಿ ಶಿಲ್ಪಾ ಪ್ರಕಾಶ್ ಹೂಗಾರ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. "ನಮ್ಮ ಪತಿಯೇ ನಮ್ಮ ಕುಟುಂಬದ ಜೀವನಾಧಾರವಾಗಿದ್ದರು. ಅವರ ಮೃತರಾದ ಮೇಲೆ ನಾನು ಒಬ್ಬಂಟಿಯಾಗಿದ್ದೇನೆ. ಚಿಕ್ಕ ಎರಡು ಮಕ್ಕಳಿದ್ದು, ನಾನು ಹೇಗೆ ಜೀವನ ನಡೆಸಲಿ ಎಂದು ಶಿಲ್ಪಾ ಹೂಗಾರ ಅವರು ತಮ್ಮ ಅಳಲು ತೋಡಿಕೊಂಡರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನೊಂದ ಕುಟುಂಬಕ್ಕೆ ನೆರವಾಗಬೇಕಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications