ಧಾರವಾಡ; ಕೆಸಿಡಿ ಕಾಲೇಜು ಪ್ರಾಂಶುಪಾಲರ ಬಂಧನಕ್ಕೆ ವಾರಂಟ್ ಜಾರಿ
ಧಾರವಾಡ, ಫೆಬ್ರವರಿ 12: ವಿದ್ಯಾಕಾಶಿ ಧಾರವಾಡದ ಪ್ರತಿಷ್ಠಿತ ಕಾಲೇಜವೊಂದರ ಪ್ರಾಂಶುಪಾಲರು ಚೆಕ್ಬೌನ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಅವರ ಬಂಧನಕ್ಕೆ ಆದೇಶ ನೀಡಿದೆ.
ಧಾರವಾಡ ನಗರದ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ದುರಗಪ್ಪ ಕರಡೋಣಿ ಅವರಿಗೆ ವಾರಂಟ್ ಜಾರಿಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ನ ಜೆಎಂಎಫ್ಸಿ ನ್ಯಾಯಾಲಯದಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಿಗೆ ಬಂಧನ ವಾರಂಟ್ ನೀಡಲಾಗಿದ್ದು, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯವು ಆದೇಶ ಹೊರಡಿಸಿದೆ.
ಧಾರವಾಡ-ಬೆಳಗಾವಿ ನೇರ ರೈಲು ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ
ಪ್ರಕರಣದ
ಹಿನ್ನೆಲೆ
ಬೆಳಗಾವಿ
ಜಿಲ್ಲೆ
ಗೋಕಾಕ್
ಮೂಲದ
ವಿಠ್ಠಲ್
ಎನ್ನುವವರ
ಬಳಿ
ಧಾರವಾಡ
ಕರ್ನಾಟಕ
ಕಾಲೇಜಿನ
ಪ್ರಾಚಾರ್ಯರಾದ
ಕರಡೋಣಿಯವರು
3
ಲಕ್ಷ
ರೂ.
ಹಣ
ಪಡೆದಿದ್ದರು.
ಹಣ
ಹಿಂತಿರುಗಿಸಲು
ಚೆಕ್
ನೀಡಿದ್ದರು.
ಆದರೆ
ಖಾತೆಯಲ್ಲಿ
ಹಣವಿಲ್ಲದೇ
ಚೆಕ್ಬೌನ್ಸ್
ಆಗಿರುವುದು
ಕಂಡುಬಂದಿತ್ತು.
ಹಣ ಮರಳಿಸುವಂತೆ ಹಲವು ಬಾರಿ ವಿಠ್ಠಲ ಅವರು ಪ್ರಾಚಾರ್ಯರಿಗೆ ಕೇಳಿಕೊಂಡರೂ, ಹಣ ನೀಡದ ಹಿನ್ನೆಲೆಯಲ್ಲಿ ವಿಠ್ಠಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಂತರ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಾಚಾರ್ಯರ ಕೋರ್ಟ್ಗೆ ಹಾಜರಾಗಿರಲಿಲ್ಲ.
ಹಾಗಾಗಿ ನ್ಯಾಯಾಧೀಶರು ಕೂಡಾ ಪ್ರಾಚಾರ್ಯರರ ವಿರುದ್ಧ ಕೋರ್ಟ್ ಗರಂ ಆಗಿದ್ದು, ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹಾಜರಾಗದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲ ದುರಗಪ್ಪ ಕರಡೋಣಿಯವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ಹೊರಡಿಸಲಾಗಿದೆ.