ಧಾರವಾಡ ದಕ್ಷಿಣದ ಶಾಸಕ ವಿನಯ್ ಕುಲಕರ್ಣಿ ಪರಿಚಯ
ಧಾರವಾಡ, ಅಕ್ಟೋಬರ್ 29 : ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ ಧಾರವಾಡ ದಕ್ಷಿಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯ ಶಾಸಕರಾದ ವಿನಯ್ ಕುಲಕರ್ಣಿ ಅವರನ್ನು ಸಿದ್ದರಾಮಯ್ಯ ಅವರು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.
ಎರಡನೇ
ಬಾರಿ
ಶಾಸಕರಾಗಿ
ಆಯ್ಕೆಯಾಗಿರುವ
ವಿನಯ್
ಕುಲಕರ್ಣಿ
(47)
ಅವರು
ಗುರುವಾರ
ಸಂಜೆ
ಸಚಿವರಾಗಿ
ಪ್ರಮಾಣ
ವಚನ
ಸ್ವೀಕರಿಸುತ್ತಿದ್ದಾರೆ.
ಪಂಚಮಸಾಲಿ
ಲಿಂಗಾಯಿತ
ಸಮುದಾಯಕ್ಕೆ
ಸೇರಿದ
ವಿನಯ್
ಕುಲಕರ್ಣಿ
ಅವರು
ಬಿಎಸ್ಸಿ
ಅಗ್ರಿಕಲ್ಚರ್
ಪದವೀಧರರು.
[ಜಾರ್ಜ್
ಕೈ
ತಪ್ಪಲಿದೆ
ಗೃಹ
ಖಾತೆ]
2014ರ ಲೋಕಸಭೆ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ಪರ್ಧಿಸಿದ್ದರು. 431,738 ಮತಗಳನ್ನು ಪಡೆದು ಅವರು ಸೋಲು ಅನುಭವಿಸಿದರೆ, 545,395 ಮತಗಳನ್ನು ಪಡೆದ ಜೋಶಿ ಅವರು ಗೆಲುವು ಸಾಧಿಸಿದ್ದರು. [ಸಿದ್ದರಾಮಯ್ಯ ಸಂಪುಟಕ್ಕೆ ನಾಲ್ವರ ಸೇರ್ಪಡೆ]
ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ ವಿನಯ್ ಕುಲಕರ್ಣಿ ಅವರು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಗುರುವಾರ ಸಂಜೆ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ವಿನಯ್ ಕುಲಕರ್ಣಿ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.....
*
ವಿನಯ್
ಕುಲಕರ್ಣಿ
ಬಿಎಸ್ಸಿ
ಪದವೀಧರರು
*
ಪಂಚಮಸಾಲಿ
ಲಿಂಗಾಯತ
ಸಮುದಾಯಕ್ಕೆ
ಸೇರಿದವರು
*
2004ರಲ್ಲಿ
ಧಾರವಾಡ
ಗ್ರಾಮಾಂತರ
ಕ್ಷೇತ್ರದಿಂದ
ಸ್ವತಂತ್ರ
ಅಭ್ಯರ್ಥಿಯಾಗಿ
ಸ್ಪರ್ಧಿಸಿ
ಗೆಲುವು,
ಕಾಂಗ್ರೆಸ್
ಸೇರ್ಪಡೆ
*
2008ರಲ್ಲಿ
ಬಿಜೆಪಿಯ
ಸೀಮಾ
ಮಸೂತಿ
ವಿರುದ್ಧ
ಸೋಲು
*
2013ರ
ಚುನಾವಣೆಯಲ್ಲಿ
ಧಾರವಾಡ
ದಕ್ಷಿಣ
ವಿಧಾನಸಭಾ
ಕ್ಷೇತ್ರದಲ್ಲಿ
ಗೆಲುವು
*
2014ರ
ಲೋಕಸಭೆ
ಚುನಾವಣೆಯಲ್ಲಿ
ಪ್ರಹ್ಲಾದ್
ಜೋಶಿ
ವಿರುದ್ಧ
ಸ್ಪರ್ಧೆ
*
431,738
ಮತಗಳನ್ನು
ಪಡೆದು
ಸೋಲು
[ಫೇಸ್
ಬುಕ್
ಪುಟ]