ಗರಗಕ್ಕೆ ಭೇಟಿ ನೀಡಿ ಖಾದಿ ಬಳಕೆಗೆ ಕರೆ ನೀಡಿದ ನಟಿ ಅಮೂಲ್ಯ ಪತಿ
ಧಾರವಾಡ, ಆಗಸ್ಟ್ 17: ಚಿತ್ರನಟಿ ಅಮೂಲ್ಯ ಪತಿ ಜಗದೀಶ್ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಧಾರವಾಡದ ಗರಗ ಗ್ರಾಮಕ್ಕೆ ಭೇಟಿ ನೀಡಿದ್ದರು.
Recommended Video
ರಾಷ್ಟ್ರಧ್ವಜ ತಯಾರಿಕೆಗೆ ಹೆಸರಾಗಿರುವ ಗರಗದ ಕುಂಬಾರ ಓಣಿಗೆ ಭೇಟಿ ನೀಡಿದ ಅವರು, ಇಲ್ಲಿನ ಜನರೊಂದಿಗೆ ಸ್ವಲ್ಪ ಸಮಯ ಕಳೆದರು. ಇದೇ ಸಂದರ್ಭ, ಜನರು ಖಾದಿಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಆತ್ಮನಿರ್ಭರಕ್ಕೆ ಮುಂದಾಗಬೇಕೆಂದು ಕರೆಯನ್ನೂ ನೀಡಿದರು.
ಖಾದಿಯ ಮಹತ್ವವೇನು?,ನೂಲು ಸಿದ್ಧಪಡಿಸುವುದು ಹೇಗೆ, ಮಾರಾಟದ ವ್ಯವಸ್ಥೆ ಹೇಗಿರುತ್ತದೆ, ಕೊರೊನಾದಿಂದಾಗಿ ಈ ಉದ್ಯಮಕ್ಕೆ ಯಾವ ರೀತಿ ಹೊಡೆತ ಬಿದ್ದಿದೆ ಎಂಬುದರ ಬಗ್ಗೆ ಅಲ್ಲಿನವರ ಜೊತೆ ಮಾತನಾಡಿ ಮಾಹಿತಿ ಪಡೆದರು. ಕುಶಲಕರ್ಮಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕಗಳನ್ನು ನೀಡಿದರು.

ಬೆಂಗಳೂರಿನ ಜಿಎಚ್ ಆರ್ ತಂಡದ ನೇತೃತ್ವವನ್ನು ಜಗದೀಶ ಅವರೇ ವಹಿಸಿಕೊಂಡಿದ್ದರು. ತಂಡದಲ್ಲಿ ರಾಘವೇಂದ್ರ, ಅವಿನಾಶ, ಕೆ.ನಾಗರಾಜ, ಮನೋಜ, ಕಾರ್ತಿಕ, ಜೀವನ, ಅಭಿ, ದಿಲೀಪಕುಮಾರ, ಧ್ರುವಕುಮಾರ ಇದ್ದರು. ಇದೇ ಸಂದರ್ಭ ಮಡಿವಾಳೇಶ್ವರ ಸ್ವಾಮಿ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದರು. ಗರಗ ಕೇಂದ್ರದ ಮ್ಯಾನೇಜರ್ ಈಶ್ವರ ಇಟಗಿ, ನೂಲು ಕೇಂದ್ರದ ಮ್ಯಾನೇಜರ್ ರಾಜು ಕಳಸದ, ಸೇಲ್ಸ್ ಮ್ಯಾನೇಜರ್ ಬಸವರಾಜ ಕುಮಾರಸ್ವಾಮಿಮಠ, ನಾಗನಗೌಡ ಪಾಟೀಲ ಸೇರಿದಂತೆ ಹಲವರು ಜಗದೀಶ್ ಅವರೊಂದಿಗೆ ಮಾತನಾಡಿ, ಖಾದಿ ಕೇಂದ್ರದ ಸ್ಥಿತಿಗತಿಯ ಬಗ್ಗೆ ವಿವರಿಸಿದರು.

"ಅರ್ಥಪೂರ್ಣವಾಗಿ ಆಚರಿಸಿದ ಈ ಸ್ವಾತಂತ್ರೋತ್ಸವ ನನಗೆ ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರಣೆ ನೀಡಿದೆ. ಇನ್ನಷ್ಟು ಇಂಥ ಕೆಲಸಗಳನ್ನು ಮಾಡುತ್ತೇನೆ" ಎಂದರು ಜಗದೀಶ್.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications