Get Updates
Get notified of breaking news, exclusive insights, and must-see stories!

ಮದುವೆಯಾದರೂ ಬೇರೆಯೊಬ್ಬನ ಮೇಲೆ ಪ್ರೀತಿ: ಕೆರೆಗೆ ಹಾರಿ ಪ್ರೇಯಸಿ, ಪ್ರಿಯಕರ ಸಾವು

ದಾವಣಗೆರೆ, ಆಗಸ್ಟ್‌, 18: ಬೆಂಗಳೂರಿನ ನಾಗರತ್ನ ಎನ್ನುವ ಮಹಿಳೆ ಗಂಡನನ್ನು ಬಿಟ್ಟು ಬೇರೆ ಯುವಕನ ಜೊತೆಗೆ ಪ್ರೇಮ ಸಲ್ಲಾಪವನ್ನು ಬೆಳೆಸಿಕೊಂಡಿದ್ದಳು. ಇದೀಗ ಮದುವೆಯಾದ ಮಹಿಳೆ ಹಾಗೂ ಆಕೆಯ ಪ್ರಿಯಕರ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದಲ್ಲಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಇವರ ಪ್ರೇಮಾಂಕುರದ ಕತೆ ಕೇಳಿದರೆ ಎಂಥವರೂ ದಂಗಾಗಿ ಬಿಡುತ್ತಾರೆ. ಮದುವೆ ಒಬ್ಬರ ಜೊತೆಗೆ, ಸಲ್ಲಾಪ ಮತ್ತೊಬ್ಬನ ಜೊತೆಗೆ ಎನ್ನವ ಅಸಲಿ ಕತೆ ಈಕೆಯದಾಗಿತ್ತು.

ಮನೆಯವರಿಗೆ ಗೊತ್ತಿಲ್ಲದೇ ಬೆಂಗಳೂರಿನಿಂದ ಚನ್ನಗಿರಿಯವರೆಗೂ ಬಂದಿದ್ದಾರೆ. ಅದು ಬೈಕ್‌ನಲ್ಲಿ ಇವರಿಬ್ಬರು ಬಂದಿದ್ದು, ಅಲ್ಲಿಯೇ ಪ್ರಾಣವನ್ನು ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್‌ ತನಿಖೆಯ ಪ್ರಕಾರ ಇವರಿಬ್ಬರು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಬಳಿಯ ಕೆರೆ ಏರಿ ಮೇಲೆ ಕುಳಿತುಕೊಂಡು ಎಂಜಾಯ್‌ ಮಾಡುವಾಗ ಅಲ್ಲಿನ ಗ್ರಾಮ್ಥರೊಬ್ಬರಿಗೆ ಇವರು ತಗ್ಲಾಕೊಂಡಿದ್ದಾರೆ. ತಕ್ಷಣ ಇವರು ಕೆರೆಗೆ ಹಾರಿ ಸತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಾಗರತ್ನ ಪ್ರೀತಿಯ ಬಲೆಗೆ ಬಿದ್ದಿದ್ದು ಹೇಗೆ?
ಬೆಂಗಳೂರಿನ ನಾಗರತ್ನ, ಚರಣ್ ಎಂಬುವವರು ಸಾವಿಗೆ ಶರಣಾಗಿದ್ದಾರೆ. ನಾಗರತ್ನಳಿಗೆ ಈಗಾಗಲೇ ಮದುವೆಯೂ ಆಗಿತ್ತು. ಆದರೂ ಚರಣ್ ಮೇಲೆ ಆಕೆಗೆ ಪ್ರೇಮವಾಗಿ ಮತ್ತೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. 21 ವರ್ಷದ ನಾಗರತ್ನ ಎಂಬಾಕೆಯು ಆಧಾರ್ ಕಾರ್ಡ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಏಳು ತಿಂಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಲು ಬಂದ ಚರಣ್‌ಗೆ ಆಕೆಯ ಪರಿಚಯವಾಗಿದೆ. ಬಳಿಕ ಇಬ್ಬರು ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ.

Davanagere: Two lovers suicide after jumping into lake

ಬೆಂಗಳೂರಿನಿಂದ ಬಂದು ಚನ್ನಗಿರಿಯಲ್ಲಿ ಆತ್ಮಹತ್ಯೆ
ಟಿವಿಎಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಚರಣ್ ಮತ್ತು ನಾಗರತ್ನ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಬಿಟ್ಟಿರಲು ಆಗದಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು. ನಿನ್ನೆ ಬೆಂಗಳೂರಿನಿಂದ ಚನ್ನಗಿರಿ ತಾಲೂಕಿನ ಬೆಂಕಿಕೆರೆಯವರೆಗೆ ಬೈಕ್‌ನಲ್ಲಿ ಬಂದಿದ್ದಾರೆ. ಕೆರೆಯ ನೀರಿನಲ್ಲಿ ಆಟವಾಡಿ, ಮೋಜು ಮಸ್ತಿ ಮಾಡಿದ್ದಾರೆ. ಇವರಿಬ್ಬರು ಕೆರೆಯ ದಂಡೆ ಮೇಲೆ ಕುಳಿತು ನೀರಿನಲ್ಲಿ ಆಟ ಆಡುತ್ತಿದ್ದನ್ನು ಶಿವಣ್ಣ ಎಂಬುವವರು ನೋಡಿದ್ದಾರೆ.

ನೀರಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ
ಕೆರೆಯ ದಂಡೆ ಮೇಲೆ ಸುಮಾರು ಹೊತ್ತು ಕಳೆದ ಬಳಿಕ ಇಬ್ಬರೂ ಕೈಗೆ ವೇಲ್ ಅನ್ನು ಬಿಗಿದುಕೊಂಡು ನೀರಿಗೆ ಜಿಗಿದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಪೀಣ್ಯದ ಕಾರ್ಖಾನೆಯೊಂದರಲ್ಲಿ ನಾಗರತ್ನಳ ಪತಿ ಕೆಲಸ ಮಾಡುತ್ತಿದ್ದರು. ನಾಗರತ್ನ ಹಾಗೂ ಚರಣ್ ಕಾಣೆಯಾದ ಬಗ್ಗೆ ಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರಿಬ್ಬರು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕಂಡುಬಂದಿದೆ. ಚನ್ನಗಿರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Davanagere: Two lovers suicide after jumping into lake

ಕುಟುಂಬದವರಿಗೆ ತಮ್ಮ ಕಳ್ಳಾಟದ ಪ್ರೇಮಾಂಕುರ ವಿಷಯ ಗೊತ್ತಾದರೆ ಏನಾಗುತ್ತದೆಯೋ ಏನೋ ಎಂಬ ಭಯದಿಂದ ಬೆಂಗಳೂರಿನಿಂದ ಇಲ್ಲಿಗೆ ಬಂದು ಸಾವಿಗೆ ಶರಣಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

Recommended Video

      Siddaramaiah ವಿಚಾರವಾಗಿ ಕೊಡಗಿನಲ್ಲಿ Mantar Gowda ಖಡಕ್ ಮಾತು | *Karnataka | OneIndia Kannada

      ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+