ಡಿಕೆಶಿ ಬಂಧನ ಖಂಡಿಸಿ ದಾವಣಗೆರೆ, ಚಿತ್ರದುರ್ಗದಲ್ಲಿ ಭಾರೀ ಪ್ರತಿಭಟನೆ
ದಾವಣಗೆರೆ, ಸೆಪ್ಟೆಂಬರ್ 4: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ದಾವಣಗೆರೆ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ.
LIVE Updates: ಡಿ.ಕೆ.ಶಿವಕುಮಾರ್ ಇಂದು ಕೋರ್ಟ್ಗೆ ಹಾಜರು
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರಧಾನಿ ಮೋದಿ, ಗೃಹ ಸಚಿವ ಅಮೀತ್ ಶಾ ಹಾಗು ಬಿಎಸ್ ವೈ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಟೈರ್ ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರು,
ಭರಮಸಾಗರ,
ಹೊಳಲ್ಕೆರೆ,
ಚಳ್ಳಕೆರೆ,
ಮೊಳಕಾಲ್ಮೂರು
ಸೇರಿದಂತೆ
ಜಿಲ್ಲೆಯ
ವಿವಿಧ
ಕಡೆ
ಪ್ರತಿಭಟನೆ
ನಡೆದಿದೆ.
ದಾವಣಗೆರೆಯಲ್ಲೂ
ಜಿಲ್ಲಾ
ಕಾಂಗ್ರೆಸ್
ಕಾರ್ಯಕರ್ತರು
ನಗರದ
ಜಯದೇವ
ಸರ್ಕಲ್
ನಲ್ಲಿ
ಜಿಲ್ಲಾಧ್ಯಕ್ಷ
ಎಚ್
ಬಿ
ಮಂಜಪ್ಪ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಸಿದ್ದಾರೆ.
Comments
English summary
Congress activists of Davangere and Chitradurga staged protest condemning the arrest of Former minister DK Shivakumar.