ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರಪ್ರದೇಶಕ್ಕೆ ಹೋಗಲು ಸಜ್ಜಾಗಿದ್ದ ವ್ಯಾಪಾರಿಗಳನ್ನು ತಡೆದ ಪೊಲೀಸರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 16: ಉತ್ತರಪ್ರದೇಶದಿಂದ ವ್ಯಾಪಾರಕ್ಕಾಗಿ ನಗರಕ್ಕೆ ಬಂದ ಪಾನಿಪೂರಿ ವ್ಯಾಪಾರಿಗಳು ತವರು ರಾಜ್ಯಕ್ಕೆ ಈರುಳ್ಳಿ ಲಾರಿಯಲ್ಲಿ ಹೋಗುವುದಕ್ಕೆ ಸಜ್ಜಾಗಿದ್ದ ವೇಳೆ ಪೊಲೀಸರು ಶಿವಪ್ಪಯ್ಯ ಸರ್ಕಲ್‌ನಲ್ಲಿ ತಡೆಹಿಡಿದಿದ್ದಾರೆ.

Recommended Video

ಹೇಳಿದ ಕೆಲ್ಸ ಮಾಡಿಲ್ಲ‌ ಅಂದ್ರೆ‌ ಸಸ್ಪೆಂಡ್ ಮಾಡ್ತೀನಿ | BC Patil Warning to Officers

ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಸಿದ್ದರೂ ಇವರಿಗೆ ಅನುಮತಿ ಸಿಕ್ಕಿರಲಿಲ್ಲ. ಇಲ್ಲಿನ ಶಿವಪ್ಪಯ್ಯ ವೃತ್ತದ ಬಳಿಯ ಖಾಲಿ ಜಾಗದಲ್ಲಿ ಉತ್ತರಪ್ರದೇಶದ ಪ್ರಯಾಗಕ್ಕೆ ಹೋಗುತ್ತಿದ್ದ 70ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಇಂದು ಪೊಲೀಸರು ತಡೆದಿದ್ದಾರೆ. ನಗರದಲ್ಲಿ ಪಾನಿಪೂರಿ ಹಾಗೂ ಟೀ ಮಾರಾಟ ಮಾಡುವ ಸುಮಾರು 120ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ವೇಳೆ ಉತ್ತರ ಪ್ರದೇಶದಿಂದ ಈರುಳ್ಳಿ ಲಾರಿಯೊಂದು ದಾವಣಗೆರೆಗೆ ಬಂದಿರುವುದು ಗೊತ್ತಾಗಿದೆ.

 ಬೆಣ್ಣೆ ನಗರಿ ಜನರ ನಿದ್ದೆಗೆಡಿಸಿದೆ ಬೆಳ್ಳುಳ್ಳಿ ವ್ಯಾಪಾರಿ ಕೊರೊನಾ ಕೇಸ್ ಬೆಣ್ಣೆ ನಗರಿ ಜನರ ನಿದ್ದೆಗೆಡಿಸಿದೆ ಬೆಳ್ಳುಳ್ಳಿ ವ್ಯಾಪಾರಿ ಕೊರೊನಾ ಕೇಸ್

ಆ ಚಾಲಕನ ಜೊತೆ ಇಲ್ಲಿನ ಪಾನಿಪೂರಿ ಮಾರಾಟ ಮಾಡುವ ವ್ಯಕ್ತಿ ವ್ಯವಹಾರ ಕುದುರಿಸಿದ್ದಾನೆ. ಒಬ್ಬರಿಗೆ ₹2 ಸಾವಿರ ನೀಡಿದರೆ ನಾಲ್ಕರಿಂದ 5 ಮಂದಿಯನ್ನು ಕರೆದೊಯ್ಯುತ್ತೇನೆ ಎಂದು ಚಾಲಕ ಹೇಳಿದ್ದಾನೆ. ಒಬ್ಬರಿಂದ ಮತ್ತೊಬ್ಬರಿಗೆ ವಿಷಯ ತಿಳಿದು 70ಕ್ಕೂ ಹೆಚ್ಚು ಮಂದಿ ತೆರಳಲು ಅನುವಾದ ವಿಷಯ ತಿಳೀದು ಪೊಲೀಸರು ತಡೆದಿದ್ದಾರೆ.

Police Stopped Merchants Who Were Ready To Go For Uttara Pradesh

ಊಟ ತಿಂಡಿ ಇಲ್ಲ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಗೊಂಡಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಇದರಿಂದಾಗಿ ಊಟ ತಿಂಡಿಗೂ ಪರದಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. 'ನನ್ನ ಮಗನಿಗೆ ಹೃದಯ ಸಮಸ್ಯೆ ಇದ್ದು, ಆತನಿಗೆ ಚಿಕಿತ್ಸೆಗೆ ಕೊಡಿಸಲು ಹಣವಿಲ್ಲದಂತಾಗಿದೆ. ನಮಗೆ ತುಂಬಾ ಸಮಸ್ಯೆ ಇದೆ. ನಾವು ಊರಿಗೆ ಹೋಗಲೇಬೇಕಾಗಿದೆ' ಎಂದು ಹೇಳಿದ್ದಾರೆ ವ್ಯಾಪಾರಿ ಅಜಯ್ ‌ಕುಮಾರ್. 'ಸೇವಾಸಿಂಧುವಿನಲ್ಲಿ ಪಾನಿಪೂರಿ ಮಾರಾಟಗಾರರು ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕಿದೆ' ಎಂದು ಪೇದೆಯೊಬ್ಬರು ತಿಳಿಸಿದ್ದಾರೆ.

English summary
Police have stopped more than 70 panipuri merchants who were getting ready to return to uttara pradesh without permission,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X