ಡಿ.ಕೆ ಶಿವಕುಮಾರ್ ಹೊಡೆತಕ್ಕೆ ಸಿದ್ದರಾಮಯ್ಯ ತಣ್ಣಗಾಗಿದ್ದಾರೆ-ಎಂ.ಪಿ ರೇಣುಕಾಚಾರ್ಯ
ದಾವಣಗೆರೆ, ಜನವರಿ 20: ಬಿಜೆಪಿ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಓರ್ವ ಗೂಂಡಾ. ಕಾಂಗ್ರೆಸ್ ಬಾಯಿಹರುಕರ ಪಕ್ಷ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ಟಿಪ್ಪು ಜಯಂತಿ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರ ಕೊಡುವುದು ಒಂದೇ, ಭಯೋತ್ಪಾದನೆಯೂ ಒಂದೇ. ಹಾಗಾಗಿ ಜನರು ಬಿಜೆಪಿ ಪರ ಇದ್ದಾರೆ. 150 ಸ್ಥಾನಗಳಲ್ಲಿ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನರ್ಸಿಂಗ್ ಮರುಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಡಿ.ಕೆ ಶಿವಕುಮಾರ್ ಹೊಡೆತಕ್ಕೆ ಸಿದ್ದರಾಮಯ್ಯ ತಣ್ಣಗಾಗಿದ್ದಾರೆ
ಮಾತು ಮುಂದುವರಿಸಿದ ಅವರು, ಕಾಂಗ್ರೆಸ್ ಮುಳುಗಿರುವ ಹಡಗು. ಮುಖ್ಯಮಂತ್ರಿ ನಾನಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರಿಬ್ಬರ ಸಂಘರ್ಷದಿಂದ ಕಾಂಗ್ರೆಸ್ನಲ್ಲಿ ನಾಯಕತ್ವ ಇಲ್ಲದಂತಾಗಿದೆ. ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಡಿ.ಕೆ ಶಿವಕುಮಾರ್ ಹೊಡೆತಕ್ಕೆ ಸಿದ್ದರಾಮಯ್ಯರಂಥ ಹಿರಿಯರು ತಣ್ಣಗಾಗಿದ್ದಾರೆ. ಸಿದ್ದರಾಮೋತ್ಸವದಲ್ಲಿ ರಾಹುಲ್ ಗಾಂಧಿ ಮುಂದೆ ತಬ್ಬಿಕೊಂಡರು. ಬೆಂಗಳೂರಿನಲ್ಲಿ ಡೈವೋರ್ಸ್ ತೆಗೆದುಕೊಂಡರು. ರಾಜಕಾರಣದಲ್ಲಿ ರಾಹುಲ್ ಗಾಂಧಿ ಎಳಸು. ಓಡು ಎಂದರೆ ಓಡುತ್ತಾರೆ, ಅಪ್ಪಿಕೊಳ್ಳಿ ಎಂದರೆ ಅಪ್ಪಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ
ಡಿ. ಕೆ. ಶಿವಕುಮಾರ್ ಜೈಲಿಗೆ ಹೋಗಿ ಬಂದವರು, ಅಧಿಕಾರ ಕೊಟ್ಟು ನೋಡಿ ಎನ್ನುತ್ತಾರೆ. ಅಧಿಕಾರಕ್ಕೆ ಬರಲ್ಲ. ಎಲ್ಲಿಂದ ತನಿಖೆ ಮಾಡುತ್ತಾರೆ. ಜನಾದೇಶ ನಮ್ಮ ಪರ ಬರುತ್ತದೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ಗೆ ಮತ ಕೇಳುವ ನೈತಿಕತೆ ಇಲ್ಲ. ಅಭಿವೃದ್ಧಿ ಮತ್ತು ಹಿಂದುತ್ವದಡಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ
ಜನರು
ಜೆಡಿಎಸ್
ನೋಡಿ
ಆಗಿದೆ.
ಕೆಲ
ಕ್ಷೇತ್ರ
ಬಿಟ್ಟರೆ
ಬೇರೆ
ಕಡೆಗಳಲ್ಲಿ
ವಿಳಾಸ
ಇಲ್ಲ.
ಕುಟುಂಬದ
ಪಕ್ಷ.
ದೇವೇಗೌಡರು,
ಕುಮಾರಸ್ವಾಮಿ,
ರೇವಣ್ಣ,
ಅನಿತಾ
ಕುಮಾರಸ್ವಾಮಿ,
ಭವಾನಿ
ರೇವಣ್ಣ,
ನಿಖಿಲ್
ಕುಮಾರಸ್ವಾಮಿ,
ಪ್ರಜ್ವಲ್
ರೇವಣ್ಣ
ಸೇರಿದಂತೆ
ಕುಟುಂಬದವರೇ
ಸ್ಪರ್ಧೆ
ಮಾಡುತ್ತಾರೆ.
ತುಮಕೂರಿನಲ್ಲಿ
ದೇವೇಗೌಡರು
ಸೋಲು
ಅನುಭವಿಸಬೇಕಾಯಿತು.
ಕುಮಾರಸ್ವಾಮಿ
ಮಗನೂ
ಸೋತರು.
ಜೆಡಿಎಸ್
ಸಂಪೂರ್ಣ
ನೆಲಕಚ್ಚಿದೆ
ಎಂದರು.
ಯಾರೂ ಅಸಂಬದ್ಧವಾಗಿ ಮಾತನಾಡಬಾರದು
ಬಿಜೆಪಿಯ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೆ ಜೆಡಿಎಸ್ ಪಕ್ಷಕ್ಕೆ ಹೋಗಲ್ಲ. ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದಿದ್ದಾರೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ತಿಳಿಸಿದರು.
ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಸಮರದ ಕುರಿತಂತೆ ಹೈಕಮಾಂಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಯಾರೂ ಅಸಂಬದ್ಧವಾಗಿ, ವಿರುದ್ಧವಾಗಿ ಮಾತನಾಡಬಾರದು ಎಂಬ ಸೂಚನೆ ಕೊಟ್ಟಿದೆ. ಇದಕ್ಕೆ ಏನು ಪ್ರತಿಕ್ರಿಯೆ ನೀಡಲ್ಲ ಎಂದರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ
ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಸಿಎಂ ಆಗಿದ್ದಾಗ ಯಡಿಯೂರಪ್ಪರು ಜನಪರ ಕೆಲಸ ಮಾಡಿದ್ದಾರೆ. ರಾಜ್ಯ ಕಂಡ ಅತ್ಯಂತ ಪ್ರಭಾವಿ ನಾಯಕ ಯಡಿಯೂರಪ್ಪ. ಯಾರೂ ಸಹ ಯಡಿಯೂರಪ್ಪ ಅವರನ್ನು ಬೇಡ ಎಂದಿಲ್ಲ. ಅವರೂ ಬೇಸರವಾಗಿಲ್ಲ. ಮೋದಿ ಮತ್ತು ಯಡಿಯೂರಪ್ಪರು ಚರ್ಚೆ ಮಾಡಿದ್ದಾರೆ. 150 ಸ್ಥಾನ ತಂದೇ ತರುತ್ತೇನೆ ಎಂಬ ಸಂಕಲ್ಪ ಮಾಡಿರುವ ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಉದ್ಭವಿಸದು ಎಂದ ಅವರು, ಬಿ. ವೈ. ವಿಜಯೇಂದ್ರ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.