ಜಗಳೂರು; ವರ್ಷದಲ್ಲಿ ಮೂರನೇ ಬಾರಿ ಕೋಡಿ ಬಿದ್ದ ಅಣಜಿ ಕೆರೆ, ಮನೆಗಳಿಗೆ ನುಗ್ಗಿದ ನೀರು
ದಾವಣಗೆರೆ, ಅಕ್ಟೋಬರ್, 11: ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರೆದಿದ್ದಾನೆ. ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕೇವಲ ಒಂದೇ ವರ್ಷದಲ್ಲಿ ಮೂರನೇ ಬಾರಿ ಅಣಜಿ ಕೆರೆ ಕೋಡಿ ಬಿದ್ದಿದೆ. ಅಣಜಿ ಕೆರೆಯು ಇತಿಹಾಸದಲ್ಲಿಯೇ ಮೂರನೇ ಬಾರಿ ತುಂಬಿದ್ದರೂ ರೈತರ ಮುಖದಲ್ಲಿ ಮಂದಹಾಸ ಮೂಡಿಲ್ಲ. ಜಮೀನುಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ರೈತರು ಕಂಗಾಲಾಗಿದ್ದಾರೆ.
ಅಣಜಿ ಕೆರೆಯು ವಿಸ್ತಾರವಾದ ಕೆರೆಯಾಗಿದೆ. ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಈ ಕೆರೆ ಆಧಾರವಾಗಿದೆ. ಇದೀಗ ಮತ್ತೆ ಕೋಡಿ ಬಿದ್ದಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ. ಜನಜೀವನ ಅವ್ಯಸ್ತವಾಗಿದ್ದು, ವಾಹನಗಳ ಓಡಾಟವೂ ಸಂಪೂರ್ಣ ಸ್ತಬ್ಧಗೊಂಡಿದೆ. ಕೆರೆಯ ನೀರು ತೋಟ ಹಾಗೂ ಜಮೀನುಗಳಿಗೆ ನುಗ್ಗಿದ ಪರಿಣಾಮ ಬೆಳೆದ ಬೆಳೆ ನೀರುಪಾಲಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ದಾವಣಗೆರೆಗೆ ನೀರು ಪೂರೈಕೆ ಮಾಡುವ ತೂಗು ತೊಟ್ಟಿಲು ಕುಸಿತ: ಜಿಲ್ಲಾಧಿಕಾರಿ ಭರವಸೆ ಏನು?
ಹೆಬ್ಬಾಳು
ಕೆರೆಯಲ್ಲಿ
ನೀರಿನ
ಮಟ್ಟ
ಹೆಚ್ಚಳ
ರಾಷ್ಟ್ರೀಯ
ಹೆದ್ದಾರಿಯಿಂದ
ಗುಡಾಳು
ಮತ್ತು
ಅಣಜಿ
ಗ್ರಾಮಕ್ಕೆ
ಹೋಗುವ
ರಸ್ತೆಗೆ
ಹೊಂದಿಕೊಂಡಿರುವ
ಹೆಬ್ಬಾಳು
ಕೆರೆ
ಕೋಡಿ
ಬಿದ್ದಿದೆ.
ಪರಿಣಾಮ
ರಸ್ತೆ
ಮೇಲೆ
ನೀರು
ಹರಿಯುತ್ತಿರುವುದರಿಂದ
ವಾಹನ
ಸಂಚಾರಕ್ಕೆ
ಅಡಚಣೆ
ಉಂಟಾಗಿದೆ.
ಇದರಿಂದಾಗಿ
ಜನರು
ಓಡಾಡಲು
ಹರಸಾಹಸ
ಪಡುವಂತಾಗಿದೆ.
ನೀರಿನ
ಪ್ರಮಾಣ
ಏರಿಕೆ
ಆಗುತ್ತಿರುವುದರಿಂದ
ಅಲ್ಲಿನ
ಜನರ
ಆತಂಕಕ್ಕೀಡಾಗಿದ್ದಾರೆ.
ಸ್ಥಳಕ್ಕೆ
ಜಿಲ್ಲಾ
ಪಂಚಾಯಿತಿ
ಮಾಜಿ
ಸದಸ್ಯ
ಕೆ.ಎಸ್.
ಬಸವಂತಪ್ಪ
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ.
ನಂತರ
ಜನರ
ಸಮಸ್ಯೆ
ಆಲಿಸಿದ
ಅವರು
ಕೂಡಲೇ
ಅಧಿಕಾರಿಗಳು
ಸ್ಥಳಕ್ಕೆ
ಭೇಟಿ
ನೀಡಿ
ಪರ್ಯಾಯ
ವ್ಯವಸ್ಥೆ
ಕಲ್ಪಿಸಬೇಕು
ಎಂದಿದ್ದಾರೆ.
ತುಂಬಿ
ಹರಿಯುತ್ತಿರುವ
ಹಳ್ಳ,
ಕೊಳ್ಳಗಳು
ನಿರಂತರವಾಗಿ
ಸುರಿಯುತ್ತಿರುವ
ಧಾರಾಕಾರ
ಮಳೆಯಿಂದಾಗಿ
ಹಳ್ಳಕೊಳ್ಳಗಳು
ಮೈದುಂಬಿ
ಹರಿಯುತ್ತಿದ್ದು,
ಅಣಜಿ
ಗ್ರಾಮದ
ಹಲವು
ಮನೆಗಳು
ಜಲಾವೃತವಾಗಿವೆ.
ಮನೆಯಲ್ಲಿದ್ದ
ದವಸ,
ಧಾನ್ಯಗಳು
ಕೂಡ
ನೀರಿನಲ್ಲಿ
ಕೊಚ್ಚಿಕೊಂಡು
ಹೋಗಿವೆ.
ಇನ್ನು
ಕೆಲವು
ಮನೆಗಳು
ಬಿದ್ದು
ಹೋಗಿವೆ.
ಗ್ರಾಮಕ್ಕೆ
ಬಿದ್ದಿರುವ
ಮನೆಗಳಿಗೆ
5
ಲಕ್ಷ
ರೂಪಾಯಿ
ಪರಿಹಾರ
ಕೂಡಲೇ
ಬಿಡುಗಡೆ
ಮಾಡಬೇಕು
ಎಂದು
ತಹಶೀಲ್ದಾರ್
ಅವರಿಗೆ
ಸ್ಥಳೀಯರು
ಆಗ್ರಹಿಸಿದ್ದಾರೆ.
ಬೆಳೆಗಳು
ನೀರುಪಾಲಾಗಿದ್ದು,
ಜಮೀನುಗಳಿಗೆ
ಭೇಟಿ
ನೀಡಿ
ಅಧಿಕಾರಿಗಳು
ಪರಿಶೀಲನೆ
ಮಾಡಬೇಕು.
ಜೊತೆಗೆ
ಪರಿಹಾರ
ಕೊಡಿಸಲು
ಆದಷ್ಟು
ಬೇಗ
ಕ್ರಮ
ಕೈಗೊಳ್ಳಬೇಕು
ಎಂದು
ಒತ್ತಾಯಿಸಿದ್ದಾರೆ.
ರೈತರಿಗೆ
ಪರಿಹಾರ
ಒದಗಿಸುಂತೆ
ಆಗ್ರಹ
ಹುಣಸೆಕಟ್ಟೆ,
ಮಂಡಲೂರು,
ಕಾಟಿಹಳ್ಳಿ
ಗ್ರಾಮಗಳಲ್ಲಿ
ಮಳೆಯಿಂದಾಗಿ
ಕೆಲವು
ಮನೆಗಳು
ಬಿದ್ದಿವೆ.
ನೀರು
ನುಗ್ಗಿ
ಬೆಳೆಗಳಿಗೆ
ಹಾನಿಯಾಗಿದೆ.
ಹಳ್ಳ-ಕೊಳ್ಳಗಳು
ಮೈದುಂಬಿ
ಹರಿಯುತ್ತಿದ್ದು,
ಮಂಡಲೂರು
ಗ್ರಾಮದ
ಅಂಗನವಾಡಿ
ಕಟ್ಟಡ
ಬೀಳುವ
ಸ್ಥಿತಿಯಲ್ಲಿದೆ.
ಇನ್ನು
ಕೆಲವು
ಮನೆಗಳು
ಬೀಳುವ
ಹಂತದಲ್ಲಿವೆ.
ಮೆಕ್ಕೆಜೋಳ,
ಅಡಿಕೆ,
ತರಕಾರಿ
ಬೆಳೆಗಳು
ಮಳೆಯಿಂದಾಗಿ
ಜಲಾವೃತವಾಗಿವೆ.
ಕೂಡಲೇ
ರೈತರಿಗೆ
ಪರಿಹಾರ
ಒದಗಿಸಬೇಕು
ಎಂದು
ತಹಶೀಲ್ದಾರ್
ಮತ್ತು
ಸರ್ಕಾರವನ್ನು
ಸ್ಥಳೀಯ
ಬಸವಂತಪ್ಪ
ಆಗ್ರಹಿಸಿದ್ದಾರೆ.