ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ
ಚಿತ್ರದುರ್ಗ, ಆಗಸ್ಟ್ 28 : ಕಾಡಾನೆ ದಾಳಿಯಿಂದಾಗಿ ಗರ್ಭಿಣಿ ಮೃಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಹಿರಿಯೂರು ತಾಲೂಕಿನ ಬಳಘಟ್ಟ ಗ್ರಾಮದ ಬಳಿ ಶನಿವಾರ ಸಂಜೆ ಕಾಡಾನೆ ಕಾಣಿಸಿಕೊಂಡಿತ್ತು. ಭಾನುವಾರ ಬೆಳಗ್ಗೆ 7 ತಿಂಗಳ ಗರ್ಭಿಣಿ ತಿಮ್ಮಕ್ಕ (22) ಅವರ ಮೇಲೆ ದಾಳಿ ಮಾಡಿದ ಆನೆ ಅವರನ್ನು ಕೊಂದು ಹಾಕಿದೆ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]

ಬಳಘಟ್ಟದಿಂದ ಮಾರಿಕಣಿವೆಯತ್ತ ಕಾಡಾನೆ ಸಾಗಿದ್ದು ಮಾರ್ಗದಲ್ಲಿ ಭರಮಗಿರಿ ಬಳಿ ನೀಲಮ್ಮ ಎಂಬುವವರ ಮೇಲೆ ದಾಳಿ ಮಾಡಿದೆ. ನೀಲಮ್ಮ ಅವರ ಕಾಲಿಗೆ ಗಾಯವಾಗಿದ್ದು, ಖಾಸ್ಪಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ರಂಪಾಟ]
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications