ಚಿತ್ರದುರ್ಗದ ಕಾದಂಬರಿಕಾರನ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ
ಚಿತ್ರದುರ್ಗ, ಆಗಸ್ಟ್ 18: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಲಸಿಕೆ ಪ್ರಯೋಗ ಭರದಿಂದ ಸಾಗುತ್ತಿದೆ.
Recommended Video
ಕೊರೊನಾ ವೈರಸ್ ಗೆ ಭಾರತದಲ್ಲಿ ಸಹ ವ್ಯಾಕ್ಸಿನ್ ಕಂಡುಹಿಡಿಯುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕಾದಂಬರಿಕಾರ ಡಿ.ಸಿ ಪಾಣಿ ಅವರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಡಿ.ಸಿ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಲಸಿಕೆ ಪಡೆದುಕೊಂಡು ಬಂದಿದ್ದಾರೆ.
ಡಿ.ಸಿ ಪಾಣಿಯವರಿಗೆ ಡಾ.ಪಾರಿತೋಷ್ ವಿ. ದೇಸಾಯಿ ಅವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿರುವುದು ವಿಶೇಷವಾಗಿದೆ. ಈ ಕಾದಂಬರಿಕಾರನ ಮೇಲೆ ಮಾಡಿರುವ ಪ್ರಯೋಗ ಯಶಸ್ವಿಯಾಗುತ್ತಾ ನಡೆಯುತ್ತಿದೆ ಎನ್ನಬಹುದು.

ಡಿ.ಸಿ ಪಾಣಿಯವರು ಆಗಸ್ಟ್ 03 ರಂದು ಪಾಲ್ಗೊಂಡಿದ್ದರು
ಹೈದರಾಬಾದ್ ನ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ಸಂಸ್ಥೆ ಈ ಲಸಿಕೆ ಸಿದ್ಧಪಡಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರಯೋಗ ನಡೆಸುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಸಹ ಪ್ರಯೋಗ ನಡೆಸಿದೆ. ಡಿ.ಸಿ ಪಾಣಿಯವರು ಆಗಸ್ಟ್ 03 ರಂದು ಮೊದಲ ಹಂತದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ನಂತರ ಜುಲೈ 23 ಹಾಗೂ ಆಗಸ್ಟ್ 01 ರಂದು ಬೆಳಗಾವಿಯಿಂದ ಕರೆ ಬಂದಿದ್ದು, ರಕ್ತದೊತ್ತಡ, ಹೃದಯ ಬಡಿತ, ಮೂತ್ರ ಹಾಗೂ ರಕ್ತಪರೀಕ್ಷೆ ಮಾಡಿದರು. ಸಂಪೂರ್ಣವಾಗಿ ಆರೋಗ್ಯ ಇದ್ದರಿಂದ ಟ್ರಯಲ್ ಗೆ ಆಯ್ಕೆ ಆಗುವ ಮೂಲಕ ಲಸಿಕೆ ಪಡೆದುಕೊಂಡು ಯಶಸ್ವಿಯಾಗಿ ಹೊರ ಬಂದಿದ್ದಾರೆ.

ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ
ವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾಗಿರುವ ಡಿ.ಸಿ ಪಾಣಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲೇ ಲಸಿಕೆ ಉತ್ಪಾದನೆಯಾಗುವ ಮೂಲಕ ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ ಎಂಬ ಉದ್ದೇಶದಿಂದ ಈ ಪ್ರಯೋಗಕ್ಕೆ ಒಳಗಾಗಿದ್ದೇನೆ. ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ ಎಂದರು.

ತಡವಾದರೂ ನಮ್ಮ ದೇಶದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ
ಅಲ್ಲದೆ ಈ ಪ್ರಾಯೋಗಿಕ ಲಸಿಕೆ ಯಶಸ್ವಿಯಾದರೆ ನಮ್ಮ ದೇಶಕ್ಕೆ ಬಂದಿರುವ ಮಹಾಮಾರಿ ಕೊರೊನಾ ವೈರಸ್ ಕಂಟಕ ದೂರವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಒಂದೆರಡು ತಿಂಗಳು ತಡವಾದರೂ ಸಹ ನಮ್ಮ ದೇಶದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ. ಯಾರೂ ಕೂಡ ಕೊರೊನಾ ಸೋಂಕಿಗೆ ಭಯಪಡುವ ಅಗತ್ಯವಿಲ್ಲ, ಧೈರ್ಯವಾಗಿ ಎದುರಿಸಲು ಸಿದ್ಧವಾಗಿರಬೇಕು ಎಂದು ತಿಳಿಸಿದರು.

ಲಸಿಕೆ ಯಶಸ್ವಿಯಾಗಿ ಪ್ರಯೋಗವಾಗಲಿದೆ
61 ವರ್ಷದ ನನ್ನ ಮೇಲೆ ಪ್ರಯೋಗ ನಡೆದಿದ್ದು, ನಾನು ಆರೋಗ್ಯವಾಗಿ ಇದ್ದೇನೆ. ಲಸಿಕೆ ಯಶಸ್ವಿಯಾಗಿ ಪ್ರಯೋಗವಾಗಲಿದೆ. ವಯಸ್ಸಾದ ನನ್ನ ಮೇಲೆ ಪ್ರಯೋಗ ನಡೆದಿದೆ, ಗಟ್ಟಿಮುಟ್ಟಾಗಿರುವ ಯುವಕರು ಸಹ ಧೈರ್ಯವಾಗಿ ಎದುರಿಸಲು ಸಿದ್ಧವಾಗಿರಬೇಕು ಯಾರೂ ಸಹ ಧೃತಿಗೆಡುವಂತಿಲ್ಲ ಎಂದು ಕೊರೊನಾ ಸೋಂಕಿತರಿಗೆ ಸಂದೇಶ ನೀಡುವ ಮೂಲಕ ಅಭಿಪ್ರಾಯಪಟ್ಟರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications