ಏಳು ಸುತ್ತಿನ ಕೋಟೆಯ ಚಿತ್ರದುರ್ಗ ಸುದ್ದಿಯಲ್ಲಿ!
ಸ್ವಚ್ಛ ಭಾರತದ ಅಂಗವಾಗಿ ಗುರುವಾರ ದೇಶದ ಕೆಲ ನಗರ, ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಸಲಾಯಿತು.
ಚಿತ್ರದುರ್ಗ, ಜನವರಿ 19: ಒಂದು ಕಡೆ ಐತಿಹಾಸಿಕ ಮುರುಘಾಮಠ, ಮತ್ತೊಂದೆಡೆ ಎಪಿಎಂಸಿ ಮಾರುಕಟ್ಟೆ. ನಡುವಿನ ಪ್ರದೇಶ ಇಲ್ಲಿನ ರೈಲ್ವೇ ನಿಲ್ದಾಣದ್ದು.
ಅಂದಹಾಗೆ, ಈ ರೈಲ್ವೇ ನಿಲ್ದಾಣ ಗುರುವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ಅದಕ್ಕೆ ಕಾರಣ, ಇಲ್ಲಿ ನಡೆದ ಸ್ವಚ್ಛ ಭಾರತ ಸರ್ವೇಕ್ಷಣೆ.

ರೈಲ್ವೇ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂಥ ಹೇಳಿಕೊಳ್ಳುವಂಥ ಸ್ವಚ್ಛತೆಯೇನಿಲ್ಲ. ನಿಲ್ದಾಣದಲ್ಲೂ ಅಷ್ಟಾಗಿ ಜನಸಂದಣಿ ಇರುವುದಿಲ್ಲ. ಚಿತ್ರದುರ್ಗದ ಜನ ಬಹುತೇಕ ಆಶ್ರಯಿಸುವುದು ಖಾಸಗಿ, ಸರ್ಕಾರಿ ಬಸ್ ಗಳನ್ನೇ.

ಹಾಗಾಗಿ, ಚಿತ್ರದುರ್ಗದ ಜನರಲ್ಲೇ ರೈಲ್ವೇ ಸ್ಟೇಷನ್ ಅನ್ನು ನೋಡಿದವರು, ಅದರೊಳಗೆ ಅಡ್ಡಾಡಿದವರು ಕಡಿಮೆಯೇ. ಹಾಗಾಗಿಯೇ ಇಲ್ಲಿನ ಸುತ್ತಿಲಿನ ಪ್ರದೇಶದಲ್ಲಿ ಅಲ್ಲಲ್ಲಿ ಕೊಳಚೆ, ಅನವಶ್ಯಕ ಜಾಲಿಮುಳ್ಳಿನ ಗಿಡ, ಕಸಗಳಿಂದ ತುಂಬಿದೆ.

ಹಾಗಾಗಿಯೇ, ಕೇಂದ್ರ ಸ್ವಚ್ಛ ಭಾರತ ಅಭಿಯಾನದ ವತಿಯಿಂದ ಗುರುವಾರ ಅಲ್ಲಿ, ಸ್ವಚ್ಛ ಸರ್ವೇಕ್ಷಣೆ ನಡೆಯಿತು. ಇದರ ಅಂಗವಾಗಿ, ರೈಲ್ವೇ ನಿಲ್ದಾಣದ ಪ್ರಾಂಗಣ, ಸುತ್ತಲಿನ ಪ್ರದೇಶಗಳನ್ನು ಕಾರ್ಯಕರ್ತರು ಶುಚಿಗೊಳಿಸಿದರು. ಅದರ ಫಲವಾಗಿ, ರೈಲ್ವೇ ಸ್ಟೇಷನ್ ಫಳಫಳಿಸುತ್ತಿದೆ.

ಇವಿಷ್ಟೇ ಅಲ್ಲ, ಬಸ್ ಸ್ಟಾಂಡ್ ಗಳು, ಅಲ್ಲಿನ ಶೌಚಾಲಯಗಳಲ್ಲಿ ಈ ಅಭಿಯಾನ ನಡೆಸಲಾಯಿತು.
ಅತ್ತ, ದಕ್ಷಿಣ ಕನ್ನಡದ ಉಡುಪಿ, ಮೈಸೂರು, ಕಟಕ್, ವಿಶಾಖಪಟ್ಟಣ, ಸೂರತ್ ಮುಂತಾದ ನಗರಗಳಲ್ಲಿ ಈ ಸ್ವಚ್ಛ ಸರ್ವೇಕ್ಷಣೆ ನಡೆಯಿತು.
(ಚಿತ್ರಗಳು: ಸ್ವಚ್ಛ ಸರ್ವೇಕ್ಷಣೆಯ ಟ್ವಿಟರ್ ಖಾತೆಯಿಂದ)
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications