ಏಳು ಸುತ್ತಿನ ಕೋಟೆಯ ಚಿತ್ರದುರ್ಗ ಸುದ್ದಿಯಲ್ಲಿ!
ಸ್ವಚ್ಛ ಭಾರತದ ಅಂಗವಾಗಿ ಗುರುವಾರ ದೇಶದ ಕೆಲ ನಗರ, ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಸಲಾಯಿತು.
ಚಿತ್ರದುರ್ಗ, ಜನವರಿ 19: ಒಂದು ಕಡೆ ಐತಿಹಾಸಿಕ ಮುರುಘಾಮಠ, ಮತ್ತೊಂದೆಡೆ ಎಪಿಎಂಸಿ ಮಾರುಕಟ್ಟೆ. ನಡುವಿನ ಪ್ರದೇಶ ಇಲ್ಲಿನ ರೈಲ್ವೇ ನಿಲ್ದಾಣದ್ದು.
ಅಂದಹಾಗೆ, ಈ ರೈಲ್ವೇ ನಿಲ್ದಾಣ ಗುರುವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತು. ಅದಕ್ಕೆ ಕಾರಣ, ಇಲ್ಲಿ ನಡೆದ ಸ್ವಚ್ಛ ಭಾರತ ಸರ್ವೇಕ್ಷಣೆ.

ರೈಲ್ವೇ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂಥ ಹೇಳಿಕೊಳ್ಳುವಂಥ ಸ್ವಚ್ಛತೆಯೇನಿಲ್ಲ. ನಿಲ್ದಾಣದಲ್ಲೂ ಅಷ್ಟಾಗಿ ಜನಸಂದಣಿ ಇರುವುದಿಲ್ಲ. ಚಿತ್ರದುರ್ಗದ ಜನ ಬಹುತೇಕ ಆಶ್ರಯಿಸುವುದು ಖಾಸಗಿ, ಸರ್ಕಾರಿ ಬಸ್ ಗಳನ್ನೇ.

ಹಾಗಾಗಿ, ಚಿತ್ರದುರ್ಗದ ಜನರಲ್ಲೇ ರೈಲ್ವೇ ಸ್ಟೇಷನ್ ಅನ್ನು ನೋಡಿದವರು, ಅದರೊಳಗೆ ಅಡ್ಡಾಡಿದವರು ಕಡಿಮೆಯೇ. ಹಾಗಾಗಿಯೇ ಇಲ್ಲಿನ ಸುತ್ತಿಲಿನ ಪ್ರದೇಶದಲ್ಲಿ ಅಲ್ಲಲ್ಲಿ ಕೊಳಚೆ, ಅನವಶ್ಯಕ ಜಾಲಿಮುಳ್ಳಿನ ಗಿಡ, ಕಸಗಳಿಂದ ತುಂಬಿದೆ.

ಹಾಗಾಗಿಯೇ, ಕೇಂದ್ರ ಸ್ವಚ್ಛ ಭಾರತ ಅಭಿಯಾನದ ವತಿಯಿಂದ ಗುರುವಾರ ಅಲ್ಲಿ, ಸ್ವಚ್ಛ ಸರ್ವೇಕ್ಷಣೆ ನಡೆಯಿತು. ಇದರ ಅಂಗವಾಗಿ, ರೈಲ್ವೇ ನಿಲ್ದಾಣದ ಪ್ರಾಂಗಣ, ಸುತ್ತಲಿನ ಪ್ರದೇಶಗಳನ್ನು ಕಾರ್ಯಕರ್ತರು ಶುಚಿಗೊಳಿಸಿದರು. ಅದರ ಫಲವಾಗಿ, ರೈಲ್ವೇ ಸ್ಟೇಷನ್ ಫಳಫಳಿಸುತ್ತಿದೆ.

ಇವಿಷ್ಟೇ ಅಲ್ಲ, ಬಸ್ ಸ್ಟಾಂಡ್ ಗಳು, ಅಲ್ಲಿನ ಶೌಚಾಲಯಗಳಲ್ಲಿ ಈ ಅಭಿಯಾನ ನಡೆಸಲಾಯಿತು.
ಅತ್ತ, ದಕ್ಷಿಣ ಕನ್ನಡದ ಉಡುಪಿ, ಮೈಸೂರು, ಕಟಕ್, ವಿಶಾಖಪಟ್ಟಣ, ಸೂರತ್ ಮುಂತಾದ ನಗರಗಳಲ್ಲಿ ಈ ಸ್ವಚ್ಛ ಸರ್ವೇಕ್ಷಣೆ ನಡೆಯಿತು.
(ಚಿತ್ರಗಳು: ಸ್ವಚ್ಛ ಸರ್ವೇಕ್ಷಣೆಯ ಟ್ವಿಟರ್ ಖಾತೆಯಿಂದ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications