ಮಗನ ಕನಸಿಗೆ ಹೆಗಲುಕೊಟ್ಟ ಈ ಅಮ್ಮನ ಕಥೆ ಕಟುಕನಿಗೂ ಕಣ್ಣೀರು ತರುತ್ತದೆ
ಚಿತ್ರದುರ್ಗ, ನವೆಂಬರ್ 29: ಹುಟ್ಟುತ್ತಲೇ ಮಗ ಅಂಗವಿಕಲ. ಮೂರು ವರ್ಷದ ಹಿಂದೆ ಗಂಡ ಕೂಡ ಇಲ್ಲವಾದರು. ಬಗಲಿಗೆ ಇರುವ ಮೂರು ಮಕ್ಕಳ ಹೊಟ್ಟೆ ತುಂಬಿಸಲು ಜೊತೆಗಿರುವುದು ಕೂಲಿ ನಾಲಿ ಕೆಲಸ ಮಾತ್ರ. ಆದರೆ ಈ ಎಲ್ಲ "ಇಲ್ಲ"ಗಳ ನಡುವೆಯೂ ಈ ತಾಯಿ ತನ್ನ ಮಗನಿಗಾಗಿ ತುಡಿಯುತ್ತಿರುವ ರೀತಿ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.
ತನ್ನ ಅಂಗವಿಕಲ ಮಗನಿಗಾಗಿ, ಆತನ ಓದುವ ಕನಸನ್ನು ಸಾಕಾರಗೊಳಿಸುವುದಕ್ಕಾಗಿ ಪ್ರತಿ ದಿನವೂ ಸುಮಾರು ಎಂಟು ಕಿಲೋ ಮೀಟರ್ ಆತನನ್ನು ಹೊತ್ತುಕೊಂಡೇ ಬರುವ ಈ ವಾತ್ಸಲ್ಯಮಯಿ ತಾಯಿಯ ಬಗ್ಗೆ ಹೇಳುವುದಾದರೂ ಏನು?

ಮಗನನ್ನು ಪ್ರತಿನಿತ್ಯ ಎಂಟು ಕಿ.ಮೀ ಹೊತ್ತುಯ್ಯುವ ತಾಯಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ವಾಸವಿರುವ ಜಯಲಕ್ಷ್ಮಿಗೆ ಮೂರು ಜನ ಮಕ್ಕಳು. ಮೊದಲನೇ ಮಗ ರಾಜೇಶ್ ಅಂಗವಿಕಲ, ಎಂಟನೇ ತರಗತಿ ವಿದ್ಯಾರ್ಥಿ. ಆತನಲ್ಲಿ ಓದಿನ ಬಗ್ಗೆ ಇನ್ನಿಲ್ಲದ ಆಸಕ್ತಿ. ಏಳನೇ ತರಗತಿವರೆಗೂ ತನ್ನ ಸ್ವ ಗ್ರಾಮ ಕಡುದರಹಳ್ಳಿಯಲ್ಲೇ ಓದಿದ್ದ ರಾಜೇಶ್ ಬಾಬು. ಅಲ್ಲಿ ಏಳನೇ ತರಗತಿವರೆಗೆ ಮಾತ್ರ ಅವಕಾಶವಿದ್ದು, ಎಂಟನೇ ತರಗತಿಗೆ ಬೇರೆಡೆ ಶಾಲೆಗೆ ಸೇರುವುದು ಅನಿವಾರ್ಯವಾಗಿತ್ತು. ಹಾಗಾಗೇ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿನಲ್ಲಿ ಎಂಟನೇ ತರಗತಿಗೆ ದಾಖಲಿಸಲಾಯಿತು. ಆದರೆ ಓಡಾಡಲು ರಾಜೇಶ್ ಗೆ ಸಾಧ್ಯವಿಲ್ಲ. ಹೀಗಾಗೇ ತಾಯಿ ಜಯಲಕ್ಷ್ಮಿ ಈ ಒಂದು ನಿರ್ಧಾರ ಕೈಗೊಂಡರು.

ವಿಧವೆ ತಾಯಿಯಲ್ಲಿ ತುಂಬಿದ ಛಲ
ಜಯಲಕ್ಷ್ಮಿ ಅವರಿಗೆ ಇಬ್ಬರು ಗಂಡು ಮಕ್ಕಳು, ಇನ್ನೊಂದು ಹೆಣ್ಣು ಮಗುವಿದೆ. ಈ ಕುಟುಂಬಕ್ಕೆ ಜಯಲಕ್ಷ್ಮಿಯೇ ಆಧಾರ. ಗಂಡ ಸತ್ತು ಮೂರು ವರ್ಷಗಳು ಸರಿದವು. ಆದರೆ ಎದೆಗುಂದದೆ ಕೂಲಿ ನಾಲಿ ಮಾಡಿಕೊಂಡು ತನ್ನ ಮೂರು ಮಕ್ಕಳಿಗೂ ಶಿಕ್ಷಣ ಕೊಡುತ್ತಿದ್ದಾರೆ. ಮೊದಲನೇ ಮಗ ರಾಜೇಶ್ ಗೆ ಅಂಗವಿಕಲತೆ. ಹೇಗಾದರೂ ತನ್ನ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಲೇಬೇಕೆಂದು ಪಣ ತೊಟ್ಟಿದ್ದಾರೆ ಇವರು. ಎಂಟನೇ ತರಗತಿಗೆ ನಡೆದುಕೊಂಡು ಹೋಗಿ ಬರಲು ತನ್ನ ಮಗನಿಗೆ ಸಾಧ್ಯವಿಲ್ಲದ ಕಾರಣ ಪ್ರತಿನಿತ್ಯ ಆತನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು ಮಾಡುತ್ತಾರೆ.

ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೇ ಇಲ್ಲ
ತಂತ್ರಜ್ಞಾನ ಮುಂದುವರೆದಿರುವ ಈ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಆಟೋ, ಬಸ್ ಗಳು ವಿರಳವೇ. ಸರ್ಕಾರದಿಂದ ರಾಜೇಶ್ ಬಾಬುಗೆ ನೀಡಿದ್ದ ತ್ರಿಚಕ್ರ ಸೈಕಲ್ ಹಾಳಾಗಿ ಮೂಲೆ ಸೇರಿದೆ. ಆದರೆ ಈ ಒಂದು ನೆಪ ತನ್ನ ಮಗನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು ಎಂಬ ಒಂದೇ ಕಾರಣಕ್ಕೆ ಜಯಲಕ್ಷ್ಮಿ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ಹೊತ್ತುಕೊಂಡು ಓದಿಸುತ್ತಿದ್ದಾರೆ.

ರಾಜೇಶ್ ಗೆ ಐಎಎಸ್ ಆಗುವ ಕನಸು
ಅಂಗವಿಕಲತೆಯನ್ನು ಮೀರಿ ತಾನು ಸಾಧಿಸಬೇಕು ಎಂದು ಈ ಪುಟ್ಟ ಹುಡುಗನಿಗೆ ಎಲ್ಲಿಲ್ಲದ ಹುಮ್ಮಸ್ಸು. ತಾನು ಐಎಎಸ್ ಓದಿ ದೊಡ್ಡ ಹುದ್ದೆ ಏರಬೇಕು ಎಂಬ ಕನಸು ರಾಜೇಶ್ ನದ್ದು. ಇದನ್ನು ಈಡೇರಿಸಲು ತಾಯಿ ತನ್ನ ಜೀವನವನ್ನೇ ಧಾರೆ ಎರೆಯುತ್ತಿದ್ದಾರೆ. ತನ್ನ ಮಗನ ಕನಸನ್ನು ನನಸು ಮಾಡುವತ್ತ ಅವನಿಗೆ ಹೆಗಲಾಗಿ ನಿಂತಿದ್ದಾರೆ. ನಿತ್ಯವೂ ತನ್ನ ತಾಯಿಯ ಹೆಗಲ ಮೇಲೆ ಶಾಲೆಗೆ ಬರುವ ರಾಜೇಶ್ ಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ತಾಯಿಯನ್ನು, ತಾಯಿ ಹೆಗಲ ಮೇಲೆ ಕುಳಿತು ನನ್ನ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿರುವ ಈ ಮಗನನ್ನು ನೋಡಿದರೆ ಎಂಥವರ ಮನಸ್ಸೂ ಮರುಗದೇ ಇರಲು ಸಾಧ್ಯವೇ?
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications