ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ಪೂರ್ಣಿಮಾ ಶ್ರೀನಿವಾಸ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ.01: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿದು ಹಿರಿಯೂರಿನ ವಿ.ವಿ. ಸಾಗರಕ್ಕೆ ಹರಿದು ಬರಲು ಐದು ವರ್ಷ ಬೇಕು. ಒಂದು ವೇಳೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದರೆ ಎರಡುಮೂರು ವರ್ಷದಲ್ಲಿ ಬರಬಹುದು ಎಂದು ಹಿರಿಯೂರು ಶಾಸಕಿ ಕೆ . ಪೂರ್ಣಿಮಾ ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಅಜ್ಜಂಪುರ, ತರೀಕೆರೆ, ಲಕ್ಕುವಳ್ಳಿ ಹತ್ತಿರ ನಡೆಯುತ್ತಿರುವ ಕಾಮಗಾರಿ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮತ್ತು ಅನೇಕ ರೈತರೊಂದಿಗೆ ವೀಕ್ಷಿಸಿದ ಪೂರ್ಣಿಮಾ ಅವರು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಮಾತನಾಡಿದರು.

ನುಡಿದಂತೆ ನಡೆದ ಹಿರಿಯೂರಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ನುಡಿದಂತೆ ನಡೆದ ಹಿರಿಯೂರಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್

ಈ ಕಾಮಗಾರಿಗೆ 2008 ರಲ್ಲಿ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಇದರ ಕಡೆ ಗಮನಹರಿಸಿಲ್ಲ. ಹಾಗಾಗಿ ಈ ಕಾಮಗಾರಿ ಎಲ್ಲೊ ಒಂದು ಕಡೆ ವಿಳಂಬ ಆಗಿದೆ.

Hiriyur MLA Poornima Srinivas watched the ongoing work near Ajjampura

ಆದರೆ ಹಿರಿಯೂರಿನ ಶಾಸಕಿಯಾಗಿ ಒಂದು ವರ್ಷದೊಳಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯ ಪೂರ್ವದಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಅದರಂತೆಯೇ ಕಳೆದ ತಿಂಗಳು ಪಟ್ರೆಹಳ್ಳಿಯಲ್ಲಿ ಕುಡಿಯುವ ನೀರಿಗೆ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

Hiriyur MLA Poornima Srinivas watched the ongoing work near Ajjampura

ಉಳಿದಂತೆ ಕೆ.ಸಿ.ರೊಪ್ಪ , ಪಾಲವ್ವನಹಳ್ಳಿ , ಹುಚ್ಚವ್ವನಹಳ್ಳಿ, ಯಲಕೂರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

English summary
Hiriyur MLA Poornima Srinivas watched the ongoing work near Ajjampura, Tarikere and Lakkuvalli with party workers and many farmers. Then she spoke work was launched by the BJP government in 2008. But later Congress government did not focus on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X