ಸಗಣಿ ನೀರಲ್ಲಿ ಸ್ನಾನ ಮಾಡಿದರೆ ಕೊರೊನಾ ಬರೊಲ್ವಂತೆ! ವಿಡಿಯೋ ವೈರಲ್
ಚಿತ್ರದುರ್ಗ, ಮಾರ್ಚ್ 27: ಎಲ್ಲೆಲ್ಲೂ ಈಗ ಕೊರೊನಾದ್ದೇ ಮಾತು. ದಿನೇ ದಿನೇ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಕೊರೊನಾ ನಿರ್ಮೂಲನೆಗೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡುತ್ತಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲೂ ಕೊರೊನಾ ತೊಲಗಿಸುವ ಸಲಹೆಯೊಂದು ವೈರಲ್ ಆಗಿದೆ.
Recommended Video
ಸಗಣಿಯಲ್ಲಿ ಸ್ನಾನ ಮಾಡಿದರೆ ಕೊರೋನಾ ಬರೋದಿಲ್ಲ ಎಂದು ಸಲಹೆ ನೀಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ...

ವೈರಲ್ ಆಯ್ತು ಸಗಣಿ ಸ್ನಾನ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೀರೇನಹಳ್ಳಿ ಸಮೀಪ, ಸುಮಾರು 200ಕ್ಕೂ ಹೆಚ್ಚು ಹಸುಗಳಿರುವ ಸ್ವರ್ಣ ಭೂಮಿ ಗೋಶಾಲೆಯ ಆವರಣದಲ್ಲಿ ತೊಟ್ಟಿಯೊಂದರಲ್ಲಿ ಸಗಣಿ ಹಾಗೂ ನೀರನ್ನು ಮಿಶ್ರಣ ಮಾಡಲಾಗಿದೆ. ಅದರಲ್ಲಿ ಕೆಲ ಯುವಕರು ಸ್ನಾನ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಗೋಶಾಲೆ ಮಾಲೀಕ, ಗೋಬರ್ ಸ್ನಾನ ಮಾಡಿದರೆ ಕೊರೊನಾ ಬರುವುದಿಲ್ಲ ಎಂದು ಹೇಳಿರುವ ಮಾತುಗಳು ವಿಡಿಯೋದಲ್ಲಿ ಇದೆ.

ಸರ್ವರೋಗ ನಿವಾರಣೆಗೆ ಗೋಬರ್ ಸ್ನಾನ?
ಗೋಬರ್ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಅಂದರೆ ಸರ್ವರೋಗ ನಿವಾರಣೆಯಾಗುತ್ತದೆ. ನಾವು ಸಗಣಿ ಮಿಶ್ರಣ ಮಾಡಿದ ನೀರನ್ನು ಮನೆಯ ಮುಂಭಾಗದಲ್ಲಿ, ಅಂದರೆ ಅಂಗಳದಲ್ಲಿ ಹಾಕುತ್ತಿದ್ದೆವು. ಇದರ ಉದ್ದೇಶ ಮಾನವನಿಗೆ ಯಾವುದೇ ರೋಗದ ಲಕ್ಷಣಗಳು ಬರಬಾರದು ಎಂದು. ಆಗ ಯಾವುದೇ ರೋಗಗಳು ಕಾಣಿಸಿಕೊಳ್ಳುತ್ತಿರಲಿಲ್ಲ, ಈಗ ಅದನ್ನು ಬಿಟ್ಟಿದ್ದೇವೆ, ಈಗ ಮತ್ತೆ ಸಗಣಿಯನ್ನು ಬಳಸುವ ಕೆಲಸ ಮಾಡಬೇಕಿದೆ" ಎಂದು ಸಲಹೆ ನೀಡಿದ್ದಾರೆ ಗೋಶಾಲೆಯ ಮಾಲೀಕ ಗೋಸೇವಕ ರಾಘವೇಂದ್ರ.

"ಗೋಮಯದಲ್ಲಿ ಮಹಾಲಕ್ಷ್ಮಿ ಅಡಗಿರುತ್ತಾಳೆ"
ಭಾರತಿಯ ಹಿಂದೂ ಧರ್ಮದಲ್ಲಿ ಗೋ ಮೂತ್ರಕ್ಕೆ ಶ್ರೇಷ್ಠ ಸ್ಥಾನವಿದೆ. ನಾಟಿ ಹಸುವಿನ ಸಗಣಿಯಿಂದ ಸ್ನಾನ ಮಾಡಿದರೆ ಸರ್ವ ರೋಗ ನಿವಾರಣೆ ಆಗುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಹೇಳುತ್ತಾರೆ "ಗೋ ಮಾಹೆ ವಸತಿ ಲಕ್ಷ್ಮೀ" ಅಂದರೆ "ಗೋಮಯದಲ್ಲಿ ಮಹಾಲಕ್ಷ್ಮಿ ಅಡಗಿರುತ್ತಾಳೆ" ಎಂದು ವಿವರಸಿದ್ದಾರೆ ಅವರು.

ಹೀಗೊಂದು ವಿಡಿಯೋ ವೈರಲ್
ಹಾಗಾಗಿ ಸರ್ವರೋಗವನ್ನು ನಿವಾರಣೆ ಮಾಡುವ ಗೋಬರಿನ ಸ್ನಾನವನ್ನು ಮಾಡಿದಾಗ ನಮ್ಮ ಶರೀರದಲ್ಲಿರುವ ಎಲ್ಲ ದೋಷಗಳು ಮತ್ತು ಶರೀರದಲ್ಲಿರುವ ಕಾಯಿಲೆಗಳು ನಿವಾರಣೆ ಆಗುತ್ತವೆ. ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಸಗಣಿಯಿಂದ ಸ್ನಾನ ಮಾಡಿದರೆ ಗೋಬರ್ ಬಾತ್ ಎನ್ನಬಹುದು. ಗೋಬರ್ ಸ್ನಾನ ಮಾಡುವುದರಿಂದ ಕೊರೊನಾ ರೋಗ ಬ್ಯಾಕ್ಟೀರಿಯಾಗಳು ಬರಲ್ಲ ಎಂದು ರಾಘವೇಂದ್ರ ಅವರು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ಸಗಣಿ ಸ್ನಾನದಲ್ಲಿನ ಲಾಭದ ಬಗ್ಗೆ ನಿಜವೆಷ್ಟು, ಸುಳ್ಳೆಷ್ಟು ಎಂಬುದರ ಬಗ್ಗೆ ಮಾತ್ರ ವೈಜ್ಞಾನಿಕ ಮಾಹಿತಿ ಇಲ್ಲ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು












Click it and Unblock the Notifications