ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿಯ ಸ್ನೇಹಿತರೆಲ್ಲ ಕೋಟಿ ಕುಳಗಳೇ!
ಚಿಕ್ಕಮಗಳೂರು, ನವೆಂಬರ್.21: ರಾಜಕಾರಣದಲ್ಲಿ ಬಡವರು ಅಂತಾ ಯಾರೂ ಇಲ್ಲ. ರಾಜಕೀಯ ಮಾಡುವವರು ಎಲ್ಲರೂ ಕೋಟಿ ಕೋಟಿ ಕುಳಗಳೇ. ಇಲ್ಲಿ ಒಮ್ಮೆ ಅಧಿಕಾರ ದಕ್ಕಿದರೆ ಎಂಥವರೂ ಕೈಯಲ್ಲಿ ಲಕ್ಷ್ಮಿದೇವಿ ತಾಂಡವವಾಗುತ್ತಾಳೆ.
ಇಂಥ ಮಾತುಗಳನ್ನು ಇಷ್ಟುದಿನ ಜನರಷ್ಟೇ ಆಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚಿಗೆ ರಾಜಕೀಯ ನಾಯಕರೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಅವರಿಗೆ ಕೋಟಿ ಕೋಟಿ ಸಾಲ ನೀಡಿದ್ದೆ ಅನ್ನುವವರು ಒಬ್ಬರು. ಪಡೆದ ಸಾಲವನ್ನು ವಾಪಸ್ ಕೊಟ್ಟಿದ್ದೀನಿ ಎನ್ನುವವರು ಮತ್ತೊಬ್ಬರು.
ಇದರ ಮಧ್ಯೆ ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದು, ಮಾಜಿ ಮುಖ್ಯಮಂತ್ರಿಗಳು ಭಾಗ್ಯಶಾಲಿಗಳು ಎಂದು ವ್ಯಂಗ್ಯವಾಗಿ ಹೊಗಳಿದ್ದಾರೆ.

ಸಿದ್ದು ಸ್ನೇಹಿತರೆಲ್ಲ ಕೋಟಿ ಕುಳಗಳೇ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬ ಸಮಾಜವಾದಿ ಅನ್ನುತ್ತಾರೆ. ಆದರೆ, ಅವರು ಕಣ್ಣಿಗೆ ಹೋಕೋದೆಲ್ಲ 3, 4, 5 ಲಕ್ಷ ರೂಪಾಯಿಯ ಗ್ಲಾಸ್. ಕೈಗೆ ಕಟ್ಟುವುದು ಬರೋಬ್ಬರಿ 50, 60 ಲಕ್ಷ ರೂಪಾಯಿ ವಾಚ್. ಇನ್ನು, ಅವರು ಓಡಾಡುವ ಕಾರಿನ ಬೆಲೆ ಒಂದೂವರೆಯಿಂದ ಎರಡು ಕೋಟಿ ರೂಪಾಯಿ. ಇಷ್ಟೆಲ್ಲಾ ಆದರೆ, ಇಂದಿಗೂ ಅವರು ತಮ್ಮನ್ನು ಒಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಾರೆ ಎಂದು ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರು. ಅವರಿಗೆ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಗ್ಲಾಸ್, ವಾಚ್ ನ್ನು ನೀಡುವ ಸ್ನೇಹಿತರಿದ್ದಾರೆ. ಕೋಟಿಗಟ್ಟಲೇ ಹಣ ನೀಡುವ ಸ್ನೇಹಿತರನ್ನೂ ಅವರು ಹೊಂದಿದ್ದಾರೆ. ಕೋಟಿ ಕೋಟಿ ಬಾಳುವ ಕಾರ್ ನ್ನು ಕೂಡಾ ಸ್ನೇಹಿತರು ಅವರಿಗೆ ಗಿಫ್ಟ್ ಆಗಿ ನೀಡುತ್ತಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications