ಕಳಸ: ನಿರ್ಮಾಣವಾದ ನಾಲ್ಕೇ ತಿಂಗಳಿಗೆ ಮೂರು ಕೋಟಿ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಗುಂಡಿಮಯ
ಸಾಮಾನ್ಯವಾಗಿ ಹೊಸದಾಗಿ ನಿರ್ಮಾಣ ಮಾಡಿದ ರಸ್ತೆಗಳು ಒಂದರಿಂದ ಎರಡು ವರ್ಷವಂತೂ ಬಾಳಿಕೆ ಬರುತ್ತವೆ. ಆದರೆ ಕಳಸ ತಾಲೂಕಿನ ಈ ಊರಿನಲ್ಲಿ ಮಾತ್ರ ನಿರ್ಮಾಣ ಮಾಡಿದ ನಾಲ್ಕೇ ತಿಂಗಳಿನಲ್ಲಿ 3 ಕೋಟಿ ರೂ. ವೆಚ್ಚದ ರಸ್ತೆ ಹಳ್ಳಹಿಡಿದಿದೆ. ಈ ಕಳಪೆ ಕಾಮಗಾರಿ ವಿರುದ್ಧ ಇಲ್ಲಿನ ಜನರ
ಕಳಸ, ಜನವರಿ, 30: ಇತ್ತೀಚೆಗಷ್ಟೇ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ದುರಸ್ತಿಗೆ ತಲುಪಿದೆ. ಕಳಪೆ ಕಾಮಗಾರಿಯಿಂದ ಜನಸಂಚಾರಕ್ಕೆ ಮುಕ್ತಗೊಂಡ ರಸ್ತೆ ಕೆಲವೇ ದಿನಗಳಲ್ಲಿ ದುಸ್ಥಿತಿಗೆ ತಲುಪಿದೆ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕವನಹಳ್ಳ, ಮಾವಿನಹೊಲ, ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳಾಗಿವೆ. ಈ ಗ್ರಾಮಗಳಿಗೆ ಹೊರನಾಡು ಗ್ರಾಮದಿಂದ ಸಂಪರ್ಕ ಕಲ್ಪಿಸುವ ಸುಮಾರು 3 ಕಿಲೋ ಮೀಟರ್ ಉದ್ದದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಹೊರನಾಡು ಗ್ರಾಮ ಪಂಚಾಯತ್ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಮನವಿ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಈ ರಸ್ತೆಯ ಅಭಿವೃದ್ಧಿಗಾಗಿ ಸುಮಾರು 3.50 ಲಕ್ಷ ರೂಪಾಯಿ ಅನುದಾನ ನೀಡಿದ್ದರು.
ಮೂಡಿಗೆರೆ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಗೆ ಧರ್ಮದೇಟು
ಅಧಿಕಾರಿಗಳ
ವಿರುದ್ಧ
ರೊಚ್ಚಿಗೆದ್ದ
ಜನ
ಅದರಂತೆಯೇ
ಹೊರನಾಡು
ಗ್ರಾಮದಿಂದ
ಮಾವಿನಹೊಲ,
ಮಣ್ಣಿನಪಾಲ್,
ಕವನಹಳ್ಳ
ಗ್ರಾಮಗಳವರೆಗಿನ
ಕಾಂಕ್ರೀಟ್
ರಸ್ತೆ
ನಿರ್ಮಾಣಕ್ಕೆ
ಸ್ಥಳೀಯ
ಗುತ್ತಿಗೆದಾರರೊಬ್ಬರಿಗೆ
ಗುತ್ತಿಗೆ
ನೀಡಲಾಗಿತ್ತು.
ಈ
ಗುತ್ತಿಗೆದಾರರು
ಜವವರಿಯಿಂದ
ಮೇ
ತಿಂಗಳವರೆಗೆ
ಕಾಮಗಾರಿ
ನಡೆಸಿ
ಕಾಮಗಾರಿಯನ್ನು
ಪೂರ್ಣಗೊಳಿಸಿದ್ದರು.
ಕಾಮಗಾರಿ
ಪೂರ್ಣಗೊಂಡ
ಬಳಿಕ
ಸ್ಥಳೀಯ
ಬಿಜೆಪಿ
ಮುಖಂಡರು
ಸ್ಥಳೀಯರಿಗೆ
ಈ
ರಸ್ತೆಯಲ್ಲಿ
ಸಂಚಾರಕ್ಕೆ
ಅವಕಾಶ
ನೀಡದೇ
ಬ್ಯಾರಿಕೇಡ್ಗಳನ್ನು
ಅಡ್ಡ
ಇಟ್ಟು
ಸಂಚಾರಕ್ಕೆ
ತೊಂದರೆ
ಮಾಡಿದ್ದರು.
ಇತ್ತೀಚೆಗಷ್ಟೆ
ವಾಹನಗಳ
ಸಂಚಾರಕ್ಕೆ
ಮುಕ್ತ
ನಂತರ
ಜನರ
ಆಕ್ರೋಶದಿಂದಾಗಿ
ರಸ್ತೆಗೆ
ಅಡ್ಡ
ಇಡಲಾಗಿದ್ದ
ಬ್ಯಾರಿಕೇಡ್
ತೆರವು
ಮಾಡಲಾಗಿತ್ತು.
ಇತ್ತೀಚೆಗೆ
ಈ
ರಸ್ತೆ
ಗ್ರಾಮಸ್ಥರು
ಹಾಗೂ
ವಾಹನಗಳ
ಸಂಚಾರಕ್ಕೆ
ಮುಕ್ತಗೊಂಡಿದ್ದು,
ಸಂಚಾರಕ್ಕೆ
ಮುಕ್ತಗೊಂಡ
ಕೆಲವೇ
ದಿನಗಳಲ್ಲಿ
ಕಾಂಕ್ರಿಟ್
ರಸ್ತೆಯ
ಗುಣಮಟ್ಟ
ಜಗಜ್ಜಾಹೀರಾಗುತ್ತಿದೆ.
ರಸ್ತೆಯನ್ನು
ಅತ್ಯಂತ
ಕಳಪೆಯಾಗಿ
ನಿರ್ಮಿಸಿದ್ದು,
ರಸ್ತೆಗೆ
ಹಾಕಿರುವ
ಕಾಂಕ್ರೀಟ್
ಕಿತ್ತು
ಬರುತ್ತಿದೆ.
ರಸ್ತೆಯುದ್ದಕ್ಕೂ
ಕಾಂಕ್ರಿಟ್ಗೆ
ಬಳಸಿದ್ದ
ಜಲ್ಲಿಕಲ್ಲುಗಳ
ರಾಶಿ
ಬಿದ್ದಿದ್ದು,
ರಸ್ತೆ
ಅಲ್ಲಲ್ಲಿ
ಗುಂಡಿ
ಬಿದ್ದಿದೆ.
ಇದರಿಂದಾಗಿ
ಗ್ರಾಮಸ್ಥರ
ಸಂಚಾರಕ್ಕೂ
ತೊಂದರೆಯಾಗಿದ್ದು,
ಗ್ರಾಮಸ್ಥರು
ಮತ್ತೆ
ಕ್ಷೇತ್ರದ
ಶಾಸಕ
ಕುಮಾರಸ್ವಾಮಿ
ವಿರುದ್ಧ
ಆಕ್ರೋಶ
ವ್ತಕ್ತಪಡಿಸಿದ್ದಾರೆ.
ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿ ಅನುದಾನವನ್ನು ಕೊಳ್ಳೆ ಹೊಡೆಯಲಾಗಿದೆ. ಕಾಮಗಾರಿ ಅನುದಾನ ಲೂಟಿ ಮಾಡುವ ಉದ್ದೇಶದಿಂದ ಕಳಪೆ ರಸ್ತೆ ನಿರ್ಮಿಸಿ ಗ್ರಾಮಸ್ಥರಿಗೆ ವಂಚನೆ ಮಾಡಲಾಗಿದೆ. ಈಗಲೇ ಎಚ್ಚೆತ್ತುಕೊಂಡು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.