ಚಿಕ್ಕಮಗಳೂರು: ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಅರಣ್ಯಾಧಿಕಾರಿ ಸ್ವಾತಿ
ಚಿಕ್ಕಮಗಳೂರು, ಜೂನ್ 13: ಲಾಕ್ ಡೌನ್ ಉಲ್ಲಂಘನೆ ಹಾಗೂ ವೇಗವಾಗಿ ವಾಹನ ಚಲಾವಣೆ ಮಾಡಿಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಜೊತೆ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಸ್ವಾತಿ ಅವರು ಅನುಚಿತವಾಗಿ ವರ್ತನೆ ಮಾಡಿದ್ದಾರೆ.
Recommended Video
Pakistan cricketer Shahid Afridi tests positive for COVID19 | Shahid Afridi | Oneindia Kannada
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಚಿಕ್ಕಮಗಳೂರಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ೧೦ ಗಂಟೆ ವೇಳೆಯಲ್ಲಿ ಆರ್ಎಫ್ಓ ವಾಹನ ವೇಗವಾಗಿ ಚಿಕ್ಕಮಗಳೂರು ಕಡೆ ಬರುತ್ತಿರುವುದನ್ನು ಗಮನಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಪೊಲೀಸರ ಜೊತೆ ವಲಯ ಅರಣ್ಯಾಧಿಕಾರಿ ಸ್ವಾತಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಇನ್ನು ವಾಹನ ಚಾಲಕ ಪ್ರದೀಪ್ ಎಂಬುವರೂ ಕೂಡ ಮದ್ಯಪಾನ ಮಾಡಿದ್ದರು. ಇಬ್ಬರ ವಿರುದ್ಧವೂ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪೊಲೀಸರ ಜೊತೆ ಅನುಚಿತ ವರ್ತನೆ, ಲಾಕ್ ಡೌನ್ ಉಲ್ಲಂಘನೆ, ವೇಗವಾಗಿ ವಾಹನ ಚಲಾವಣೆ ಸಂಬಂಧಿಸಿದಂತೆ ಹಲವು ಸೆಕ್ಷನ್ ಅಡಿ ದೂರು ದಾಖಲಾಗಿದೆ.












Click it and Unblock the Notifications