ಸರ್ಕಾರ ಪತನದ ಆಸೆ ಈಡೇರಲ್ಲ: ಅನಿತಾ ಕುಮಾರಸ್ವಾಮಿ
ಚಿಕ್ಕಮಗಳೂರು, ಮೇ 22: ನಾವು ಆಗಾಗ್ಗೆ ಶೃಂಗೇರಿಗೆ ಬಂದು ತಾಯಿಯ ಆರ್ಶಿವಾದ ಪಡೆದುಕೊಳ್ಳುತ್ತಿರುತ್ತೇವೆ. ಈ ಬಾರಿಯೂ ಇಲ್ಲಿ ಭೇಟಿ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಿಖಿಲ್ ಮೇಲೆ ತಾಯಿ ಚಾಮುಂಡೇಶ್ಬರಿ ಹಾಗೂ ಜನರ ಆಶೀರ್ವಾದ ಇದ್ದೇ ಇದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಆರು ಸ್ಥಾನಗಳನ್ನು ಪಡೆಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆ ಆದಾಗಿನಿಂದಲೂ ಬಿಜೆಪಿ, ಸರ್ಕಾರಕ್ಕೆ ಡೆಡ್ ಲೈನ್ ಕೊಡುತ್ತಲೇ ಬಂದಿದೆ. ಸರ್ಕಾರ ಪತನಗೊಳಿಸುವ ಆಸೆ ಇಟ್ಟುಕೊಂಡಿದೆ. ಆದರೆ ಅವ್ಯಾವುದೂ ಪ್ರಯೋಜನವಾಗಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರುವುದಿಲ್ಲ, ಇವೆಲ್ಲ ವ್ಯರ್ಥ ಪ್ರಯತ್ನ ಎಂದಿದ್ದಾರೆ.













Click it and Unblock the Notifications