ಬಾಳೆಹೊನ್ನೂರು: ರೇಣುಕಾಚಾರ್ಯರ ಮೂರ್ತಿ ನಿರ್ಮಾಣಕ್ಕೆ ಬಂತು 250 ಟನ್ ತೂಕದ ಬೃಹತ್ ಕಲ್ಲು
ಚಿಕ್ಕಮಗಳೂರು, ಜೂನ್, 17: ವೀರಶೈವ ಸಮುದಾಯದ ಪಂಚಪೀಠಗಳಲ್ಲೇ ಮೊದಲನೇಯದಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ರೇಣುಕಾಚಾರ್ಯರ ಏಕಶಿಲಾ ಮೂರ್ತಿ ನಿರ್ಮಾಣವಾಗುತ್ತಿದ್ದು, ಇದಕ್ಕೆ 250 ಟನ್ ತೂಕದ ಬೃಹತ್ ಕಲ್ಲನ್ನು ತರಲಾಗಿದೆ. ಹಾಗಾದರೆ ಇದನ್ನು ಎಲ್ಲಿಂದ ತರಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ತುಮಕೂರು ಜಿಲ್ಲೆಯ ಮಡಕಶಿರಾ ಕ್ವಾರಿಯಿಂದ 250 ಟನ್ ತೂಕದ ಬೃಹತ್ ಶಿಲೆ ರಂಭಾಪುರಿ ಮಠದ ಆವರಣಕ್ಕೆ ಆಗಮಿಸಿದೆ. ರಂಭಾಪುರಿ ಮಠದ ಡಾ.ವೀರ ಸೋಮೇಶ್ವರ ಜಗದ್ಗುರುಗಳ ಆಶಯದಂತೆ ರಂಭಾಪುರಿ ಮಠದ ಆವರಣದಲ್ಲಿ 51 ಅಡಿ ಎತ್ತರದ ಬೃಹತ್ ಏಕಶಿಲಾ ಮೂರ್ತಿ ತಯಾರಾಗುತ್ತಿದೆ. ಈಗಾಗಲೇ ಮೂರ್ತಿ ನಿರ್ಮಾಣಕ್ಕೆ 100 ಹಾಗೂ 150 ಟನ್ ತೂಕದ ಪಾಣಿಪೀಠದ ಎರಡು ಬೃಹತ್ ಶಿಲೆಗಳನ್ನು ಮಠದ ಆವರಣಕ್ಕೆ ತರಲಾಗಿದೆ.

ಈಗಾಗಲೇ ಶಿಲೆಗಳ ನಿರ್ಮಾಣ ಕಾರ್ಯ ಕೂಡ ಆರಂಭ ಆಗಿದೆ. ಈ ಭಾರೀ ತೂಕದ ಬೃಹತ್ ಶಿಲೆ ನಿರ್ಮಾಣದ ಕಲ್ಲು ಸಾಗಾಣಿಕೆಯ ಜವಾಬ್ದಾರಿಯನ್ನ ಬೆಂಗಳೂರಿನ ಶ್ರೀಧರ್ ಬಾಬು ತಂಡ ಹೊತ್ತಿದೆ. 112 ಚಕ್ರದ ಉದ್ದವಾದ ಲಾರಿಯಲ್ಲಿ ಈ ಕಲ್ಲನ್ನು ರಂಭಾಪುರಿ ಮಠದ ಆವರಣಕ್ಕೆ ತರುವುದೇ ಶ್ರೀಧರ್ಬಾಬು ತಂಡಕ್ಕೆ ದೊಡ್ಡ ಸವಾಲಾಗಿತ್ತು. ಮೂರ್ತಿ ನಿರ್ಮಾಣಕ್ಕೆ ಅಗತ್ಯವಿರುವ 300 ಟನ್ ತೂಕದ 4ನೇ ಶಿಲೆಯೂ ಶೀಘ್ರದಲ್ಲೇ ಮಠದ ಆವರಣಕ್ಕೆ ಆಗಮಿಸಲಿದೆ.
51 ಅಡಿ ಎತ್ತರದ ರೇಣುಕಾಚಾರ್ಯ ಸುಂದರ ಮೂರ್ತಿಯ ಕೆತ್ತನೆಯ ಜವಾಬ್ದಾರಿಯನ್ನು ಬೆಂಗಳೂರಿನ ಅಶೋಶ್ ಗುಡಿಗಾರ, ಗೌತಮ ಗುಡಿಗಾರ ಹಾಗೂ ಸಹ ಕುಶಲಕರ್ಮಿಗಳು ಹೊತ್ತಿದ್ದಾರೆ. ಇನ್ನು ರಂಭಾಪುರಿ ಮಠದ ಆವರಣದಲ್ಲಿ ಮೂರ್ತಿ ಕೆತ್ತನೆಯ ಕಾರ್ಯ ನಡೆಯುತ್ತಿದ್ದು, ಪೀಠದ ಆವರಣದಲ್ಲಿ ಶೀಘ್ರವೇ 51 ಅಡಿಯ ರೇಣುಕಾಚಾರ್ಯ ಮೂರ್ತಿ ತಲೆ ಎತ್ತಲಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications