"ಸಿದ್ದರಾಮಯ್ಯ ರಾತ್ರಿ ಬಿದ್ದ ಕನಸನ್ನು ಬೆಳಗ್ಗೆ ಬಂದು ಹೇಳುತ್ತಾರೆ"

ಚಿಕ್ಕಮಗಳೂರು, ಜನವರಿ 18: " ಸಿದ್ದರಾಮಯ್ಯ ಅವರಿಗೆ ದಿನಾ ಕನಸು ಬೀಳುತ್ತೆ. ರಾತ್ರಿ ಬಿದ್ದ ಕನಸನ್ನು ಬೆಳಗ್ಗೆ ಬಂದು ಹೇಳುತ್ತಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದರು.

ಸೋಮವಾರ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾಧ್ಯಮಗಳ ಜೊತೆ ಮಾತನಾಡಿದರು. "ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ ಗಾಂಧಿ ವಾದ ಆಗಲ್ಲ. ಒಮ್ಮೆ ನಾನೂ ಹಿಂದೂ ಅಂತಾರೆ. ಆಮೇಲೆ ನನಗೂ ಹಿಂದೂಗೂ ಸಂಬಂಧವಿಲ್ಲ ಅಂತಾರೆ" ಎಂದು ಟೀಕಿಸಿದರು.

"ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ದರೆ?. ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು. ಗೋ ಮಾಂಸ ತಿನ್ನುವೆ ಅನ್ನುವ ಅವರದ್ದು ಗಾಂಧಿ ಹಿಂದುತ್ವ ಹೇಗಾಗುತ್ತದೆ?" ಎಂದು ಸಿ. ಟಿ. ರವಿ ಪ್ರಶ್ನಿಸಿದರು.

All Statements Of Siddaramaiah Will Come In His Dream CT Ravi

"ಸಿದ್ದರಾಮಯ್ಯ ಯಾವಾಗ ಆರ್. ಎಸ್. ಎಸ್. ಗೆ ಬಂದರು ಗೊತ್ತಿಲ್ಲ. ಆರ್. ಎಸ್. ಎಸ್. ಮೂಲ ತಿಳಿಯಬೇಕಾದರೆ ಇಲ್ಲಿಗೆ ಬರಬೇಕು. ಮೊದಲು ಆರ್. ಎಸ್. ಎಸ್. ಗೆ ಬರಲಿ ಆ ಮೇಲೆ ಮೂಲ ತಿಳಿಯಲಿ. ಕೆಲವು ವೇಳೆ ಅವರಿಗೆ ಅವರ ಮೂಲದ ಬಗ್ಗೆ ಅನುಮಾನ ಬರುತ್ತೆ" ಎಂದರು.

"ಸಿದ್ದರಾಮಯ್ಯಗೆ ಬಹಳ ಸಲ ತಮ್ಮ ಮೂಲದ್ದೇ ಸಂಶಯ ಕಾಡಿರುತ್ತದೆ. ಅಪ್ಪಟ ರಾಷ್ಟ್ರಭಕ್ತನಿಗೆ ಆರ್. ಎಸ್. ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್. ಎಸ್. ಎಸ್. ಮೂಲ ಗೊತ್ತಾಗಲ್ಲ"ಎಂದು ಸಿ. ಟಿ. ರವಿ ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಮೈಸೂರಿನಲ್ಲಿ ಮಾತನಾಡಿದ್ದರು. "ಏಪ್ರಿಲ್ ಬಳಿಕ ಯಡಿಯೂರಪ್ಪನನ್ನು ತೆಗೆಯುತ್ತಾರೆ. ನನಗೆ ಆರ್. ಎಸ್. ಎಸ್. ಮೂಲಗಳಿಂದ ಮಾಹಿತಿ ಇದೆ" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+