Valentines Day 2023: ನಂದಿಬೆಟ್ಟ, ಸ್ಕಂದಗಿರಿಯ ತಪ್ಪಲಲ್ಲಿ ಪ್ರೇಮ ಪಕ್ಷಿಗಳ ಸಂಚಾರ
ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಇಂದು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನ ಅಂಗವಾಗಿ ಮಂಗಳವಾರ ಪ್ರೇಮಿಗಳ ಮೆಚ್ಚಿನ ಸ್ಥಳವೆಂದೇ ಎಂದೇ ಖ್ಯಾತಿ ಪಡೆದಿರುವ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಸುಂದರ ಪರಿಸರದ ಜೊತೆಗೆ ರಮಣೀಯ ದೃಶ್ಯ ಹೊಂದಿರುವ ನಂದಿಗಿರಿಧಾಮ ಪ್ರೇಮಿಗಳ ಪಾಲಿಗೆ ಸ್ವರ್ಗವೇ ಸರಿ. ಹಾಗಾಗಿ ಪ್ರೇಮಿಗಳು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಸಾವಿರಾರು ಯುವ ಜೋಡಿಗಳು ಲಗ್ಗೆ ಇಟ್ಟಿದ್ದರು. ಬೆಟ್ಟದ ಮೇಲೆ ನೂರಾರು ಸಾವಿರಾರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡರು. ಮೊದಲ ಬಾರಿಗೆ ಪ್ರೀತಿಯನ್ನು ಅಭಿವ್ಯಕ್ತಿಸುವವರಿಗೆ ಇದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ಹೀಗಾಗಿ ಹಲವರು ನಾನಾ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿಕೊಂಡರು.
ಕೆಲವರು ಬೆಟ್ಟದ ಮೇಲೆಯೇ ಕೇಕ್ ಕತ್ತರಿಸುವ ಮೂಲಕ ಪ್ರೇಮಿಗಳ ದಿನ ಆಚರಿಸಿಕೊಂಡರೆ, ಇನ್ನೂ ಕೆಲವರು ಪ್ರೀತಿಯ ಸಂಕೇತವಾಗಿ ಗ್ರೀಟಿಂಗ್ಸ್ ಕಾರ್ಡ್, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮನದಾಳದ ಪ್ರೀತಿಯನ್ನು ಹಂಚಿಕೊಂಡರು. ಇನ್ನು ಕೆಲವರು ಸೂರ್ಯೋದಯ ಸ್ಪಾಟ್ನಲ್ಲಿ ನಿಂತು ಗುಲಾಬಿ ನೀಡುವ ಮೂಲಕ ಸಂಭ್ರಮಿಸಿದರು.

ಚಾರಣ ಪ್ರಿಯರ ಫೇವರಿಟ್ ಸ್ಥಳವಾದ ಸ್ಕಂದಗಿರಿಯಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿತ್ತು. ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದ ಪ್ರೇಮಿಗಳು ರಸ್ತೆಯುದ್ದಕ್ಕೂ ಮೊಬೈಲ್ ಮೂಲಕ ಸೆಲ್ಫಿಗಳನ್ನು ತೆಗದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇತ್ತೀಚಿಗೆ ಹೆಚ್ಚು ಯುವ ಪ್ರವಾಸಿಗರನ್ನು ಸೆಳೆಯುತ್ತಿರುವ ಹಾಗೂ ಫೋಟೋಗೆ ಉತ್ತಮ ಸ್ಥಳವಾಗಿರುವ ಗುಡಿಬಂಡೆ ತಾಲೂಕು ಆವಲಬೆಟ್ಟದಲ್ಲಿ ಪ್ರೇಮಿಗಳ ದಂಡೇ ನೆರೆದಿತ್ತು. ಬೆಟ್ಟದ ತುದಿಯಲ್ಲಿರುವ ಸೆಲ್ಫಿ ಬಂಡೆಯ ಮೇಲೆ ಫೋಟೋ, ಸೆಲ್ಫಿ ತೆಗೆದುಕೊಂಡಿದ್ದು ಕಂಡು ಬಂತು. ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಸಮೀಪದ ಇಶಾ ಕೇಂದ್ರದಿಂದ ನಿರ್ಮಿಸಿರುವ ಆದಿಯೋಗಿ ಮೂರ್ತಿ ನೋಡಲು ಯುವಕ ಯುವತಿ ಜೋಡಿಗಳು ಭೇಟಿ ನೀಡಿದರು. ಶ್ರೀನಿವಾಸ ಸಾಗರ, ಜಕ್ಕಲಮೊಡಗು, ಅಮಾನಿ ಬೈರಸಾಗರ ಕೆರೆಗೂ ಭೇಟಿ ನೀಡಿ ವ್ಯಾಲೆಂಟೈನ್ಸ್ ಡೇ ಸಂಭ್ರಮದಿಂದ ಆಚರಿಸಿದರು.
ಪ್ರೇಮಿಗಳ ದಿನದ ಅಂಗವಾಗಿ ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರ, ತುಮಕೂರು ಸೇರಿದಂತೆ ದೂರ ದೂರುಗಳಿಂದ ಸಾವಿರಾರು ಪ್ರೇಮಿಗಳು, ಪ್ರವಾಸಿಗರು ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರು. ಇದರಿಂದ ನಂದಿಬೆಟ್ಟದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ನಂದಿಗಿರಿಧಾಮ, ಆವಲಬೆಟ್ಟ, ಇಶಾ ಕೇಂದ್ರ, ಸ್ಕಂದಗಿರಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಭೋಗನಂದೀಶ್ವರ ಸ್ವಾಮಿ ದೇವಾಲಯ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಗೌರಿಬಿದನೂರಿನ ವಿಧುರಾಶ್ವತ್ಥ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ ಕೋಟೆ, ಗುಡಿಬಂಡೆ ಸುರಸದ್ಮಗಿರಿ ಬೆಟ್ಟ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಲ್ಲೂ ಪ್ರೇಮಿಗಳ ದಂಡು ಕಂಡುಬಂದಿದೆ. ಇನ್ನೊಂದೆಡೆ ನಗರಗಳ ಪ್ರಮುಖ ಹೋಟೆಲ್ಗಳಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಿತ್ತು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications