Valentines Day 2023: ನಂದಿಬೆಟ್ಟ, ಸ್ಕಂದಗಿರಿಯ ತಪ್ಪಲಲ್ಲಿ ಪ್ರೇಮ ಪಕ್ಷಿಗಳ ಸಂಚಾರ
ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಇಂದು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನ ಅಂಗವಾಗಿ ಮಂಗಳವಾರ ಪ್ರೇಮಿಗಳ ಮೆಚ್ಚಿನ ಸ್ಥಳವೆಂದೇ ಎಂದೇ ಖ್ಯಾತಿ ಪಡೆದಿರುವ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ನೂರಾರು ಜೋಡಿಗಳು ಭೇಟಿ ನೀಡಿದರು. ಇನ್ನು ಸ್ಕಂದಗಿರಿ, ಇಶಾ ಕೇಂದ್ರ, ಆವಲಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರೇಮಿಗಳ ಕಲರವ ಹೆಚ್ಚಾಗಿತ್ತು.
ಸುಂದರ ಪರಿಸರದ ಜೊತೆಗೆ ರಮಣೀಯ ದೃಶ್ಯ ಹೊಂದಿರುವ ನಂದಿಗಿರಿಧಾಮ ಪ್ರೇಮಿಗಳ ಪಾಲಿಗೆ ಸ್ವರ್ಗವೇ ಸರಿ. ಹಾಗಾಗಿ ಪ್ರೇಮಿಗಳು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಸಾವಿರಾರು ಯುವ ಜೋಡಿಗಳು ಲಗ್ಗೆ ಇಟ್ಟಿದ್ದರು. ಬೆಟ್ಟದ ಮೇಲೆ ನೂರಾರು ಸಾವಿರಾರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡರು. ಮೊದಲ ಬಾರಿಗೆ ಪ್ರೀತಿಯನ್ನು ಅಭಿವ್ಯಕ್ತಿಸುವವರಿಗೆ ಇದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ಹೀಗಾಗಿ ಹಲವರು ನಾನಾ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿಕೊಂಡರು.
ಕೆಲವರು ಬೆಟ್ಟದ ಮೇಲೆಯೇ ಕೇಕ್ ಕತ್ತರಿಸುವ ಮೂಲಕ ಪ್ರೇಮಿಗಳ ದಿನ ಆಚರಿಸಿಕೊಂಡರೆ, ಇನ್ನೂ ಕೆಲವರು ಪ್ರೀತಿಯ ಸಂಕೇತವಾಗಿ ಗ್ರೀಟಿಂಗ್ಸ್ ಕಾರ್ಡ್, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮನದಾಳದ ಪ್ರೀತಿಯನ್ನು ಹಂಚಿಕೊಂಡರು. ಇನ್ನು ಕೆಲವರು ಸೂರ್ಯೋದಯ ಸ್ಪಾಟ್ನಲ್ಲಿ ನಿಂತು ಗುಲಾಬಿ ನೀಡುವ ಮೂಲಕ ಸಂಭ್ರಮಿಸಿದರು.

ಚಾರಣ ಪ್ರಿಯರ ಫೇವರಿಟ್ ಸ್ಥಳವಾದ ಸ್ಕಂದಗಿರಿಯಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿತ್ತು. ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದ ಪ್ರೇಮಿಗಳು ರಸ್ತೆಯುದ್ದಕ್ಕೂ ಮೊಬೈಲ್ ಮೂಲಕ ಸೆಲ್ಫಿಗಳನ್ನು ತೆಗದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇತ್ತೀಚಿಗೆ ಹೆಚ್ಚು ಯುವ ಪ್ರವಾಸಿಗರನ್ನು ಸೆಳೆಯುತ್ತಿರುವ ಹಾಗೂ ಫೋಟೋಗೆ ಉತ್ತಮ ಸ್ಥಳವಾಗಿರುವ ಗುಡಿಬಂಡೆ ತಾಲೂಕು ಆವಲಬೆಟ್ಟದಲ್ಲಿ ಪ್ರೇಮಿಗಳ ದಂಡೇ ನೆರೆದಿತ್ತು. ಬೆಟ್ಟದ ತುದಿಯಲ್ಲಿರುವ ಸೆಲ್ಫಿ ಬಂಡೆಯ ಮೇಲೆ ಫೋಟೋ, ಸೆಲ್ಫಿ ತೆಗೆದುಕೊಂಡಿದ್ದು ಕಂಡು ಬಂತು. ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಸಮೀಪದ ಇಶಾ ಕೇಂದ್ರದಿಂದ ನಿರ್ಮಿಸಿರುವ ಆದಿಯೋಗಿ ಮೂರ್ತಿ ನೋಡಲು ಯುವಕ ಯುವತಿ ಜೋಡಿಗಳು ಭೇಟಿ ನೀಡಿದರು. ಶ್ರೀನಿವಾಸ ಸಾಗರ, ಜಕ್ಕಲಮೊಡಗು, ಅಮಾನಿ ಬೈರಸಾಗರ ಕೆರೆಗೂ ಭೇಟಿ ನೀಡಿ ವ್ಯಾಲೆಂಟೈನ್ಸ್ ಡೇ ಸಂಭ್ರಮದಿಂದ ಆಚರಿಸಿದರು.
ಪ್ರೇಮಿಗಳ ದಿನದ ಅಂಗವಾಗಿ ಬೆಂಗಳೂರು, ಕೋಲಾರ, ದೊಡ್ಡಬಳ್ಳಾಪುರ, ತುಮಕೂರು ಸೇರಿದಂತೆ ದೂರ ದೂರುಗಳಿಂದ ಸಾವಿರಾರು ಪ್ರೇಮಿಗಳು, ಪ್ರವಾಸಿಗರು ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರು. ಇದರಿಂದ ನಂದಿಬೆಟ್ಟದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ, ಮುನ್ನೆಚ್ಚರಿಕಾ ಕ್ರಮವಾಗಿ ನಂದಿಗಿರಿಧಾಮ, ಆವಲಬೆಟ್ಟ, ಇಶಾ ಕೇಂದ್ರ, ಸ್ಕಂದಗಿರಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಭೋಗನಂದೀಶ್ವರ ಸ್ವಾಮಿ ದೇವಾಲಯ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಗೌರಿಬಿದನೂರಿನ ವಿಧುರಾಶ್ವತ್ಥ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ ಕೋಟೆ, ಗುಡಿಬಂಡೆ ಸುರಸದ್ಮಗಿರಿ ಬೆಟ್ಟ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಲ್ಲೂ ಪ್ರೇಮಿಗಳ ದಂಡು ಕಂಡುಬಂದಿದೆ. ಇನ್ನೊಂದೆಡೆ ನಗರಗಳ ಪ್ರಮುಖ ಹೋಟೆಲ್ಗಳಲ್ಲೂ ಪ್ರೇಮಿಗಳ ಸಂಖ್ಯೆ ಹೆಚ್ಚಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications