ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ನಂದಿ ಹಿಲ್ಸ್‌ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ

ಟ್ರಕ್ಕಿಂಗ್ ಹೋಗಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು 112 ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 29; ಟ್ರಕ್ಕಿಂಗ್ ಹೋಗಿ ನಂದಿಬೆಟ್ಟದ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರನ್ನು 112 ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಓರ್ವ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದೊಡ್ಡಬಳ್ಳಾಪುರದ ಮಂಜುನಾಥ್ ಮತ್ತು ಮನೋಜ್ ಕುಮಾರ್ ಭಾನುವಾರ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಚಾರಣ ಕೈಗೊಂಡಿದ್ದರು. ಈ ಸಮಯದಲ್ಲಿ ಕಾಲು ಜಾರಿ ಬಿದ್ದು, ಪ್ರಪಾತದಲ್ಲಿ ಸಿಲಕಿದ್ದರು.

ಮೈಸೂರು ದಸರಾ ಮಾದರಿಯಲ್ಲೇ ನಂದಿ ಗಿರಿಧಾಮದಲ್ಲಿ ಶಿವೋತ್ಸವ ಮೈಸೂರು ದಸರಾ ಮಾದರಿಯಲ್ಲೇ ನಂದಿ ಗಿರಿಧಾಮದಲ್ಲಿ ಶಿವೋತ್ಸವ

112 ಸಂಖ್ಯೆಗೆ ಕರೆ ಮಾಡಿ ರಕ್ಷಣೆ ಮಾಡಿ ಎಂದು ಮನವಿ ಮಾಡಿದರು. ಸ್ಥಳಕ್ಕೆ ನಂದಿಗಿರಿಧಾಮದ ಪೊಲೀಸರು, ಅಗ್ನಿಶಾಮಕ ದಳದ ಜೊತೆ 112 ಪೊಲೀಸರು ಆಗಮಿಸಿದರು.

ವಿವಿ ಸಾಗರ ಜಲಾಶಯದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ 6 ಜನರನ್ನು ರಕ್ಷಿಸಿದ 112 ಸಹಾಯವಾಣಿ ಸಿಬ್ಬಂದಿವಿವಿ ಸಾಗರ ಜಲಾಶಯದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ 6 ಜನರನ್ನು ರಕ್ಷಿಸಿದ 112 ಸಹಾಯವಾಣಿ ಸಿಬ್ಬಂದಿ

Two Trekkers Rescued By 112 Team At Nandi Hills Chikkaballapur

ಅಪಾಯಕಾರಿ ಪ್ರಪಾತದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಣೆ ಮಾಡಿದರು. ಪ್ರಪಾತಕ್ಕೆ ಜಾರಿ ಬಿದ್ದ ಕಾರಣ ಮನೋಜ್ ಕುಮಾರ್ ಗಾಯಗೊಂಡಿದ್ದರು. ಸುಮಾರು 2 ಕಿ. ಮೀ. ಅವರನ್ನು ಹೊತ್ತುಕೊಂಡು ಬಂದು ರಕ್ಷಣೆ ಮಾಡಲಾಗಿದೆ.

ಮೈಸೂರು ನಮ್ಮ-112 ರಿಂದ ಶ್ಲಾಘನೀಯ ಕಾರ್ಯಮೈಸೂರು ನಮ್ಮ-112 ರಿಂದ ಶ್ಲಾಘನೀಯ ಕಾರ್ಯ

ಮನೋಜ್ ಕುಮಾರ್‌ರನ್ನು ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ್‌ಗೆ ಯಾವುದೇ ಗಾಯಗಳಾಗಿಲ್ಲ. ಯುವಕರು ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಏನಿದು 112; ಕೇಂದ್ರ ಸರ್ಕಾರವು ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಸೇರಿದಂತೆ ಇನ್ನಿತರ ತುರ್ತು ಸೇವೆಗಳು ಒಂದೇ ನಂಬರ್ ಅಡಿಯಲ್ಲಿ ಸಿಗುವಂತೆ ಮಾಡಲು 112 ತುರ್ತು ರಕ್ಷಣಾ ಪಡೆಯನ್ನು ರಚನೆ ಮಾಡಿದೆ.

ತುರ್ತು ಸಂದರ್ಭಗಳಲ್ಲಿ ಜನರು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಈ ಪಡೆಗಾಗಿಯೇ ವಿಶೇಷ ವಾಹನಗಳನ್ನು ಕೇಂದ್ರ ಗೃಹ ಸಚಿವಾಲಯದ ಮೂಲಕ ರಾಜ್ಯಗಳಿಗೆ ನೀಡಲಾಗಿದೆ.

ಹೊತ್ತಿ ಉರಿದ ಕಾರು; ಬೆಂಗಳೂರಿನಿಂದ ನಂದಿಗಿರಿಧಾಮಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕಾರಿಗೆ ಬೆಂಕಿ ತಗುಲಿರುವ ಘಟನೆ ಭಾನುವಾರ ನಡೆದಿದೆ. ಫೋರ್ಡ್‌ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ನಂದಿಬೆಟ್ಟ ಏರುವಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಚಾಲಕ ಎಲ್ಲರನ್ನೂ ಕೆಳಗಿಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

English summary
Team 112 rescued two trekkers stranded at Nandi hills, Chikkaballapur on January 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X