ಇರುವೆ ಗೂಡು ಸುಡಲು ಹೋಗಿ ತಾನೇ ದಹನವಾದ ಮಹಿಳಾ ಟೆಕ್ಕಿ
ಚೆನ್ನೈ, ನವೆಂಬರ್ 24: ಇರುವೆ ಗೂಡಿಗೆ ಬೆಂಕಿ ಹಚ್ಚಲು ಹೋದ 27 ವರ್ಷದ ಮಹಿಳೆ ತನ್ನನ್ನು ತಾನೇ ಸುಟ್ಟುಕೊಂಡು ಗಂಭೀರ ಗಾಯಗಳಿಂದ ಮೃತಪಟ್ಟ ಘಟನೆ ಚೆನ್ನೈನ ಅಮಿಂಜಿಕರೈನ ಪೆರುಮಾಳ್ ಕೋಯಿಲ್ ಸ್ಟ್ರೀಟ್ನಲ್ಲಿ ನಡೆದಿದೆ. ಘಟನೆ ವೇಳೆ ಮಹಿಳೆ ಪಾಲಿಸ್ಟರ್ ಬಟ್ಟೆ ಧರಿಸಿದ್ದರು. ಇದರಿಂದ ಬೆಂಕಿ ವೇಗವಾಗಿ ಅವರ ಮೇಗೆ ಆವರಿಸಿಕೊಂಡಿದೆ. ಶೇ 90ರಷ್ಟು ಸುಟ್ಟಗಾಯಕ್ಕೆ ಒಳಗಾಗಿದ್ದ ಅವರು, ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಮಿಂಜಿಕರೈ ನಿವಾಸಿಯಾಗಿದ್ದ ಎಸ್. ಸಂಗೀತಾ, ಶೋಲಿಂಗನಲ್ಲೂರ್ನಲ್ಲಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ವೃತ್ತಿಯಿಂದ ಚಾಲಕರಾಗಿರುವ ತಂದೆ ಸತ್ಯಮೂರ್ತಿ ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರಿಂದ ಸಂಗೀತಾ ಅವರೇ ಮನೆಯ ಏಕೈಕ ಆಧಾರವಾಗಿದ್ದರು.
ಕೋವಿಡ್ ಕಾರಣದಿಂದ ಸಂಗೀತಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶನಿವಾರ ಅವರು ತಮ್ಮ ಕೊಠಡಿಯಲ್ಲಿ ಇರುವೆಗಳು ಓಡಾಡುತ್ತಿರುವುದನ್ನು ಗಮನಿಸಿದರು. ಅವರಿಗೆ ಇರುವೆ ಗೂಡು ಕಂಡಿತ್ತು. ನೆಲವನ್ನು ಸ್ವಚ್ಛಗೊಳಿಸಿದ ಅವರು ಸೀಮೆ ಎಣ್ಣೆ ಸುರಿದು ಇರುವೆ ಗೂಡನ್ನು ಸುಡಲು ನಿರ್ಧರಿಸಿದ್ದರು. ಅಮ್ಮನ ಜತೆ ಸೇರಿ ಕಾಗದ ಒಂದಕ್ಕೆ ಸೀಮೆಎಣ್ಣೆ ಸುರಿದು ಗೂಡಿಗೆ ಬೆಂಕಿ ಹಚ್ಚಿದ್ದರು. ಕೂಡಲೇ ಗೂಡಿನಿಂದ ಹೊರಬಂದ ಇರುವೆಗಳು ಕೊಠಡಿಯ ತುಂಬೆಲ್ಲಾ ಓಡತೊಡಗಿದವು.

ಕೆಲವು ಇರುವೆಗಳು ಸಂಗೀತಾ ಅವರೆಡೆಗೆ ಧಾವಿಸಿ ಅವರ ಕಾಲುಗಳ ಮೇಲೆ ಹತ್ತತೊಡಗಿದವು. ಇದರಿಂದ ಗಾಬರಿಗೊಂಡ ಸಂಗೀತಾ ಅವುಗಳಿಂದ ತಪ್ಪಿಸಿಕೊಳ್ಳಲು ಜಿಗಿಯಲು ಪ್ರಯತ್ನಿಸಿದರು. ಆಗ ಬೆಂಕಿಯ ಸಮೀಪದಲ್ಲಿಯೇ ಸೀಮೆಎಣ್ಣೆ ಕ್ಯಾನ್ ಬಿದ್ದಿದೆ. ಆಗ ಸೀಮೆಎಣ್ಣೆ ಅವರ ಉಡುಪಿನ ಮೇಲೆ ಚೆಲ್ಲಿದ್ದರಿಂದ ಕ್ಷಣಮಾತ್ರದಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ.
ಸಂಗೀತಾ ಅವರ ಕಿರುಚಾಟ ಕೇಳಿ ತಂದೆ ಸತ್ಯಮೂರ್ತಿ ರಕ್ಷಣೆಗೆ ಧಾವಿಸಿದರೂ ಆಗಾಗಲೇ ಬೆಂಕಿಯ ಜ್ವಾಲೆ ಅವರನ್ನು ಬಹುತೇಕ ಸುಟ್ಟುಹಾಕಿತ್ತು. ಸತ್ಯಮೂರ್ತಿ, ಸಂಗೀತಾರ ಹೋದರ ಮತ್ತು ನೆರೆಹೊರೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಒದ್ದೆ ಬ್ಲಾಂಕೆಟ್ ಅನ್ನು ಮೈಮೇಲೆ ಹಾಕಿದರೂ ಬೆಂಕಿಯನ್ನು ಆರಿಸಲು ತುಂಬಾ ಸಮಯ ಬೇಕಾಯಿತು. ಅವರ ತಾಯಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಯಿತು. ಅವರನ್ನು ಶನಿವಾರ ರಾತ್ರಿ ಕಿಲ್ಪೌಕ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ 2.30ರ ಸುಮಾರಿಗೆ ಅವರು ಮೃತಪಟ್ಟರು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications