ನಡುರಸ್ತೆಯಲ್ಲಿ ಚಿರತೆ ತಿಂದ ಕಾಡುಹಂದಿಗಳು: ಶಾಕಿಂಗ್ ವಿಡಿಯೋ ವೈರಲ್
ತಮಿಳುನಾಡು ಮೇ 9: ಚಿರತೆ ಅಂತಹ ಪ್ರಾಣಿಯನ್ನು ನೋಡಿದರೆ ಇತರ ಪ್ರಾಣಿಗಳು ಮತ್ತು ಮನುಷ್ಯರು ಭಯಪಡುತ್ತಾರೆ. ಯಾವುದೇ ಪ್ರಾಣಿ ಅಥವಾ ಮನುಷ್ಯ ತಮ್ಮ ಮುಂದೆ ಚಿರತೆ ಕಂಡರೆ ಸಾವಿನ ಬಾಗಿಲು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗಿರುವಾಗ ಕಾಡುಹಂದಿಗಳ ಹಿಂಡು ಚಿರತೆಯನ್ನು ಕಚ್ಚಿ ತಿನ್ನಲು ಯತ್ನಿಸುತ್ತಿದೆ ಎಂದರೆ ನೀವು ನಂಬಬಹುದೇ? ನಂಬುವುದಿಲ್ಲ ಅಂತಾದರೆ ಒಮ್ಮೆ ಈ ವಿಡಿಯೋ ನೋಡಿ.
ಸಾಮಾನ್ಯವಾಗಿ ಚಿರತೆಯೊಂದು ಕಾಡುಹಂದಿಗಳನ್ನು ಬೇಟೆಯಾಡುವುದು ಸಾಮಾನ್ಯವಾದ ವಿಚಾರ, ಆದರೆ ಚಿರತೆಯನ್ನೇ ಕಾಡುಹಂದಿಗಳು ಬೇಟೆಯಾಡುವುದು ಅಂದ್ರೆ ಹೇಗಿರುತ್ತೆ? ಇದೊಂದು ಕಲ್ಪನೆಗೂ ಮೀರಿದ ವಿಚಾರ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿಡಿಯೊದಲ್ಲಿ ಕಾಡಾನೆಗಳ ಗುಂಪೊಂದು ಚಿರತೆಯನ್ನು ಕಚ್ಚಿ ತಿನ್ನಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಮೂರು ಕಾಡು ಹಂದಿಗಳು ಚಿರತೆಯನ್ನು ಅಟ್ಟಾಡಿಸಿಕೊಂಡು ಬಂದು ನಡು ರಸ್ತೆಯಲ್ಲಿ ಅದನ್ನು ಹಿಡಿದು ಕಚ್ಚಿ ತಿನ್ನಲು ಪ್ರಯತ್ನಿಸುತ್ತಿರುವುದ ಕಂಡು ಬಂದಿದೆ. ಈ ಅಪರೂಪದ ದೃಶ್ಯವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಆದರೆ ಈ ಹಂದಿಗಳು ಚಿರತೆಯನ್ನು ಕೊಂದಿವೆಯೇ ಇಲ್ಲವೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಈ ವಿಡಿಯೋ ತಮಿಳುನಾಡಿನ ಪಳನಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿರತೆ ಕಾಡುಹಂದಿಗಳ ಕೈಯಲ್ಲಿ ಸಿಕ್ಕು ವಿವಲವಿಲ ಒದ್ದಾಡಿದ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ. ಹಂದಿಗಳ ಹಿಂಡು ಚಿರತೆಯ ದೇಹವನ್ನು ತಿನ್ನಲು ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ವೈಲ್ಡ್ ಲೆನ್ಸ್ ಇಂಡಿಯಾದ ಟ್ವಿಟರ್ ಹ್ಯಾಂಡಲ್ನಿಂದ ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
Disturbing Visuals
— WildLense® Eco Foundation 🇮🇳 (@WildLense_India) May 5, 2022
Claimed to be from Palani to Kodaikanal road. Probable reason might be RTA. pic.twitter.com/z79BNm4lsZ

ನಡುರಸ್ತೆಯಲ್ಲಿ ನಡೆದ ಈ ಭಯಾನಕ ದೃಶ್ಯವನ್ನು ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ಕಾಡುಹಂದಿಗಳು ಚಿರತೆಯನ್ನು ತಿನ್ನಲು ಯತ್ನಿಸುತ್ತಿರುವ ರೀತಿ ನೋಡಿದರೆ ಆ ಚಿರತೆ ಬದುಕಿರಲು ಸಾಧ್ಯವಿಲ್ಲ ಎಂದು ಭಾವಿಸಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications