ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!

By Gururaj
|
Google Oneindia Kannada News

Recommended Video

ಎಲ್ಲರ ಗಮನ ಸೆಳೆದ ಕರುಣಾನಿಧಿ ಶವಪೆಟ್ಟಿಗೆ ಮೇಲಿನ ಬರಹ | Oneindia Kannada

ಚೆನ್ನೈ, ಆಗಸ್ಟ್ 08 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕರುಣಾನಿಧಿ ಅವರ ಪಾರ್ಥಿವ ಶರೀರಿ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲು ಗಮನ ಸೆಳೆಯುತ್ತಿದೆ.

5 ಬಾರಿ ಮುಖ್ಯಮಂತ್ರಿಯಾಗಿ, 13 ಬಾರಿ ಶಾಸಕರಾಗಿ ಎಂ.ಕರುಣಾನಿಧಿ ಜನರಿಗೊಸ್ಕರ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಸುಮಾರು 60 ವರ್ಷಗಳ ಕಾಲ ಸಕ್ರಿಯ ರಾಜಕಾರಣವನ್ನು ಮಾಡಿದ್ದಾರೆ. ಈಗ ಅವರು ಚಿರ ನಿದ್ರೆಗೆ ಜಾರಿದ್ದಾರೆ.

ಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿ

ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲೆ ಬರೆದಿರುವ ಸಾಲು ಎಲ್ಲರ ಗಮನ ಸೆಳೆಯುತ್ತಿದೆ. ಕರುಣಾನಿಧಿ ಅವರು ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಅವರ ಪಾರ್ಥಿವ ಶರೀರ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲನ್ನು ಅಭಿಮಾನಿಗಳು ಕಂಡು ಭಾವುಕರಾಗಿದ್ದಾರೆ.

ಕಲೈನಾರ್‌ ಕಣ್ಮರೆ: 80 ಕಡೆ ಹಿಂಸಾಚಾರ, ಕಾಲ್ತುಳಿತದಲ್ಲಿ ಗಂಭೀರ ಗಾಯ ಕಲೈನಾರ್‌ ಕಣ್ಮರೆ: 80 ಕಡೆ ಹಿಂಸಾಚಾರ, ಕಾಲ್ತುಳಿತದಲ್ಲಿ ಗಂಭೀರ ಗಾಯ

What written on M Karunanidhi coffin

ಶವ ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು ತಮಿಳಿನಲ್ಲಿ ಬರೆಯಲಾಗಿದೆ. ಮತ್ತೊಂದು ಬದಿಯಲ್ಲಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿದೆ.

ಎಂ.ಕರುಣಾನಿಧಿ ಅವರ ಅಂತ್ಯ ಸಂಸ್ಕಾರದ ಬಗ್ಗೆ ಇದ್ದ ಗೊಂದಲ ಬಗೆಹರಿದಿದೆ. ಚೆನ್ನೈನ ಮರೀನಾ ಬಿಚ್‌ನಲ್ಲಿ ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಸಂಜೆ 4 ಗಂಟೆಗೆ ರಾಜಾಜಿ ಹಾಲ್‌ನಿಂದ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ.

English summary
Former Chief Minister and DMK chief M.Karunanidhi passed away on August 7, 2018. Body was at Rajaji Hall, In a coffin written that. 'A person who continued to work without rest, now takes rest'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X