ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನ ಪೂರ್ವಜರ ಗ್ರಾಮದಲ್ಲಿ ಪೂಜೆ
ಚೆನ್ನೈ, ನವೆಂಬರ್ 3: ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಗೆಲುವಿಗಾಗಿ ತಮಿಳುನಾಡಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
'ಚುನಾವಣೆಗೂ ಮುನ್ನ ಮತ ಚಲಾಯಿಸಲು ಇದು ನಮ್ಮ ಕೊನೆಯ ದಿನ. ಹೀಗಾಗಿ ನಾನು ಬೆಥ್ಲೆಹೆಮ್ನಲ್ಲಿ ಈ ಸಮರ ನೆಲೆಯಲ್ಲಿ ನಮಗೆ ಗೆಲುವು ತಂದುಕೊಡಲು ನೆರವು ನೀಡುತ್ತಿರುವ ಮತದಾರರು ಮತ್ತು ಕಾರ್ಯಕರ್ತರ ಜತೆಗೆ ಚುನಾವಣಾ ಪ್ರಚಾರ ನಡೆಸುತ್ತಿದ್ದೇನೆ' ಎಂದು ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದರು.
ದೂರ ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಭರ್ಜರಿ ಪ್ರಚಾರ ನಡೆಸಿದ್ದರೆ, ಸಪ್ತಸಾಗರದ ಸಾವಿರಾರು ಕಿಮೀ ಈಚೆ ಇರುವ ತಮಿಳುನಾಡಿನ ಕೃಷಿ ಅವಲಂಬಿತ ಸಣ್ಣ ಗ್ರಾಮದ ಜನರು ಕಮಲಾ ಅವರ ಗೆಲುವಿಗಾಗಿ ಜತೆಗೂಡಿ ಪ್ರಾರ್ಥಿಸುತ್ತಿದ್ದಾರೆ.
ಈ ಗ್ರಾಮದ ಬಹುತೇಕ ಜನರಲ್ಲಿ ಕಮಲಾ ಹ್ಯಾರಿಸ್ ನೋಡಲು ಹೇಗಿದ್ದಾರೆ ಎನ್ನುವುದೂ ತಿಳಿದಿಲ್ಲ. ಆದರೆ ಅವರಿಗೆ ಅದರ ಅಗತ್ಯವಿಲ್ಲ. ಏಕೆಂದರೆ ಕಮಲಾ ಹ್ಯಾರಿಸ್ ಅವರ ಕುಟುಂಬದ ಮೂಲ ತಿರುವರೂರ್ ಜಿಲ್ಲೆಯ ಮನ್ನರಗುಡಿ ತಾಲ್ಲೂಕಿನ ದುಲಸೆಂದ್ರಾಪುರಂ. ಇಲ್ಲಿನ ಜನರಿಗೆ ಕಮಲಾ ತಮ್ಮವರೆಂಬ ಪ್ರೀತಿಯೇ ಸಾಕು, ಅವರ ಗೆಲುವಿಗಾಗಿ ಪ್ರಾರ್ಥಿಸಲು. ಮುಂದೆ ಓದಿ.

ಗ್ರಾಮದ ಎಲ್ಲೆಡೆ ಪೋಸ್ಟರ್
ಸ್ಥಳೀಯ ದೇವತೆ ಅಯ್ಯನರ್ ದೇವಸ್ಥಾನದಲ್ಲಿ ಮಂಗಳವಾರ ಗ್ರಾಮಸ್ಥರೆಲ್ಲ ಸೇರಿ ಕಮಲಾ ಅವರಿಗೆ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಮತ್ತು ಅವರ ಕುಟುಂಬ ದುಲಸೆಂದ್ರಾಪುರಂ ಗ್ರಾಮದವರಾಗಿದ್ದಾರೆ. ಕಮಲಾ ಅವರು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎನ್ನುವುದು ತಿಳಿಯುತ್ತಿದ್ದಂತೆಯೇ ಗ್ರಾಮದ ಅನೇಕ ಕಡೆ ಅವರ ಚಿತ್ರವಿರುವ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು.

ದೇವಸ್ಥಾನದಲ್ಲಿ ವಿಶೇಷ ಪೂಜೆ
ಮಂಗಳವಾರ ದೇವಸ್ಥಾನದ ಹೊರಭಾಗದಲ್ಲಿ ಫ್ಲೆಕ್ಸ್ ಅಂಟಿಸಿದ ಗ್ರಾಮಸ್ಥರು, ಅಭಿಷೇಕ ಸೇರಿದಂತೆ ಅನೇಕ ಪೂಜಾ ವಿಧಿಗಳನ್ನು ನಡೆಸಿದರು. ಈ ದೇವಸ್ಥಾನವು ಕಮಲಾ ಅವರ ಕುಟುಂಬದ ಮೂಲ ದೇವಸ್ಥಾನವಾಗಿದೆ. ಮತದಾನದ ದಿನವಾದ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದರು.

ಕಮಲಾ ಗೆಲ್ಲುವುದನ್ನು ಬಯಸಿದ್ದೇವೆ
'ಅಮೆರಿಕದಲ್ಲಿ ಹೆಚ್ಚಿನ ಮತಗಳು ಆನ್ಲೈನ್ ಮೂಲಕವೇ ನಡೆಯುತ್ತದೆ ಎನ್ನುವುದು ಗ್ರಾಮಸ್ಥರಿಗೆ ತಿಳಿದಿದೆ. ಆದರೂ ಚುನಾವಣಾ ದಿನದಂದು ಪೂಜೆ ಸಲ್ಲಿಸಲು ಬಯಸಿದ್ದರು. ನಾವೆಲ್ಲರೂ ಕಮಲಾ ಅವರು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಆಶಿಸಿದ್ದೇವೆ. ಈ ವಾರ ನಮಗೆ ಫಲಿತಾಂಶ ಸಿಗುವ ನಿರೀಕ್ಷೆಯಿದೆ' ಎಂದು ಗ್ರಾಮಸ್ಥ ಸೆಂಥಿಲ್ ಕುಮಾರನ್ ತಿಳಿಸಿದರು.

ಚೆನ್ನೈನಲ್ಲಿ 'ಚಿಟ್ಟಿ'
ಚೆನ್ನೈನಲ್ಲಿ ಕಮಲಾ ಅವರ ಚಿಕ್ಕಮ್ಮ (ತಾಯಿಯ ತಂಗಿ) ಮತ್ತು ಇತರೆ ಸಂಬಂಧಿಕರು ನೆಲೆಸಿದ್ದಾರೆ. ಅವರು ಚುನಾವಣೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ. ಪಕ್ಷದ ಅಭ್ಯರ್ಥಿಯ ನಾಮನಿರ್ದೇಶನವನ್ನು ಆಗಸ್ಟ್ 18ರಂದು ಒಪ್ಪಿಕೊಂಡ ವೇಳೆ ಕಮಲಾ ಅವರು ತಮ್ಮ 'ಚಿಟ್ಟಿ'ಯ (ಚಿಕ್ಕಮ್ಮ) ಬಗ್ಗೆ ಪ್ರಸ್ತಾಪಿಸಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications