ಹೆಸರು ಬದಲಾವಣೆ ಈಗ ತಮಿಳುನಾಡು ಸರದಿ: 3,000 ಸ್ಥಳಗಳಿಗೆ ಮರುನಾಮಕರಣ
ಚೆನ್ನೈ, ಡಿಸೆಂಬರ್ 13: ಸ್ಥಳಗಳ ಹೆಸರು ಬದಲಾವಣೆಯ ಸಂಪ್ರದಾಯ ನೆರೆಯ ತಮಿಳುನಾಡಿಗೂ ಕಾಲಿಟ್ಟಿದೆ. ಆದರೆ, ಇಲ್ಲಿ ಒಂದೆರಡು ಸ್ಥಳಗಳ ಹೆಸರು ಬದಲಾಗುತ್ತಿಲ್ಲ. ಸುಮಾರು 3 ಸಾವಿರ ಸ್ಥಳಗಳಿಗೆ ಮರುನಾಮಕರಣ ಮಾಡಲಾಗುತ್ತಿದೆ.
ಇಂಗ್ಲಿಷ್ ಪ್ರಭಾವಕ್ಕೆ ಒಳಗಾಗಿ ಮೂಲ ಹೆಸರು ಕಳೆದುಕೊಂಡಿದ್ದ ಸ್ಥಳಗಳಿಗೆ ಮರಳಿ ಹಳೆಯ ಹೆಸರನ್ನು ನೀಡುವುದು ಮುಖ್ಯಮಂತ್ರಿ ಈ. ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರದ ಉದ್ದೇಶ.
ಮುಂದಿನ ಕೆಲವು ವಾರಗಳಲ್ಲಿ ಈ ನಿರ್ಧಾರಕ್ಕೆ ಚಾಲನೆ ಸಿಗಲಿದೆ. ಈ 3 ಸಾವಿರ ಸ್ಥಳಗಳಲ್ಲಿ ಕೆಲವು ಪ್ರಮುಖ ಪ್ರದೇಶಗಳೂ ಸೇರಿವೆ.

ಟ್ರಿಪ್ಲಿಕೇನ್- ತಿರುವಲ್ಲಿಕೇನಿ, ತಿರುಚಿ-ತಿರುಚಿರಾಪಳ್ಳಿ, ಟುಟಿಕಾರ್ನ್-ತೂತುಕುಡಿ ಮತ್ತು ಪೂನಮಲ್ಲೆ-ಪೂವಿರುಂಧವಲ್ಲಿ ಎಂದು ಬದಲಾಗಲಿವೆ.
ತಮಿಳುನಾಡಿನ 3,000 ಸ್ಥಳಗಳ ಹೆಸರನ್ನು ಬದಲಿಸುವ ಸರ್ಕಾರದ ಆದೇಶವು ಶೀಘ್ರವೇ ಹೊರಬೀಳಲಿದೆ. ಎರಡು ವಾರಗಳಲ್ಲಿ ಆದೇಶ ಜಾರಿಯಾಗಲಿದೆ ಎಂದು ತಮಿಳು ಅಧಿಕೃತ ಭಾಷೆ ತಮಿಳು ಸಂಸ್ಕೃತಿ ಸಚಿವ ಮಾ ಫೋಯಿ ಕೆ. ಪಾಂಡಿಯರಾಜನ್ ತಿಳಿಸಿದ್ದಾರೆ.
32 ಜಿಲ್ಲೆಗಳಲ್ಲಿನ 3 ಸಾವಿರ ಸ್ಥಳಗಳ ಹೆಸರು ಬದಲಾವಣೆಯನ್ನು ಅಂತಿಮಗೊಳಿಸಲು ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಲಾಗಿತ್ತು. ಇತಿಹಾಸಕಾರರು ಮತ್ತು ತಮಿಳು ವಿಧ್ವಾಂಸರಿಂದ ಸಲಹೆಗಳನ್ನು ಸಮಿತಿ ಪರಿಶೀಲನೆಗೆ ಒಳಪಡಿಸಿತ್ತು.
ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಕೆಲವು ಸ್ಥಳಗಳ ಹೆಸರಿನ ಬದಲಾವಣೆ ಮಾಡಿತ್ತು. ತಮಿಳುನಾಡು ಸರ್ಕಾರದ ನಿರ್ಧಾರವನ್ನು ಸ್ಥಳೀಯ ಬಿಜೆಪಿ ಸ್ವಾಗತಿಸಿದ್ದು, ಆದರೆ ಇದು ತಡವಾದ ನಡೆಯಾಗಿದೆ ಎಂದು ಟೀಕೆಯನ್ನು ಸಹ ವ್ಯಕ್ತಪಡಿಸಿದೆ.
'ಬ್ರಿಟಿಷ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜ್ಯದಲ್ಲಿ ಅನೇಕ ಸ್ಥಳಗಳಿಗೆ ಅವರ ಹೆಸರನ್ನು ಇರಿಸಲಾಗಿದೆ. ಅಂತಹ ಐತಿಹಾಸಿಕ ಹೆಸರುಗಳನ್ನು ಬದಲಿಸಬಾರದು' ಎಂದು ತಂದೈ ಪೆರಿಯಾರ್ ದ್ರಾವಿಡರ್ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ. ರಾಮಕೃಷ್ಣನ್ ಒತ್ತಾಯಿಸಿದ್ದಾರೆ.
ಆದರೆ, ಉಳಿದ ಹೆಸರುಗಳನ್ನು ಬದಲಿಸಲೇಬೇಕು ಎಂದೂ ಅವರು ಆಗ್ರಹಿಸಿದ್ದಾರೆ. 'ಅನೇಕ ಸ್ಥಳಗಳು ಜಾತಿ ಸೂಚಕ ಹೆಸರುಗಳನ್ನು ಒಳಗೊಂಡಿವೆ. ಗೌಂಡರ್ ಪಾಳ್ಯಂ, ನಾಯಕರಪಾಳ್ಯಂ ಮತ್ತು ಪಲ್ಲಪಾಳ್ಯಂ- ಇಂತಹ ಹೆಸರುಗಳನ್ನು ಕೂಡ ಬದಲಿಸಲು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಎಂಜಿ ರಾಮಚಂದ್ರನ್ ಅವರ ಸರ್ಕಾರದ ಅವಧಿಯಲ್ಲಿ ಜಾರಿಯಾದ ಆದೇಶಕ್ಕೆ ಅನುಗುಣವಾಗಿ ಹೆಸರು ಬದಲಾವಣೆಯಾಗಬೇಕು' ಎಂದು ಹೇಳಿದ್ದಾರೆ.
ತಮಿಳುನಾಡಿನ ಅನೇಕ ಬೀದಿಗಳಿಗೆ ಇರಿಸಿರುವ ಜಾತಿ ಸೂಚಕ ಹೆಸರುಗಳನ್ನು ತೆಗೆದುಹಾಕುವಂತೆ 1979ರಲ್ಲಿ ಆಗಿನ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಆದೇಶ ಹೊರಡಿಸಿದ್ದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications