ಇನ್ನು ಮುಂದೆ ಮಾ.30 ವಿಶ್ವ ಇಡ್ಲಿ ದಿನ
ಚೆನ್ನೈ, ಮಾರ್ಚ್ 31 : ದಕ್ಷಿಣ ಭಾರತದ ಜನರ ನೆಚ್ಚಿನ ತಿಂಡಿ ಇಡ್ಲಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿದೆ. ಹೌದು, ಮಾರ್ಚ್ 30ಅನ್ನು 'ವಿಶ್ವ ಇಡ್ಲಿ ದಿನ'ವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಸೋಮವಾರ 50 ಕೆಜಿ ಇಡ್ಲಿ ಕತ್ತರಿಸಿ ಮೊದಲ ವಿಶ್ವ ಇಡ್ಲಿ ದಿನವನ್ನು ಆಚರಣೆ ಮಾಡಲಾಗಿದೆ.
ತಮಿಳುನಾಡು ಬಾಣಸಿಗರ ಒಕ್ಕೂಟ ಹಾಗೂ ಆಟೋ ಚಾಲಕ ಇನಿಯವನ್ ಸೇರಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಂದಿನ ವರ್ಷದಿಂದ ಅಮೆರಿಕಾ, ಕೆನಡಾ, ಜರ್ಮನಿಯಲ್ಲಿಯೂ ಇಡ್ಲಿ ದಿನಾಚರಣೆಯನ್ನು ನಡೆಸಲು ಒಕ್ಕೂಟ ನಿರ್ಧರಿಸಿದೆ. [ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!]

ಚೆನ್ನೈನವರಾದ ಇನಿಯವನ್ ಆಟೋ ಚಾಲಕರಾಗಿದ್ದರು. ಆದರೆ, ಅವರಿಗೆ ಇಡ್ಲಿ ತಯಾರಿಸುವುದು ಬಹಳ ಮೆಚ್ಚಿನ ಕೆಲಸವಾಗಿತ್ತು. ಆದ್ದರಿಂದ ಅವರು ಆಟೋ ಚಾಲಕ ವೃತ್ತಿಗೆ ಗುಡ್ಬೈ ಹೇಳಿ ಇಡ್ಲಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. [ಗಂಟಲಲ್ಲಿ ಸಿಕ್ಕಿಕೊಂಡ ಇಡ್ಲಿ ವ್ಯಕ್ತಿಯ ಪ್ರಾಣ ತಿಂದಿತು!]
ನಿತ್ಯ ಬೇರೆ-ಬೇರೆ ರೀತಿಯ ಇಡ್ಲಿ ತಿನ್ನಬೇಕು ಎಂದು ಹೇಳುವ ಇನಿಯವನ್ ಬಿಟ್ರೋಟ್, ಕ್ಯಾರೇಟ್, ಚಾಕೊಲೇಟ್ ಮುಂತಾದವುಗಳಿಂದ ಇಡ್ಲಿಯನ್ನು ತಯಾರಿಸುತ್ತಾರೆ. ಮಾ.30ರಂದು ತಮ್ಮ ಹುಟ್ಟು ಹಬ್ಬದ ದಿನವನ್ನು ಇಡ್ಲಿ ದಿನವಾಗಿ ಆಚರಣೆ ಮಾಡಲು ಅವರು ನಿರ್ಧರಿಸಿದ್ದರು. [ಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ]
ತಮಿಳುನಾಡು ಬಾಣಸಿಗರ ಒಕ್ಕೂಟ ಇನಿಯವನ್ ನಿರ್ಧಾರಕ್ಕೆ ಬೆಂಬಲ ನೀಡಿ ಇಡ್ಲಿಗೆ ಜೈ ಅಂದಿದ್ದಾರೆ. ಆದ್ದರಿಂದ, ಇನ್ನುಮುಂದೆ ಮಾ.30 ವಿಶ್ವ ಇಡ್ಲಿ ದಿನವಾಗಲಿದೆ. ಸೋಮವಾರ ಇನಿಯವನ್ ತಾವು ತಯಾರು ಮಾಡಿದ 50 ಕೆಜಿ ಇಡ್ಲಿಯನ್ನು ಕಟ್ ಮಾಡುವ ಮೂಲಕ ಮೊದಲ ಇಡ್ಲಿ ದಿನವನ್ನು ಸಂಭ್ರಮದಿಮದ ಆಚರಣೆ ಮಾಡಿದ್ದಾರೆ. ಬೆಳಗಿನ ಉಪಹಾರಕ್ಕೆ ನೀವು ಇಡ್ಲಿಯನ್ನು ಇಷ್ಟಪಡುತ್ತೀರಾ?
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications