ಶ್ರೀಲಂಕಾದ ಸ್ಫೋಟದಲ್ಲಿ ಅದೃಷ್ಟವಶಾತ್ ಪಾರಾದ ನಟಿ ರಾಧಿಕಾ
ಕೊಲಂಬೋ, ಏಪ್ರಿಲ್ 21 : ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ತಮಿಳು ಚಿತ್ರರಂಗದ ನಟಿ ರಾಧಿಕಾ ಶರತ್ ಕುಮಾರ್ ಅವರು ಅದೃಷ್ಟವಶಾತ್ ಶ್ರೀಲಂಕಾದ ಬಾಂಬ್ ಸ್ಫೋಟದಿಂದ ಪಾರಾಗಿದ್ದಾರೆ. ಈ ಕುರಿತಂತೆ ರಾಧಿಕಾ ಅವರು ಟ್ವೀಟ್ ಮಾಡಿ, ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಅವರು ಈಗ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ'ದಲ್ಲಿ ಅಭಿನಯಿಸುತ್ತಿದ್ದಾರೆ.
ಶ್ರೀಲಂಕಾದ ಕೊಲಂಬೋ ಸೇರಿದಂತೆ ಹಲವೆಡೆ 8 ಬಾರಿ ಬಾಂಬ್ಸ್ಫೋಟವಾಗಿದ್ದು, ಸುಮಾರು 185 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವು, 500 ಮಂದಿಗೆ ಗಾಯ
ಬಾಂಬ್ಸ್ಫೋಟವಾದ ಹೋಟೆಲ್ಗಳಲ್ಲಿ ಒಂದಾದ ಸಿನ್ನಾಮೋನ್ ಗ್ರ್ಯಾಂಡ್ನಲ್ಲಿ ರಾಧಿಕಾ ಶರತ್ಕುಮಾರ್ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಟ್ವೀಟ್ ಮಾಡಿ, ಆ ಹೋಟೆಲ್ನಿಂದ ಹೊರಟ ನಂತರ ಅಲ್ಲಿ ಬಾಂಬ್ ಸ್ಫೋಟವಾಗಿದೆ ಎಂದಿದ್ದಾರೆ.
OMG bomb blasts in Sri Lanka, god be with all. I just left Colombo Cinnamongrand hotel and it has been bombed, can’t believe this shocking.
— Radikaa Sarathkumar (@realradikaa) April 21, 2019
'ಘಟನೆ ನಡೆದ ವಿಷಯ ನನಗೆ ನ್ಯೂಸ್ನಿಂದ ತಿಳಿದಿದ್ದು, ಇದರಿಂದ ಆಘಾತವಾಗಿದೆ. ಇದು ವಿಷಾದನೀಯ ಘಟನೆ. ನೊಂದವರ ಕುಟುಂಬದವರಿಗೆ ದೇವರು ಶಕ್ತಿ ಕೊಡಲಿ' ಎಂದು ಟ್ವೀಟ್ ಮಾಡಿದ್ದಾರೆ.
Pl be safe Mam ! It’s really scary hearing something like that ...Come back in good shape and safely ..Lots of love to you ❤️.
— Ramya Subramanian (@ramyavj) April 21, 2019
ಕೊಲಂಬೋ ಸ್ಫೋಟಕ್ಕೆ ಕನಿಷ್ಠ 156 ಸಾವು; ಸುಷ್ಮಾ ಸ್ವರಾಜ್ ಟ್ವೀಟ್
ಕೊಲಂಬೋದಲ್ಲಿ ಇಂದು ಬಾಂಬ್ಸ್ಫೋಟ ನಡೆದ ಚರ್ಚ್ಗೂ ರಾಧಿಕಾ ಅವರು ಭೇಟಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ಈ ಬಾರಿ ಇಂದು ಚರ್ಚ್ ಗೆ ಭೇಟಿ ನೀಡಿರಲಿಲ್ಲ. ಆದರೆ, ಅವರು ಉಳಿದುಕೊಂಡ ಹೋಟೆಲ್ ನಲ್ಲಿ ಸ್ಫೋಟವಾಗಿದೆ.