ಚಿನ್ನಮ್ಮ ಹೊಸ ದಾಳ: ಜಯ ಸೋದರಳಿಯ ದೀಪಕ್ ಗೆ ಪಟ್ಟ ಕಟ್ಟಲು ಕಸರತ್ತು

ತಮಿಳುನಾಡು ಮುಖ್ಯಮಂತ್ರಿಯಾಗುವ ತಮ್ಮ ಕನಸು ಭಗ್ನಗೊಂಡ ಬೆನ್ನಲ್ಲೇ ಜಯಲಲಿತಾ ಸೋದರಳಿಯ ದೀಪಕ್ ಅವರನ್ನು ಸಿಎಂ ಪಟ್ಟಕ್ಕೆ ತಂದು ಕೂರಿಸಲು ನಿರ್ಧರಿಸಿದ ಶಶಿಕಲಾ

ಚೆನ್ನೈ, ಫೆಬ್ರವರಿ 14: ತಮಗೆ ತಮಿಳುನಾಡು ಸಿಎಂ ಪಟ್ಟ ತಪ್ಪಿಹೋಗಿದ್ದರೂ, ತಮ್ಮ ಆಯ್ಕೆಯ ವ್ಯಕ್ತಿಯೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆ ಮೂಲಕ ಇಡೀ ಆಡಳಿತ ವ್ಯವಸ್ಥೆ ಹಾಗೂ ಎಐಎಡಿಎಂಕೆ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಶಶಿಕಲಾ ಮತ್ತೊಂದು ದಾಳ ಹಾಕಿದ್ದಾರೆ.

ಅದರಂತೆ, ಜಯಲಲಿತಾ ಸಾವಿನ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ್ದ, ಜಯಲಲಿತಾ ಅವರ ಸೋದರಳಿಯ ಆಗಿರುವ ದೀಪಕ್ ಜಯಕುಮಾರ್ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸಲು ಶಶಿಕಲಾ ತಮ್ಮ ಆಪ್ತರಿಗೆ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.[20 ವರ್ಷಗಳ ನಂತರ ಸತ್ಯಕ್ಕೆ ಗೆಲುವು: ಸ್ವಾಮಿ]

Sasikala wants Deepak Jayakumar to become Chief Minister

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಶಶಿಕಲಾ ಅವರು ಇಂದು ಸಂಜೆಯ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶರಣಾಗಬೇಕಿದೆ. ಅಷ್ಟರೊಳಗೆ ದೀಪಕ್ ಅವರನ್ನು ಕರೆಸಿ ಮಾತನಾಡಿ ಸ್ಪಷ್ಟ ನಿಲುವು ತಾಳಲು ಪ್ರಯತ್ನಗಳು ಸಾಗಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+