'ಮೆರ್ಸಲ್' ಚಿತ್ರದ ಬಗ್ಗೆ ರಜನಿ ಮೆಚ್ಚುಗೆ, ಬಿಜೆಪಿ ಪೇಚಿಗೆ
ಚೆನ್ನೈ, ಅಕ್ಟೋಬರ್ 23: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರೆನಿಸಿರುವ ವಿಜಯ್ ಅವರ ಹೊಚ್ಚ ಹೊಸ ಚಿತ್ರ ಮೆರ್ಸಲ್ ನಲ್ಲಿ ಮೋದಿ ಅವರ ಸರ್ಕಾರದ ವಿರುದ್ಧ ಡೈಲಾಗ್ ಗಳಿವೆ ಎಂದು ಬಿಜೆಪಿ ನಾಯಕರು ಗರಂ ಆಗಿರುವುದು ಗೊತ್ತಿರಬಹುದು.
ಈಗ ಗಾಯದ ಮೇಲೆ ಬರೆ ಎಳೆದಂತೆ, ವಿಜಯ್ ಗೆ ಚಿತ್ರರಂಗದ ಹಲವಾರು ಗಣ್ಯರಿಂದ ಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ರಜನಿಕಾಂತ್ ಅವರ ಟ್ವೀಟ್ ಈಗ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
'ಮೆರ್ಸಲ್' ಸಿನಿಮಾ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದೆ ಎಂದು ರಜನಿ ಅವರು ಮಾಡಿರುವ ಟ್ವೀಟ್ ಯಾವ ಅರ್ಥವನ್ನು ನೀಡುತ್ತಿದೆಯೋ ಗೊತ್ತಿಲ್ಲ. ರಜನಿ ಕೇವಲ ಚಿತ್ರದ ಬಗ್ಗೆ ಮಾತ್ರ ಪ್ರಶಂಸೆ ವ್ಯಕ್ತಪಡಿಸಿರಬಹುದು. ಆದರೆ, ರಾಜಕೀಯ ನಾಯಕರಿಗೆ ಈ ಟ್ವೀಟ್ ನಲ್ಲಿ ಭಾಷೆ ನೇರವಾಗಿ ತಟ್ಟಿದ್ದು, ವಿಜಯ್ ಪರ ರಜನಿ ನಿಂತಿರುವುದು ಸ್ಪಷ್ಟವಾಗಿದೆ.
ಸರಳ ಟ್ವೀಟ್ ಮೂಲಕ ರಜನಿ ಸೇಫ್ ಗೇಮ್ ಆಡುತ್ತಿದ್ದಾರಾ? ಅಥವಾ ಸಂಪೂರ್ಣವಾಗಿ ಬಿಜೆಪಿ ಆಫರ್ ಗಳನ್ನು ತೊರೆದು ವಿಪಕ್ಷಗಳ ನಿಂತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ ಇಷ್ಟೇ, ವಿಜಯ್ ಹೇಳಿ ಕೇಳಿ ಅಪ್ಪಟ ಕಾಂಗ್ರೆಸ್ ಕೂಸು. ಅಲ್ಪ ಸಂಖ್ಯಾತ ನಾಯಕನನ್ನಾಗಿ ವಿಜಯ್ ರನ್ನು ಬಳಸಿಕೊಳ್ಳಲು ಕಾಂಗ್ರೆಸ್ ಈ ಹಿಂದೆ ಯತ್ನಿಸಿದ್ದು ಸುಳ್ಳಲ್ಲ.

'ಮೆರ್ಸಲ್' ಚಿತ್ರದ ಬಗ್ಗೆ ಆರೋಪ
'ಮೆರ್ಸಲ್' ಚಿತ್ರದಲ್ಲಿ ಮೋದಿ ಸರ್ಕಾರದ ಜಿಎಸ್ಟಿ, ಡಿಜಿಟಲ್ ಇಂಡಿಯಾ ಕುರಿತಂತೆ ಅವಹೇಳನಕಾರಿ ಡೈಲಾಗ್ ಗಳಿವೆ. ಇಂಥ ದೃಶ್ಯಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಬಿಜೆಪಿ ಆರೋಪಿಸಿದೆ.
|
ವಿಜಯ್ ಚಿತ್ರದ ಬೆಂಬಲಕ್ಕೆ ನಿಂತ ರಜನಿ
ರಜನಿಕಾಂತ್ ಸಹ 'ಮೆರ್ಸಲ್' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. 'ಚಿತ್ರ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದೆ....ವೆಲ್ ಡನ್!! 'ಮೆರ್ಸಲ್' ಚಿತ್ರ ತಂಡಕ್ಕೆ ಅಭಿನಂದನೆಗಳು' ಎಂದು ರಜನಿ ಟ್ವೀಟ್ ಮಾಡಿದ್ದಾರೆ

ತಮಿಳು ಚಿತ್ರರಂಗದ ಗಣ್ಯರು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ, ಡಿಎಂಕೆ ನಾಯಕ ಸ್ಟಾಲಿನ್, ನಟ ಕಮಲ್ ಹಾಸನ್, ಕಬಾಲಿ ನಿರ್ದೇಶಕ ಪಾ ರಂಜಿತ್, ಪಿ.ಸಿ,ಶ್ರೀರಾಮ್, ಶ್ರೀ ವಿದ್ಯಾ ಸೇರಿದಂತೆ ಹಲವರು 'ಮೆರ್ಸಲ್'ಚಿತ್ರದ ಪರ ನಿಂತಿದ್ದಾರೆ. ಈಗ ರಜನಿ ಕೂಡಾ ಬೆಂಬಲ ವ್ಯಕ್ತಪಡಿಸಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ.

ರಜನಿಕಾಂತ್ ರಾಜಕೀಯ ಪ್ರವೇಶ
ರಾಜಕೀಯ ಪ್ರವೇಶ ಬಯಸಿರುವ ನಟ ರಜನಿಕಾಂತ್ ಅವರು ಈ ಹಿಂದೆ ಅನೇಕ ಬಾರಿ ಬಿಜೆಪಿ ಪರ ಹೇಳಿಕೆ ನೀಡಿದ್ದರು. ಟ್ವೀಟ್ ಮಾಡಿದ್ದರು. ಬಿಜೆಪಿ ಕೂಡಾ ರಜನಿಯನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಇನ್ನಿಲ್ಲದ್ದಂತೆ ಪ್ರಯತ್ನಿಸಿ ವಿಫಲವಾಯಿತು. ರಜನಿ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೂ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ಆಶಯ ಹೊಂದಲಾಗಿತ್ತು. ಆದರೆ, ಈಗ ರಜನಿ ತಟಸ್ಥರಾಗಿರುತ್ತಾರೋ ಅಥವಾ ಕಾಂಗ್ರೆಸ್ ಪರ ನಿಲ್ಲುತ್ತಾರೋ ಎಂಬ ಚರ್ಚೆ ಆರಂಭವಾಗಿದೆ.

ಚರ್ಚೆ ಅಗತ್ಯವೇ ಇಲ್ಲ
ಮರ್ಸೆಲ್ ಚಿತ್ರವಾಗಲಿ ಮತ್ತೊಂದು ಚಿತ್ರವಾಗಲಿ, ಸರ್ಕಾರದ ವಿರುದ್ಧ ದನಿ ಎತ್ತಿದ ಮಾತ್ರಕ್ಕೆ ಮಹಾಪರಾಧ ಎಂಬಂತೆ ಆಡಳಿತಾರೂಢ ಪಕ್ಷ ಪ್ರತಿಕ್ರಿಯಿಸುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಇನ್ನು ರಜನಿ ಅವರು ಚಿತ್ರವನ್ನು ಮೆಚ್ಚಿದ್ದಾರೆ ಹೊರತು ವಿಜಯ್ ಆಗಲಿ, ಕಾಂಗ್ರೆಸ್ ಪರವಾಗಲಿ ಹೇಳಿಕೆ ನೀಡಿಲ್ಲ ಹೀಗಾಗಿ ಇವೆಲ್ಲದರ ಚರ್ಚೆಯೆ ಅಗತ್ಯವಿಲ್ಲ ಎಂದು ಕಾಲಿವುಡ್ ನಲ್ಲಿ ಮಾತು ಕೇಳಿ ಬಂದಿವೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications