ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿಗೆ ಲಕ್ಷಾಂತರ ಜನರ ಕಣ್ಣೀರಿನೊಂದಿಗೆ ವಿದಾಯ

|
Google Oneindia Kannada News

Recommended Video

      ಕರುಣಾನಿಧಿ ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ | ಚೆನ್ನೈ ನಲ್ಲಿ ಅಂತ್ಯ ಸಂಸ್ಕಾರ | Oneindia Kannada

      ಚೆನ್ನೈ, ಆಗಸ್ಟ್ 08: ಲಕ್ಷಾಂತರ ಜನರ ಕಂಬನಿ...ಯಾವುದೇ ಸಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಸಕಲ ಸರ್ಕಾರಿ ಗೌರವದೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆ ಮರೀನಾ ಬೀಚ್‌ನಲ್ಲಿ ಬುಧವಾರ ಸಂಜೆ 6.50ಕ್ಕೆ ನಡೆಯಿತು.

      94 ವರ್ಷದ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಡಿಎಂಕೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಅಗಲಿದ ನಾಯಕರಿಗೆ ಕಣ್ಣೀರಿನ ವಿದಾಯ ಹೇಳಿದರು.

      ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!

      ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು? ಎಂಬ ಕುರಿತು ಮಂಗಳವಾರ ಸಂಜೆಯಿಂದ ಚರ್ಚೆ ನಡೆದಿತ್ತು. ಮದ್ರಾಸ್ ಹೈಕೋರ್ಟ್ ಆದೇಶದಂತೆ ಮರೀನಾ ಬೀಚ್‌ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

      Live Updates: Tamil Nadu former CM M Karunanidhis last rites at Chennai

      ಅಂತ್ಯಸಂಸ್ಕಾರಕ್ಕೂ ಮುನ್ನ ಚೆನ್ನೈನ ರಾಜಾಜಿಹಾಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಲವು ಸಚಿವರು, ತಮಿಳು ಚಿತ್ರರಂಗದ ಹಲವು ನಟರು, ನಿರ್ಮಾಪಕರು ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

      ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

      ಕರುಣಾನಿಧಿ ಅವರನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಕಪ್ಪು ಕನ್ನಡಕದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು, ಮತ್ತೊಂದು ಬದಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿತ್ತು.

      Newest FirstOldest First
      7:02 PM, 8 Aug

      ಯಾವುದೇ ಸಾಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ದಿ.ಕರುಣಾನಿಧಿ ಅಂತ್ಯಕ್ರಿಯೆ
      7:00 PM, 8 Aug

      ಕುಟುಂಬದವರಿಂದ ಅಂತಿಮ ನಮನ
      6:52 PM, 8 Aug

      'A person who continued to work without rest, now takes rest' ಎಂದು ಬರೆದ ಪೆಟ್ಟಿಗೆಯಲ್ಲಿಟ್ಟು ಕರುಣಾನಿಧಿ ಅಂತ್ಯ ಸಂಸ್ಕಾರ
      6:51 PM, 8 Aug

      ಶ್ರೀಗಂಧದ ಪೆಟ್ಟಿಗೆಗೆ ದಿ.ಕರುಣಾನಿಧಿ ಪಾರ್ಥಿವ ಶರೀರ ಸ್ಥಳಾಂತರ. ಕುಟುಂಬದಿಂದ ಅಂತಿಮ ನಮನ
      6:41 PM, 8 Aug

      ಅಂತಿಮ ನಮನ ಸಲ್ಲಿಸಿದ ರಾಹುಲ್ ಗಾಂಧಿ, ಅಳಗಿರಿ, ಗುಲಾಂ ನಬಿ ಆಜಾದ್, ಚಂದ್ರಬಾಬು ನಾಯ್ಡು, ಎಚ್.ಡಿ.ದೇವೇಗೌಡ
      6:25 PM, 8 Aug

      ದಿ.ಎಂ.ಕರುಣಾನಿಧಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಸೇನೆ ಮತ್ತು ತಮಿಳುನಾಡು ಪೊಲೀಸ್
      6:21 PM, 8 Aug

      ಮೊದಲು ಸಕಲ ಸರ್ಕಾರಿ ಗೌರವ ಸಲ್ಲಿಕೆ, ಬಳಿಕ ಅಂತ್ಯಕ್ರಿಯೆ
      Advertisement
      6:13 PM, 8 Aug

      ಮರೀನಾ ಬೀಚ್ ತಲುಪಿದ ಕರುಣಾನಿಧಿ ಪಾರ್ಥಿವ ಶರೀರದ ಮೆರವಣಿಗೆ, ಕೆಲವೇ ಕ್ಷಣದಲ್ಲಿ ಅಂತ್ಯಕ್ರಿಯೆ
      5:53 PM, 8 Aug

      ಮರೀನಾ ಬೀಚ್‌ಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
      5:52 PM, 8 Aug

      ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
      5:47 PM, 8 Aug

      ಕರುಣಾನಿಧಿ ಶವಯಾತ್ರೆ ಆರಂಭ, ರಸ್ತೆಯ ಇಕ್ಕೆಲದಲ್ಲಿ ಸೇರಿರುವ ಸಾವಿರಾರು ಅಭಿಮಾನಿಗಳು
      5:42 PM, 8 Aug

      ರಾಜಾಜಿ ಹಾಲ್ ನಿಂದ ಮರೀನಾ ಬೀಚ್ ನತ್ತ ಮೂರು ಕಿ ಮೀ ದೂರ ಕ್ರಮಿಸಲಿರುವ ಶವಯಾತ್ರೆ
      Advertisement
      5:39 PM, 8 Aug

      ಮರೀನಾಬೀಚ್ ನತ್ತ ಶವಯಾತ್ರೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಂತ್ಯ ಸಂಸ್ಕಾರ
      3:51 PM, 8 Aug

      ಕರುಣಾನಿಧಿ ಅಂತಿಮ ಯಾತ್ರೆಗೆ ಕ್ಷಣಗಣನೆ. 4 ಗಂಟೆಯಿಂದ ಆರಂಭವಾಗಲಿರುವ ಅಂತಿಮ ಯಾತ್ರೆ.
      3:44 PM, 8 Aug

      ಕಾಲ್ತುಳುತದಿಂದ ಗಾಯಗೊಂಡವರನ್ನು ಚೆನ್ನೈನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
      3:40 PM, 8 Aug

      ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಅರ್ಹತಾ ಪಂದ್ಯ ರದ್ದುಗೊಳಿಸಿದ ತಮಿಳುನಾಡು ಪ್ರೀಮಿಯರ್ ಲೀಗ್. ನಾಳೆಯ ಪಂದ್ಯವೂ ರದ್ದುಗೊಳ್ಳುವ ಸಾಧ್ಯತೆ.
      3:23 PM, 8 Aug

      ಮರೀನಾಬೀಚ್ ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮಾಡಲು ಮದ್ರಾಸ್ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟಿನಲ್ಲಿ ಟ್ರಾಫಿಕ್ ರಾಮಸ್ವಾಮಿ ಎಂಬುವವರು ಹೂಡಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್.
      3:03 PM, 8 Aug

      ಚೆನ್ನೈನ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅವರ ಅಂತ್ಯಕ್ರಿಯೆ ಸಕಲ ಸಿದ್ಧತೆ.
      3:02 PM, 8 Aug

      ಕರುಣಾನಿಧಿ ಅಗಲಿಕೆಯ ಹಿನ್ನೆಲೆ. ತಮಿಳುನಾಡಿನಲ್ಲಿ ಬಸ್ ಸಂಚಾರ ಬಂದ್. ಹೊರರಾಜ್ಯದಿಂದ ಬಂದ ಪ್ರವಾಸಿಗರ ಪರದಾಟ.
      3:00 PM, 8 Aug

      ಕರುಣಾನಿಧಿ ಅಂತಿಮ ದರ್ಶನದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಬಲಿಯಾಗಿದ್ದು, 33 ಜನ ಗಾಯಗೊಂಡಿದ್ದಾರೆ.
      2:58 PM, 8 Aug

      ಗಮನ ಸೆಳೆದ ಕರುಣಾನಿಧಿ ಅವರ ಶವಪೆಟ್ಟಿಗೆ ಮೇಲಿನ ಸಾಲು: 'A person who continued to work without rest, now takes rest' written on the coffin of'
      2:47 PM, 8 Aug

      ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
      2:44 PM, 8 Aug

      ಚೆನ್ನೈನ ರಾಜಾಜಿಹಾಲ್ ಗೆ ಆಗಮಿಸಿ ಕರುಣಾನಿಧಿ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
      2:40 PM, 8 Aug

      ದಯವಿಟ್ಟು ಶಾಂತಿ ಕಾಪಾಡಿ. ಎಂ ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಎಲ್ಲರಿಗೂ ಅವಕಾಶ ನೀಡಲಾಗುವುದು. ಯಾರೂ ನಿರಾಶರಾಗಬೇಕಿಲ್ಲ: ಕರುಣಾನಿಧಿ ಪುತ್ರ ಎಂಕೆ ಸ್ಟಾಲಿನ್ ಮನವಿ
      1:39 PM, 8 Aug

      ರಾಜಾಜಿ ಹಾಲ್ ಬಳಿ ಕಾಲ್ತುಳಿತಕ್ಕೆ ಹಲವು ಮಕ್ಕಳು ನಾಪತ್ತೆಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
      1:34 PM, 8 Aug

      ಎಂ.ಕರುಣಾನಿಧಿ ಅಂತಿಮದರ್ಶನದ ವೇಳೆ ನೂಕು ನುಗ್ಗಲು. ಸುಮಾರು ನಲವತ್ತು ಜನರಿಗೆ ಗಾಯ
      1:19 PM, 8 Aug

      ರಾಜಾಜಿಹಾಲ್ ನಲ್ಲಿ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ. ನಂತರ ಅಂತ್ಯ ಸಂಸ್ಕಾರಕ್ಕೂ ಮುನ್ನ ಮರೀನಾ ಬೀಚ್ ವರೆಗೂ ಪಾರ್ಥಿವ ಶರೀರದ ಅಂತಿಮ ಯಾತ್ರೆ.
      12:58 PM, 8 Aug

      ಚೆನ್ನೈನ ರಾಜಾಜಿ ಹಾಲ್ ಬಳಿ ಲಘು ರಾಠಿ ಪ್ರಹಾರ. ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದ ಅಭಿಮಾನಿಗಳನ್ನು ತಡೆಯಲು ಲಾಠಿ ಪ್ರಹಾರ ನಡೆಸಿದ ಪೊಲೀಸರು
      12:45 PM, 8 Aug

      ರಾಜಾಜಿ ಹಾಲ್ ನಲ್ಲಿ ಎಂ ಕರುಣಾನಿಧಿ ಪುತ್ರರಾದ ಎಂ ಕೆ ಸ್ಟಾಲಿನ್ ಮತ್ತು ಕನ್ನಿಮೋಳಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
      12:34 PM, 8 Aug

      ನಿನ್ನೆಯಷ್ಟೆ ನಾನು ಕರುಣಾನಿಧಿ ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದೇನೆ. ಅವರೊಬ್ಬ ಹಿರಿಯ, ಮುತ್ಸದ್ಧಿ ನಾಯಕ, ಅವರೊಬ್ಬ ದಂತಕತೆ. ಅವರ ಅಗಲಿಕೆ ತುಂಬಲಾರದ ನಷ್ಟ: ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
      READ MORE

      English summary
      Tamilnadu Former Chief Minister M.Karunanidhi laid to rest at Marina beach, Chennai next to Anna memorial on August 8, 2018.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X