ಕರುಣಾನಿಧಿ ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ | ಚೆನ್ನೈ ನಲ್ಲಿ ಅಂತ್ಯ ಸಂಸ್ಕಾರ | Oneindia Kannada
ಚೆನ್ನೈ, ಆಗಸ್ಟ್ 08: ಲಕ್ಷಾಂತರ ಜನರ ಕಂಬನಿ...ಯಾವುದೇ ಸಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಸಕಲ ಸರ್ಕಾರಿ ಗೌರವದೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆ ಮರೀನಾ ಬೀಚ್ನಲ್ಲಿ ಬುಧವಾರ ಸಂಜೆ 6.50ಕ್ಕೆ ನಡೆಯಿತು.
94 ವರ್ಷದ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಡಿಎಂಕೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಅಗಲಿದ ನಾಯಕರಿಗೆ ಕಣ್ಣೀರಿನ ವಿದಾಯ ಹೇಳಿದರು.
ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು? ಎಂಬ ಕುರಿತು ಮಂಗಳವಾರ ಸಂಜೆಯಿಂದ ಚರ್ಚೆ ನಡೆದಿತ್ತು. ಮದ್ರಾಸ್ ಹೈಕೋರ್ಟ್ ಆದೇಶದಂತೆ ಮರೀನಾ ಬೀಚ್ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಅಂತ್ಯಸಂಸ್ಕಾರಕ್ಕೂ ಮುನ್ನ ಚೆನ್ನೈನ ರಾಜಾಜಿಹಾಲ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಲವು ಸಚಿವರು, ತಮಿಳು ಚಿತ್ರರಂಗದ ಹಲವು ನಟರು, ನಿರ್ಮಾಪಕರು ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಕರುಣಾನಿಧಿ ಅವರನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಕಪ್ಪು ಕನ್ನಡಕದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು, ಮತ್ತೊಂದು ಬದಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿತ್ತು.
Aug 08, 2018, 7:02 pm IST
ಯಾವುದೇ ಸಾಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ದಿ.ಕರುಣಾನಿಧಿ ಅಂತ್ಯಕ್ರಿಯೆ
'A person who continued to work without rest, now takes rest' ಎಂದು ಬರೆದ ಪೆಟ್ಟಿಗೆಯಲ್ಲಿಟ್ಟು ಕರುಣಾನಿಧಿ ಅಂತ್ಯ ಸಂಸ್ಕಾರ
Aug 08, 2018, 6:51 pm IST
ಶ್ರೀಗಂಧದ ಪೆಟ್ಟಿಗೆಗೆ ದಿ.ಕರುಣಾನಿಧಿ ಪಾರ್ಥಿವ ಶರೀರ ಸ್ಥಳಾಂತರ. ಕುಟುಂಬದಿಂದ ಅಂತಿಮ ನಮನ
Aug 08, 2018, 6:41 pm IST
ಅಂತಿಮ ನಮನ ಸಲ್ಲಿಸಿದ ರಾಹುಲ್ ಗಾಂಧಿ, ಅಳಗಿರಿ, ಗುಲಾಂ ನಬಿ ಆಜಾದ್, ಚಂದ್ರಬಾಬು ನಾಯ್ಡು, ಎಚ್.ಡಿ.ದೇವೇಗೌಡ
Aug 08, 2018, 6:25 pm IST
ದಿ.ಎಂ.ಕರುಣಾನಿಧಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಸೇನೆ ಮತ್ತು ತಮಿಳುನಾಡು ಪೊಲೀಸ್
Aug 08, 2018, 6:21 pm IST
ಮೊದಲು ಸಕಲ ಸರ್ಕಾರಿ ಗೌರವ ಸಲ್ಲಿಕೆ, ಬಳಿಕ ಅಂತ್ಯಕ್ರಿಯೆ
Aug 08, 2018, 6:13 pm IST
ಮರೀನಾ ಬೀಚ್ ತಲುಪಿದ ಕರುಣಾನಿಧಿ ಪಾರ್ಥಿವ ಶರೀರದ ಮೆರವಣಿಗೆ, ಕೆಲವೇ ಕ್ಷಣದಲ್ಲಿ ಅಂತ್ಯಕ್ರಿಯೆ
Aug 08, 2018, 5:53 pm IST
ಮರೀನಾ ಬೀಚ್ಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
Aug 08, 2018, 5:52 pm IST
ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
Aug 08, 2018, 5:47 pm IST
ಕರುಣಾನಿಧಿ ಶವಯಾತ್ರೆ ಆರಂಭ, ರಸ್ತೆಯ ಇಕ್ಕೆಲದಲ್ಲಿ ಸೇರಿರುವ ಸಾವಿರಾರು ಅಭಿಮಾನಿಗಳು
Aug 08, 2018, 5:42 pm IST
ರಾಜಾಜಿ ಹಾಲ್ ನಿಂದ ಮರೀನಾ ಬೀಚ್ ನತ್ತ ಮೂರು ಕಿ ಮೀ ದೂರ ಕ್ರಮಿಸಲಿರುವ ಶವಯಾತ್ರೆ
Aug 08, 2018, 5:39 pm IST
ಮರೀನಾಬೀಚ್ ನತ್ತ ಶವಯಾತ್ರೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಂತ್ಯ ಸಂಸ್ಕಾರ
Aug 08, 2018, 3:51 pm IST
ಕರುಣಾನಿಧಿ ಅಂತಿಮ ಯಾತ್ರೆಗೆ ಕ್ಷಣಗಣನೆ. 4 ಗಂಟೆಯಿಂದ ಆರಂಭವಾಗಲಿರುವ ಅಂತಿಮ ಯಾತ್ರೆ.
Aug 08, 2018, 3:44 pm IST
ಕಾಲ್ತುಳುತದಿಂದ ಗಾಯಗೊಂಡವರನ್ನು ಚೆನ್ನೈನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
Aug 08, 2018, 3:40 pm IST
ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಅರ್ಹತಾ ಪಂದ್ಯ ರದ್ದುಗೊಳಿಸಿದ ತಮಿಳುನಾಡು ಪ್ರೀಮಿಯರ್ ಲೀಗ್. ನಾಳೆಯ ಪಂದ್ಯವೂ ರದ್ದುಗೊಳ್ಳುವ ಸಾಧ್ಯತೆ.
Aug 08, 2018, 3:23 pm IST
ಮರೀನಾಬೀಚ್ ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮಾಡಲು ಮದ್ರಾಸ್ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟಿನಲ್ಲಿ ಟ್ರಾಫಿಕ್ ರಾಮಸ್ವಾಮಿ ಎಂಬುವವರು ಹೂಡಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್.
Aug 08, 2018, 3:03 pm IST
ಚೆನ್ನೈನ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅವರ ಅಂತ್ಯಕ್ರಿಯೆ ಸಕಲ ಸಿದ್ಧತೆ.
Aug 08, 2018, 3:02 pm IST
ಕರುಣಾನಿಧಿ ಅಗಲಿಕೆಯ ಹಿನ್ನೆಲೆ. ತಮಿಳುನಾಡಿನಲ್ಲಿ ಬಸ್ ಸಂಚಾರ ಬಂದ್. ಹೊರರಾಜ್ಯದಿಂದ ಬಂದ ಪ್ರವಾಸಿಗರ ಪರದಾಟ.
Aug 08, 2018, 3:00 pm IST
ಕರುಣಾನಿಧಿ ಅಂತಿಮ ದರ್ಶನದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಬಲಿಯಾಗಿದ್ದು, 33 ಜನ ಗಾಯಗೊಂಡಿದ್ದಾರೆ.
Aug 08, 2018, 2:58 pm IST
ಗಮನ ಸೆಳೆದ ಕರುಣಾನಿಧಿ ಅವರ ಶವಪೆಟ್ಟಿಗೆ ಮೇಲಿನ ಸಾಲು: 'A person who continued to work without rest, now takes rest' written on the coffin of'
Aug 08, 2018, 2:47 pm IST
ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
Aug 08, 2018, 2:44 pm IST
ಚೆನ್ನೈನ ರಾಜಾಜಿಹಾಲ್ ಗೆ ಆಗಮಿಸಿ ಕರುಣಾನಿಧಿ ಅಂತಿಮ ದರ್ಶನ ಪಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
Aug 08, 2018, 2:40 pm IST
ದಯವಿಟ್ಟು ಶಾಂತಿ ಕಾಪಾಡಿ. ಎಂ ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಲು ಎಲ್ಲರಿಗೂ ಅವಕಾಶ ನೀಡಲಾಗುವುದು. ಯಾರೂ ನಿರಾಶರಾಗಬೇಕಿಲ್ಲ: ಕರುಣಾನಿಧಿ ಪುತ್ರ ಎಂಕೆ ಸ್ಟಾಲಿನ್ ಮನವಿ
Aug 08, 2018, 1:39 pm IST
ರಾಜಾಜಿ ಹಾಲ್ ಬಳಿ ಕಾಲ್ತುಳಿತಕ್ಕೆ ಹಲವು ಮಕ್ಕಳು ನಾಪತ್ತೆಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
Aug 08, 2018, 1:34 pm IST
ಎಂ.ಕರುಣಾನಿಧಿ ಅಂತಿಮದರ್ಶನದ ವೇಳೆ ನೂಕು ನುಗ್ಗಲು. ಸುಮಾರು ನಲವತ್ತು ಜನರಿಗೆ ಗಾಯ
Aug 08, 2018, 1:19 pm IST
ರಾಜಾಜಿಹಾಲ್ ನಲ್ಲಿ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ. ನಂತರ ಅಂತ್ಯ ಸಂಸ್ಕಾರಕ್ಕೂ ಮುನ್ನ ಮರೀನಾ ಬೀಚ್ ವರೆಗೂ ಪಾರ್ಥಿವ ಶರೀರದ ಅಂತಿಮ ಯಾತ್ರೆ.
Aug 08, 2018, 12:58 pm IST
ಚೆನ್ನೈನ ರಾಜಾಜಿ ಹಾಲ್ ಬಳಿ ಲಘು ರಾಠಿ ಪ್ರಹಾರ. ಬ್ಯಾರಿಕೇಡ್ ಮುರಿದು ನುಗ್ಗಲು ಪ್ರಯತ್ನಿಸಿದ ಅಭಿಮಾನಿಗಳನ್ನು ತಡೆಯಲು ಲಾಠಿ ಪ್ರಹಾರ ನಡೆಸಿದ ಪೊಲೀಸರು
Aug 08, 2018, 12:45 pm IST
ರಾಜಾಜಿ ಹಾಲ್ ನಲ್ಲಿ ಎಂ ಕರುಣಾನಿಧಿ ಪುತ್ರರಾದ ಎಂ ಕೆ ಸ್ಟಾಲಿನ್ ಮತ್ತು ಕನ್ನಿಮೋಳಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
ನಿನ್ನೆಯಷ್ಟೆ ನಾನು ಕರುಣಾನಿಧಿ ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದೇನೆ. ಅವರೊಬ್ಬ ಹಿರಿಯ, ಮುತ್ಸದ್ಧಿ ನಾಯಕ, ಅವರೊಬ್ಬ ದಂತಕತೆ. ಅವರ ಅಗಲಿಕೆ ತುಂಬಲಾರದ ನಷ್ಟ: ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
READ MORE
9:13 AM, 8 Aug
ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸಂಜೆ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ
9:14 AM, 8 Aug
10:30 ಕರುಣಾನಿಧಿ ಅವರ ಅಂತಿಮ ದರ್ಶನಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ
9:28 AM, 8 Aug
ಕರುಣಾನಿಧಿ ಅಂತ್ಯ ಸಂಸ್ಕಾರ ಮರೀನಾಬೀಚ್ ನಲ್ಲಿ ನಡೆಯುವುದಕ್ಕೆ ಅನುಮತಿ ನೀಡಬಾರದು ಎಂಬ ತಮಿಳುನಾಡು ಸರ್ಕಾರದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ಛೀಮಾರಿ
9:29 AM, 8 Aug
ಮರೀನಾಬೀಚ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡುವ ಕುರಿತು ಕೇಂದ್ರ ಸರ್ಕಾರದ ಶಿಷ್ಟಾಚಾರದಲ್ಲಿ ಯಾವುದೇ ತಕರಾರಿಲ್ಲ: ಮದ್ರಾಸ್ ಹೈಕೋರ್ಟ್
Case against denial of burial land by Tamil Nadu Govt at Marina beach for M #Karunanidhi: DMK's lawyer says 'You (state govt) have announced state mourning, why not give land for burial? There's no prohibition under Central Govt protocol to allot land at Marina beach for ex-CMs. pic.twitter.com/3Ry2OV2kmx
ಚೆನ್ನೈನ ಮರೀನಾ ಬೀಚ್ ನ ಅಣ್ಣಾ ಮೆಮೋರಿಯಲ್ ನಲ್ಲಿ ಬಿಗಿ ಭದ್ರತೆ.
9:40 AM, 8 Aug
ಎಂ ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಸೋದರ ಸಂಬಂಧಿ ದೀಪಾ ಜಯಕುಮಾರ್
9:49 AM, 8 Aug
"ಮರೀನಾ ಬೀಚ್ ನಲ್ಲಿ ಎಂ. ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಅನುಮತಿ ಕೋರುತ್ತಿರುವ ಡಿಎಂಕೆ ನಡೆಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಹಾಗೆ ಹೇಳುವುದಕ್ಕೆ ಹೋದರೆ ದ್ರಾವೀಡ ಚಳವಳಿಯಲ್ಲಿ ಪೆರಿಯಾರ್ ಕೊಡುಗೆ ಸಾಕಷ್ಟಿದೆ. ಅವರ ಅಂತ್ಯ ಸಂಸ್ಕಾರವನ್ನು ಮರೀನಾ ಬೀಚ್ ನಲ್ಲಿ ಯಾಕೆ ಮಾಡಲಿಲ್ಲ?": ಮದ್ರಾಸ್ ಹೈಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರದ ಪರ ವಕೀಲರ ವಾದ
10:21 AM, 8 Aug
ಚೆನ್ನೈನ ಅಣ್ಣಾ ಸ್ಮಾರಕದ ಬಳಿ ಬಿಗಿ ಭದ್ರತೆ. ಮದ್ರಾಸ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಬಿಗಿ ಬಂದೋಬಸ್ತ್.
10:30 AM, 8 Aug
ತಮಿಳುನಾಡು ಸರ್ಕಾರದ ಪರ ವಕೀಲರ ವಾದ ಅಂತ್ಯ. ಯಾವುದೋ ಕ್ಷಣದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ
10:34 AM, 8 Aug
ಎಂ ಕರುಣಾನಿಧಿ ಅಂತಿಮ ದರ್ಶನಕ್ಕೆ ಹಾಜರಾದ ಪ್ರಧಾನಿ ಮೋದಿ
10:46 AM, 8 Aug
ಕರುಣಾನಿಧಿ ಅಂತ್ಯಕ್ರಿಯೆ ಮರೀನಾ ಬೀಚ್ ನಲ್ಲಿ ಅವಕಾಶ ನೀಡುವ ಸಂಬಂಧ ನಡೆಯುತ್ತಿರುವ ವಾದ ಅಂತ್ಯ. ಕೆಲವೇ ಕ್ಷಣಗಳಲ್ಲಿ ಮದ್ರಾಸ್ ಹೈಕೋರ್ಟ್ ನಿಂದ ತೀರ್ಪು
10:48 AM, 8 Aug
ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆಗೆ ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್
10:49 AM, 8 Aug
ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಮಹತ್ವದ ತೀರ್ಪು, ತಮಿಳುನಾಡು ಸರ್ಕಾರಕ್ಕೆ ತೀವ್ರ ಹಿನ್ನಡೆ.
10:51 AM, 8 Aug
ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಎಂ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್
11:14 AM, 8 Aug
ಎಂ ಕರುಣಾನಿಧಿ ಅವರಿಗೆ ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಸಂತಾಪ, ಕಲಾಪ ಒಂದು ದಿನ ಮುಂದೂಡಿಕೆ
11:16 AM, 8 Aug
ರಾಜಾಜಿ ಹಾಲ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಕರುಣಾನಿಧಿ ಅವರ ಅಂತಿಮ ದರ್ಶನ
11:16 AM, 8 Aug
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೂ ಎಂ ಕರುಣಾನಿಧಿ ಅಂತಿಮ ದರ್ಶನ
11:57 AM, 8 Aug
ಚೆನ್ನೈನ ಮರೀನಾ ಬೀಚ್ ಗೆ ಬಂದ ಜೆಸಿಬಿ ಯಂತ್ರಗಳು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ
12:29 PM, 8 Aug
ಪೆರಿಯಾರ್ ಪುತ್ಠಳಿ ಬಳಿ ಕಾಲ್ತುಳಿತ ಇಬ್ಬರ ಸ್ಥಿತಿ ಗಂಭೀರ
12:32 PM, 8 Aug
ಕಲ್ಲು ತೂರಾಟ: ತಮಿಳುನಾಡಿನಾದ್ಯಂತ 80 ಕೇಸು ದಾಖಲು
12:34 PM, 8 Aug
ನಿನ್ನೆಯಷ್ಟೆ ನಾನು ಕರುಣಾನಿಧಿ ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದೇನೆ. ಅವರೊಬ್ಬ ಹಿರಿಯ, ಮುತ್ಸದ್ಧಿ ನಾಯಕ, ಅವರೊಬ್ಬ ದಂತಕತೆ. ಅವರ ಅಗಲಿಕೆ ತುಂಬಲಾರದ ನಷ್ಟ: ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
12:45 PM, 8 Aug
ರಾಜಾಜಿ ಹಾಲ್ ನಲ್ಲಿ ಎಂ ಕರುಣಾನಿಧಿ ಪುತ್ರರಾದ ಎಂ ಕೆ ಸ್ಟಾಲಿನ್ ಮತ್ತು ಕನ್ನಿಮೋಳಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ