ಮಲಯಾಳಂ ನಟಿ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದರಾ ಕಮಲ್?
ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಮಲಯಾಳಂ ನಟಿಯ ಹೆಸರನ್ನು ಬಹಿರಂಗಗೊಳಿಸಿದ ಕಮಲ ಹಾಸನ್. ಆನಂತರ, ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡ ನಟ.
ಚೆನ್ನೈ, ಜುಲೈ 14: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಲಯಾಳಂ ನಟಿಯ ಹೆಸರನ್ನು ಪತ್ರಿಕಾಗೋಷ್ಠಿಯೊಂದರಲ್ಲಿ ಬಹಿರಂಗಗೊಳಿಸಿದ ಕಮಲ್ ಹಾಸನ್ ಅವರು ಮತ್ತೊಂದು ವಿವಾದಕ್ಕೆ ಸಿಲುಕುವ ಸೂಚನೆ ನೀಡಿದ್ದಾರೆ. ವಿವಾದಗಳೊಂದಿಗೆ ಸದಾ ಅವಿನಾಭಾವ ನಂಟು ಹೊಂದಿರುವ ಕಮಲ್ ಹಾಸನ್ ಅವರು, ಈಗ ಮತ್ತೊಂದು ವಿವಾದಕ್ಕೆ ಸಿಲುಕುವಂಥ ಕೆಲಸ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಕಮಲ್ ಹಾಸನ್ ಅವರು, ಮಲಯಾಳಂ ನಟಿಯ ಪ್ರಕರಣವನ್ನು ತಮ್ಮ ಮಾತಿನಲ್ಲಿ ತಂದರು. ಹಾಗೆ, ಮಾತನಾಡುವಾಗ ಅವರ ಹೆಸರನ್ನೂ ಬಹಿರಂಗಗೊಳಿಸಿದ ಅವರು, ಈ ಬಗ್ಗೆ ಪತ್ರಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ ತಮ್ಮ ಹೇಳಿಕೆಯನ್ನು ಕಮಲ್ ಸಮರ್ಥಿಸಿಕೊಂಡರು.

''ಎಲ್ಲರೂ ಚಿತ್ರರಂಗದ ಮಹಿಳಾ ಕಲಾವಿದರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಸಿನಿಮಾ ರಂಗದ ಕಲಾವಿದೆಯರಿಗೆ ಮಾತ್ರ ಸುರಕ್ಷೆ ಸಿಗಬೇಕೇ? ಇತರರಿಗೂ ಸುರಕ್ಷೆ ಸಿಗಬೇಕಲ್ಲವೇ? ಪ್ರತಿಯೊಬ್ಬ ಮಹಿಳೆಗೆ ಸುರಕ್ಷತೆ ಸಿಗಬೇಕು'' ಎಂದು ಅವರು ಹೇಳುತ್ತಾ ಸಾಗಿದ್ದಾರೆ.
ಆ ವೇಳೆಗೆ, ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರೊಬ್ಬರು ಮಲಯಾಳಂ ನಟಿಯ ಹೆಸರನ್ನು ಪ್ರಸ್ತಾಪಿಸಿದ್ದು ಸರಿಯಲ್ಲವೆಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಮಲ್, ''ಪರವಾಗಿಲ್ಲ. ನಾನು ಹೇಳಿದರೇನು ತಪ್ಪಾಗುವುದಿಲ್ಲ. ಈಗಾಗಲೇ ಹಲವಾರು ಮಾಧ್ಯಮಗಳು ಅವರ ಹೆಸರನ್ನು ಘಟನೆ ನಡೆದ ಹೊಸತರಲ್ಲೇ ಬಳಸಿವೆ'' ಎಂದರು.
ತಮ್ಮ ಮಾತನ್ನು ಮತ್ತೂ ಮುಂದುವರಿಸಿ, ''ದೌರ್ಜನ್ಯಕ್ಕೊಳಗಾಗಿದ್ದ ಆ ಮಲಯಾಳಂ ನಟಿ ಹೆಸರನ್ನು ನೀವು (ಮಾಧ್ಯಮಗಳು) ಏನಾದರೂ ಬಳಸಿಕೊಳ್ಳಿ. ಆಕೆಯನ್ನು ದ್ರೌಪದಿಯೆಂದಾದರೂ ಕರೆಯಿರಿ ಅಥವಾ ಇನ್ಯಾವ ಹೆಸರನ್ನಾದರೂ ಕರೆಯಿರಿ. ಆದರೆ, ಹೆಣ್ಣು ಎಂದು ಹೇಳಬೇಡಿ'' ಎಂದಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications