Get Updates
Get notified of breaking news, exclusive insights, and must-see stories!

ಚೆನ್ನೈನಲ್ಲಿ ಪಳನೀಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರಜನೀಕಾಂತ್

ಚೆನ್ನೈ, ಆಗಸ್ಟ್ 14: 'ತಮಿಳುನಾಡು ಮುಖ್ಯಮಂತ್ರಿ ಕೆ ಪಳನೀಸ್ವಾಮಿ ಅವರೇನು ಜಯಲಲಿತಾ ಮತ್ತು ಕರುಣಾನಿಧಿ ಅವರಿಗಿಂತ ದೊಡ್ಡವರೇ?' ಎಂದು ನಟ, ರಾಜಕಾರಣಿ ರಜನೀಕಾಂತ್ ಪ್ರಶ್ನಿಸಿದ್ದಾರೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗದ ಪಳನೀಸ್ವಾಮಿ ಅವರನ್ನು ರಜನೀಕಾಂತ್ ತರಾಟೆಗೆ ತೆಗೆದುಕೊಂಡಿದ್ದಾರೆ.

'ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆದ ಎಂ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಘಟಾನುಘಟಿ ನಾಯಕರೇ ಬಂದಿದ್ದರೂ, ತಮಿಳುನಾಡು ಮುಖ್ಯಮಂತ್ರಿಯೇ ಬಾರದಿದ್ದುದು ಏಕೆ? ಅವರೇನು ಕರುಣಾನಿಧಿ, ಜಯಲಲಿತಾ ಅವರಿಗಿಂತ ದೊಡ್ಡವರೇ' ಎಂದು ತಲೈವಾ ರಜನೀಕಾಂತ್ ಪ್ರಶ್ನಿಸಿದ್ದಾರೆ.

Is Palanisamy bigger than Karunanidhi, Jayalalithaa, asks Rajinikanth

"ಕರುಣಾನಿಧಿ ಅವರೊಬ್ಬ ಮಹಾನ್ ಮನುಷ್ಯ. ವಿಶ್ವದ ಯಾವುದೇ ನಾಯಕರು ತಮಿಳುನಾಡಿಗೆ ಭೇಟಿ ಕೊಟ್ಟರೂ ಕರುಣಾನಿಧಿ ಅವರನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಇನ್ನು ಏಲೆ ಅವರೆಲ್ಲ ಯಾರನ್ನು ಭೇಟಿ ಮಾಡುತ್ತಾರೋ" ಎಂದು ಈ ಸಂದರ್ಭದಲ್ಲಿ ಕರುಣಾನಿಧಿ ಅವರ ವ್ಯಕ್ತಿತ್ವವನ್ನು ಸೂಪರ್ ಸ್ಟಾರ್ ಹೊಗಳಿದರು.

ಅನಾರೋಗ್ಯದ ಕಾರಣ ಆಗಸ್ಟ್ 7 ರಂದು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮೃತರಾದ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಆ.8 ರಂದು ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆದಿತ್ತು. ಅವರ ಅಂತ್ಯ ಸಂಸ್ಕಾರವನ್ನು ಚೆನ್ನೈನ ಮರೀನಾ ಬೀಚ್ ನಲ್ಲಿ ಮಾಡಬಾರದು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+