ಚೆನ್ನೈನ ಸರವಣ ಭವನ್ ಹೋಟೆಲ್ ಸೇರಿ 32ಕಡೆ ಮೇಲೆ ಐಟಿ ದಾಳಿ
ಬೆಂಗಳೂರು, ಜನವರಿ 03:ತಮಿಳುನಾಡಿನ ಜನಪ್ರಿಯ ಹೋಟೆಲ್ ಜಾಲ ಸರವಣ ಭವನ ಸೇರಿದಂತೆ ಐದು ಹೋಟೆಲ್ ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಐದು ಸರವಣ್ ಭವನ ಹೋಟೆಲ್ ಗಳು ಸೇರಿದಂತೆ 32 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸರವಣ್ ಭವನ, ಗ್ರ್ಯಾಂಡ್ ಸ್ವೀಟ್ಸ್, ಹಾಟ್ ಬ್ರೆಡ್ಸ್ ಹಾಗೂ ಅಂಜಪ್ಪಾರ್ ಸಮೂಹ ಸಂಸ್ಥೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಇದೇ ವೇಳೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಐಟಿ ದಾಳಿ ಮುಂದುವರೆದಿದ್ದು, ಪ್ರಮುಖ ನಟರಾದ ಯಶ್, ಪುನೀತ್ ರಾಜ್ ಕುಮಾರ್, ಸುದೀಪ್, ಶಿವರಾಜ್ ಕುಮಾರ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್, ಎಂಎಲ್ಸಿ ಸಿಆರ್ ಮನೋಹರ್ ಹಾಗೂ ಜಯಣ್ಣ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ.












Click it and Unblock the Notifications