'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!
ಚೆನ್ನೈ, ಏಪ್ರಿಲ್ 12: "ಗೋ ಬ್ಯಾಕ್ ಮೋದಿ..." ಇದು ಸದ್ಯಕ್ಕೆ ತಮಿಳುನಾಡಿನಾದ್ಯಂತ ಕೇಳಿಬರುತ್ತಿರುವ ಸ್ವರ! ಡಿಎಂಕೆ ನಾಯಕರಾದ ಕರುಣಾನಿಧಿ, ಕನ್ನಿಮೋಳಿ ಸೇರಿದಂತೆ ತಮಿಳುನಾಡಿನ ಘಟಾನುಘಟಿ ನಾಯಕರೂ ಕಪ್ಪು ಬಟ್ಟೆ ತೊಟ್ಟು ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಫೆನ್ಸ್ ಎಕ್ಸ್ ಪೋ 2018 ರ ಉದ್ಘಾಟನೆಗಾಗಿ ಚೆನ್ನೈಗೆ ಆಗಮಿಸಿರುವ ಪ್ರಧಾನಿ ಮೋದಿಯವರಿಗೆ ಸಿಕ್ಕಿದ್ದು ಕಪ್ಪು ಬಾವುಟ ಮತ್ತು ಬಲೂನ್ ಸ್ವಾಗತ! ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡಿನಾದ್ಯಂತ ಸಾಕಷ್ಟು ಪ್ರತಿಭಟನೆ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮನದ ಮೇಲೂ ಇದು ಪರಿಣಾಮ ಬೀರಿದ್ದು, ಎಲ್ಲೆಲ್ಲೂ 'ಗೋ ಬ್ಯಾಕ್ ಮೋದಿ' ಎಂಬ ಕೂಗು ಪ್ರತಿಧ್ವನಿಸುತ್ತಿದೆ. ಟ್ವಿಟ್ಟರ್ ನಲ್ಲೂ GoBackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
|
ತಮಿಳುನಾಡಿಗೆ ಬರಬೇಡಿ!
ಗೌರವಾನ್ವಿತ ಪ್ರಧಾನಿಗಳೇ, ನಿಮಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ ಎಂದಾದರೆ ದಯವಿಟ್ಟು ತಮಿಳುನಾಡಿಗೆ ಬರಬೇಡಿ ಎಂದು ರಾಮಚಂದ್ರನ್ ಕೆ. ಎಂಬುವವರು ಟ್ವೀಟ್ ಮಾಡಿದ್ದಾರೆ. ತಮಿಳು ಜನರ ಒಗ್ಗಟ್ಟಿನ ಬಗ್ಗೆ ನಿಮಗೆ ಅರಿವಿಲ್ಲ. ವಿಶ್ವದಾದ್ಯಂತ ಇರುವ ತಮಿಳಿಗರೂ ಈ ಪ್ರತಿಭಟನೆಗೆ ಬೆಂಬಲನೀಡದಿದ್ದರಿಂದಲೇ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ವಿಶ್ವದಲ್ಲೇ ನಂ.1 ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಆಗಿರುವುದು ಎಂದು ಮತ್ತಷ್ಟು ಜನ ಟ್ವೀಟ್ ಮಾಡಿದ್ದಾರೆ.
| Array |
ನಮ್ಮೊಂದಿಗೆ ರಾಜಕೀಯ ಮಾಡಬೇಡಿ!
ನಮ್ಮೊಂದಿಗೆ ರಾಜಕೀಯ ಮಾಡಬೇಡಿ. ತಮಿಳುನಾಡಿಗೆ ಸಾವಿರಾರು ವರ್ಷದ ಪರಂಪರೆಯಿದೆ. ನಮ್ಮ ತಾಳ್ಮೆ ಮುಗಿದಿದೆ. ಕೇವಲ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರವಲ್ಲ, ಇಲ್ಲಿನ ಪ್ರಾದೇಶಿಕ ಪಕ್ಷಗಳಿಗೂ ನಾವು ಪಾಠ ಕಲಿಸುತ್ತೇವೆ. ಇನ್ನು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದಿದ್ದಾರೆ ಶ್ರೀನಿವಾಸನ್ ಎಸ್.
|
ನೀವು ಪ್ರಧಾನಿಯಾಗುವುದಕ್ಕೆ ಸಮರ್ದಥರಲ್ಲ!
ತಮಿಳುನಾಡಿನಿಂದ ವಾಪಸ್ ಹೋಗಿ. ನೀವು ಪ್ರಧಾನಿ ಹುದ್ದೆಗೆ ಸೂಕ್ತರಲ್ಲ. ಹೋಗಿ ಮತ್ತೆ ಚಹ ಮಾರಲು ಆರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ನ್ಯಾನೀಸ್ ಸರವಣನ್ ಎಂಬುವವರು. ನೀವು ತಮಿಳುನಾಡಿಗಾಗಿ ಏನನ್ನೂ ಮಂಆಡಿಲ್ಲ. ನಿಮ್ಮ ಗಮನವೇನಿದ್ದರೂ ಉತ್ತರ ಭಾರತದ ರಾಷ್ಟ್ರಗಳಷ್ಟೇ ಎಂದು ಮತ್ತಷ್ಟು ಜನ ಮೋದಿಯವರ ಕಾಲೆಳೆದಿದ್ದಾರೆ.
|
ಮುಳ್ಳಿನಿಂದಲೇ ಮುಳ್ಳು ತೆಗೆಯುತ್ತಿದ್ದಾರೆ ಜನ!
GoBackModi ಹ್ಯಾಶ್ ಟ್ಯಾಗ್ ಸದ್ಯಕ್ಕೆ ನಂಬರ್ 1 ಆಗಿದೆ. ತಮ್ಮ ವಿರೊಧಿಗಳನ್ನು ಹಳಿಯಲು ಸಾಮಾಜಿಕ ಮಾಧ್ಯಮಗಳನ್ನೇ ಬಳಸುತ್ತಿದ್ದ ಬಿಜೆಪಿಗೆ ಅದೇ ಸಾಮಾಜಿಕ ಮಾಧ್ಯಮದಿಂದಲೇ ಜನರು ಪೆಟ್ಟುಕೊಟ್ಟಿದ್ದಾರೆ. ಏಪ್ರಿಲ್ 12, 2018 ಒಂದು ಐತಿಹಾಸಿಕ ದಿನ ಎಂದಿದ್ದಾರೆ ಅದ್ವೈತ್ ಎಂಬುವವರು.
|
ನಿಮ್ಮ ಮೊಸಳೆ ಕಣ್ಣೀರಿಗೆ ಬಗ್ಗೋಲ್ಲ
ನಿಮ್ಮ ಮೊಸಳೆ ಕಣ್ಣೀರಿಗೆ ಬಗ್ಗುವುದಕ್ಕೆ ಇದು ಉತ್ತರ ಭಾರತದ ರಾಜ್ಯವಲ್ಲ! ಇದು ತಮಿಳುನಾಡು ಎಂದಿದ್ದಾರೆ ನಿನೋ ಎಂಬುವವರು. ಕಾವೇರಿ ಜಲ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನಾದ್ಯಂತ ಎದ್ದಿರುವ ಆಕ್ರೋಶಕ್ಕೆ ಎಲ್ಲೆಲ್ಲೂ ಕಪ್ಪು ಬಟ್ತೆಯೇ ಕಾಣಿಸುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಕಪ್ಪು ಬಾವುಟವನ್ನು ಹಿಡಿದಿರುವ ದೃಶ್ಯ ಕಾಣಿಸುತ್ತಿದೆ. ಈ ಪ್ರತಿಭಟನೆ ತಮಿಳಿಗರ ಒಗ್ಗಟ್ಟಿನ ಪ್ರತೀಕವೆನ್ನಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications