138 ವರ್ಷದ 'ದಿ ಹಿಂದೂ' ಪತ್ರಿಕೆಗೆ ಹಿಂದೆಂದೂ ಹೀಗಾಗಿರಲಿಲ್ಲ!
ಚೆನ್ನೈ, ಡಿ 2: ತಮಿಳುನಾಡು ರಾಜಧಾನಿ ಚೆನ್ನೈ ಮಹಾನಗರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ, 138 ವರ್ಷಗಳಿಂದ ಸತತವಾಗಿ ಮುದ್ರಣಗೊಳ್ಳುತ್ತಿರುವ ಭಾರತದ ಹೆಸರಾಂತ ಆಂಗ್ಲ ದೈನಿಕ 'ದಿ ಹಿಂದೂ' ಪತ್ರಿಕೆಯ ಒಂದು ದಿನದ ಆವೃತ್ತಿ ಅಚ್ಚಾಗಲಿಲ್ಲ.
ಸಂಸ್ಥೆಯ ನೌಕರರು ಕಚೇರಿಗೆ ಬರಲಾಗದೇ ಇದ್ದದ್ದರಿಂದ, ದೇಶದ ಅತ್ಯಂತ ಹಳೆಯ ಪತ್ರಿಕೆಯಲ್ಲೊಂದಾದ ದಿ ಹಿಂದೂ ಪತ್ರಿಕೆಯ ಬುಧವಾರದ (ಡಿ 2) ಆವೃತ್ತಿ ಮುದ್ರಣಗೊಳ್ಳಲಿಲ್ಲ. (ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು)

ಹಬ್ಬಹರಿದಿನಗಳಿಗೆ ನೀಡುವ ರಜೆಯನ್ನು ಹೊರತು ಪಡಿಸಿ 1878ರಿಂದ ಸತತವಾಗಿ ಮುದ್ರಣಗೊಳ್ಳುತ್ತಿರುವ ಹಿಂದೂ ಪತ್ರಿಕೆ ಇದೇ ಮೊದಲ ಬಾರಿಗೆ ಬುಧವಾರದಂದು ಅಚ್ಚಾಗಲಿಲ್ಲ. ಹಾಗಾಗಿ, ಚೆನ್ನೈ, ವೆಲ್ಲೂರು, ತಿರುಪತಿ ಮತ್ತು ಪಾಂಡಿಚೇರಿ ನಗರದಲ್ಲಿ ದಿ ಹಿಂದೂ ಪತ್ರಿಕೆ ಹಂಚಿಕೆಯಾಗಲಿಲ್ಲ.
ಪತ್ರಿಕೆಯ ಪ್ರಕಾಶಕರಾದ ಎನ್ ಮುರಳಿ ಈ ಬಗ್ಗೆ ಮಾತನಾಡುತ್ತಾ, ಪತ್ರಿಕೆಯ ಪ್ರಿಟಿಂಗ್ ಘಟಕ ನಗರದ ಹೊರ ಪ್ರದೇಶವಾದ ಮರೈಮಲಾನಗರ್ ಎನ್ನುವಲ್ಲಿದೆ. ಇದು ಚೆನ್ನೈ ಹೃದಯ ಭಾಗದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿದೆ.
ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ನೌಕರರು ಪ್ರಿಟಿಂಗ್ ಘಟಕಕ್ಕೆ ತಲುಪಲಾಗಲಿಲ್ಲ. ಹಿಂದೂ ಪತ್ರಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗುತ್ತಿರುವುದು. ಒಂದು ವೇಳೆ ಪತ್ರಿಕೆ ಅಚ್ಚಾಗಿದ್ದರೂ, ಮನೆಮನೆಗೆ ತಲುಪಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಮುರುಳಿ ಹೇಳಿದ್ದಾರೆ.
ಆದರೆ ಚೆನ್ನೈನಿಂದ ಮುದ್ರಣಗೊಳ್ಳುವ ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ಮುಂತಾದ ಪತ್ರಿಕೆಯ ಬುಧವಾರದ ಮುದ್ರಣ ಅಭಾದಿತವಾಗಿತ್ತು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications