ತಮಿಳುನಾಡು: ಸಿನಿಮೀಯ ರೀತಿಯಲ್ಲಿ 67 ಭೂಗತ ಪಾತಕಿಗಳ ಸೆರೆ
ಚೆನ್ನೈ, ಫೆಬ್ರವರಿ 08: ಡಾನ್ ಒಬ್ಬನ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿರುತ್ತದೆ, ನಂಗಾ ನಾಚ್, ಹೆಂಡಗಳ ಹೊಳೆ ಹರಿಯುತ್ತಿರುತ್ತದೆ ಆಗ ಕೂಡಲೇ ದೊಡ್ಡ ಪೊಲೀಸರ ಪಡೆಯೊಂದು ಬಂದು ಅಲ್ಲಿದ್ದ ಎಲ್ಲರನ್ನೂ ಬಂಧಿಸಿ ಕರೆದೊಯ್ಯುತ್ತಾರೆ. ಇದಾವುದೊ ಸಿನಿಮಾ ಕತೆಯಲ್ಲ, ತಮಿಳುನಾಡಿನಲ್ಲಿ ನಿಜವಾಗಿಯೂ ನಡೆದಿರುವ ಘಟನೆ.
ಚುಲೈಮೇಡು ಬಿನ್ನು ಹೆಸರಿನ ಭೂಗತ ಪಾತಕಿಗಳ ನಾಯಕ ತನ್ನ ಹುಟ್ಟುಹಬ್ಬವನ್ನು ಚೆನ್ನೈ ಸಮೀಪದ ಮಾಲಿಯಾಂಬಿಕಾ ಗ್ರಾಮದಲ್ಲಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹಲವು ಕುಖ್ಯಾತ ಪಾತಕಿಗಳು, ಪಾತಕಿ ನಾಯಕನ ಸಹವರ್ತಿಗಳು ಆಗಮಿಸಿದ್ದರು. ಇದರ ಸುಳಿವು ಪಡೆದ ಚೆನ್ನೈ ಪೊಲೀಸರು ದೊಡ್ಡ ದಂಡು ಕರೆದುಕೊಂಡು ಹೋಗಿ 67 ಕುಖ್ಯಾತ ಪಾತಕಿಗಳನ್ನು ಬಂಧಿಸಿದ್ದಾರೆ.
ಬಳ್ಳಿಯೇ ಬಂದು ಕಾಲಿಗೆ ಸಿಕ್ಕಂತೆ, ಹಲವಾರು ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ, ವಿವಿಧ ಕೇಸುಗಳಲ್ಲಿ ಬೇಕಾಗಿದ್ದ ಪಾತಕಿಗಳೆಲ್ಲಾ ಒಂದೇ ಸೂರಿನಡಿ ಪೊಲೀಸರ ಕೈಗೆ ದೊರಕಿದ್ದಾರೆ. ಅವರು ದೊರೆತದ್ದು ಕೂಡಾ ಕುತೂಹಲಕಾರಿಯಾಗಿದೆ.

ಚೆನ್ನೈನಲ್ಲಿ ಪೊಲೀಸರು ಮಾಮೂಲಿನಂತೆ ವಾಹನ ತಪಾಸಣೆ ಮಾಡಬೇಕಾದರೆ ಭೂಗತ ಪಾತಕಿಗಳ ನಾಯಕ ಚುಲೈಮೇಡು ಬಿನ್ನುವಿನ ಕಾರು ಹಿಡಿದಿದ್ದಾರೆ. ಕಾರಿನಲ್ಲಿದ್ದವ ಕಾರು ಮಾಲಿಯಾಂಬಿಕಾ ಗ್ರಾಮಕ್ಕೆ ಹೊರಟಿರುವುದಾಗಿ ಹೇಳಿದ್ದಾನೆ. ಕೂಡಲೇ ಜಾಗರೂಕರಾದ ಚೆನ್ನೈ ಪೊಲೀಸರು ದಾಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಪಾರ್ಟಿ ನಡೆಯುತಿದ್ದ ಸ್ಥಳ ತಲುಪಿದಾಗ ಚುಲೈಮೇಡು ಬಿನ್ನು ತನ್ನ ರೌಡಿ ವೃತ್ತಿಗೆ ಅನುಗುಣವಾಗಿ ಕತ್ತಿಯಿಂದ ಹುಟ್ಟುಹಬ್ಬದ ಕೇಕ್ ಕತ್ತಿರಿಸುತ್ತಿರುವುದು ಕಂಡಿದೆ. ಕೂಡಲೇ ಪೊಲೀಸರು ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. 67 ಪ್ರಮುಖ ಪಾತಕಿಗಳನ್ನು ಬಂಧಿಸಿದ್ದಾರೆ. ಆದರೆ ಅವರ ನಾಯಕ ಚುಲೈಮೇಡು ಬಿನ್ನು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.
ದಾಳಿ ವೇಳೆ 50 ಕ್ಕೂ ಹೆಚ್ಚು ಬೈಕ್ಗಳು, ನಾಲ್ಕು ಕಾರುಗಳು, ಹಲವು ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ












Click it and Unblock the Notifications