Get Updates
Get notified of breaking news, exclusive insights, and must-see stories!

'ಪ್ರಧಾನಿ ಅದ ನಂತರವೇ ನನಗೆ ನಾಯಿ, ಕೀಟ, ಭಸ್ಮಾಸುರ ಎಂದಿದೆ ಕಾಂಗ್ರೆಸ್'

Recommended Video

      ನನ್ನನ್ನು ತುಂಡು ತುಂಡಾಗಿ ಕತ್ತರಿಸಲು ಅವರು ರೆಡಿಯಾಗಿದ್ದಾರೆ..? | Oneindia kannada

      ಕುರುಕ್ಷೇತ್ರ (ಹರಿಯಾಣ), ಮೇ 9: "ಅವರ ಭ್ರಷ್ಟಾಚಾರವನ್ನು ನಾನು ನಿಲ್ಲಿಸಿದೆ ಮತ್ತು ವಂಶಪಾರಂಪರ್ಯ ಆಡಳಿತಕ್ಕೆ ಸವಾಲು ಹಾಕಿದೆ. ಆ ಕಾರಣಕ್ಕೆ ಅವರು ಪ್ರೀತಿಯ ಮುಖವಾಡ ಹಾಕಿಕೊಂಡು ನನ್ನನ್ನು ಬೈತಾ ಇದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಬುಧವಾರ ಚುನಾವಣೆ ಸಭೆಯಲ್ಲಿ ಹೇಳಿದರು.

      ನನ್ನ ಮನೆಗೆ ಭೇಟಿ ನೀಡುತ್ತಿದ್ದೇನೆ. ಹರಿಯಾಣ ಮತ್ತು ಕುರುಕ್ಷೇತ್ರ ಸತ್ಯದ ನೆಲ. ಆದ್ದರಿಂದ ಇಲ್ಲಿಂದಲೇ ನನ್ನ ದೇಶದ ಜನರಿಗೆ ಹೇಳಬಯಸುತ್ತೇನೆ: ಅವರ ಪ್ರೀತಿಯ ಡಿಕ್ಷನರಿ ಅಂದರೆ ಏನು ಮತ್ತು ನನಗೆ ಅವರು ಬಳಸಿದ ಪದಗಳೇನು ಅಂತ ಹೇಳುತ್ತೇನೆ.

      ಕಾಂಗ್ರೆಸ್ ನ ನಾಯಕರೊಬ್ಬರು ನನ್ನನ್ನು ಕ್ರಿಮಿ ಅಂತ ಕರೆದಿದ್ದರು. ಒಬ್ಬ ನಾಯಕರು ಹುಚ್ಚು ನಾಯಿ ಅಂದಿದ್ದರು. ಇನ್ನೊಬ್ಬರು ಭಸ್ಮಾಸುರ ಅಂದರು. ಮತ್ತೊಬ್ಬರು, ವಿದೇಶಾಂಗ ಖಾತೆ ಸಚಿವರಾಗಿದ್ದವರು ನನ್ನನ್ನು ಕೋತಿ ಎಂದರು. ಇನ್ನೊಬ್ಬ ಸಚಿವರು ದಾವೂದ್ ಇಬ್ರಾಹಿಂ ಜತೆಗೆ ನನ್ನ ಹೋಲಿಕೆ ಮಾಡಿದರು ಎಂದು ಮೋದಿ ಆರೋಪಿಸಿದರು.

      Narendra Modi

      ಅವರು ನನ್ನ ತಾಯಿಯನ್ನು ಬಯ್ದರು. ಮತ್ತು ನನ್ನ ತಂದೆ ಯಾರು ಅಂತ ಕೇಳಿದರು. ಮತ್ತು ನೆನಪಿಟ್ಟುಕೊಳ್ಳಿ, ಇವೆಲ್ಲವನ್ನೂ ನಾನು ಪ್ರಧಾನಿ ನಂತರವೇ ಹೇಳಿದರು. ಕಾಂಗ್ರೆಸ್ ನಾಯಕರ ನಡತೆಯನ್ನು ಯಾರೂ ಪ್ರಶ್ನಿಸಲಿಲ್ಲ. ನನ್ನನ್ನು ತುಂಡಾಗಿ ಕತ್ತರಿಸುತ್ತೇನೆ ಎಂದು ಮಾತನಾಡಿದವರಿಗೆ ಟಿಕೆಟ್ ನೀಡುವ ಮೂಲಕ ಬೆಂಬಲಕ್ಕೆ ಕಾಂಗ್ರೆಸ್ ನಿಂತಿತು. ಏಕೆಂದರೆ, ಅವರು ಮೋದಿಯನ್ನು ತುಂಡಾಗಿ ಕತ್ತರಿಸಲು ಬಯಸುತ್ತಾರೆ ಎಂದು ಹೇಳಿದರು.

      ಇಂಥ ಮಾತನ್ನು ಸಾರ್ವಜನಿಕವಾಗಿ ಆಡುವುದು ತಪ್ಪು ಎಂದು ನನಗೆ ಗೊತ್ತು. ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳೂ ನನ್ನ ಭಾಷಣ ಕೇಳುತ್ತಾರೆ. ಅವರು ಈ ಮಾತುಗಳನ್ನು (ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಬಳಸಿದ ಪದಗಳು) ಕಲಿಯಲೂ ಬಾರದು, ಮಾತನಾಡಲೂ ಬಾರದು ಎಂದು ಅವರು ಹೇಳಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+