'ಪ್ರಧಾನಿ ಅದ ನಂತರವೇ ನನಗೆ ನಾಯಿ, ಕೀಟ, ಭಸ್ಮಾಸುರ ಎಂದಿದೆ ಕಾಂಗ್ರೆಸ್'
Recommended Video
ಕುರುಕ್ಷೇತ್ರ (ಹರಿಯಾಣ), ಮೇ 9: "ಅವರ ಭ್ರಷ್ಟಾಚಾರವನ್ನು ನಾನು ನಿಲ್ಲಿಸಿದೆ ಮತ್ತು ವಂಶಪಾರಂಪರ್ಯ ಆಡಳಿತಕ್ಕೆ ಸವಾಲು ಹಾಕಿದೆ. ಆ ಕಾರಣಕ್ಕೆ ಅವರು ಪ್ರೀತಿಯ ಮುಖವಾಡ ಹಾಕಿಕೊಂಡು ನನ್ನನ್ನು ಬೈತಾ ಇದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಬುಧವಾರ ಚುನಾವಣೆ ಸಭೆಯಲ್ಲಿ ಹೇಳಿದರು.
ನನ್ನ ಮನೆಗೆ ಭೇಟಿ ನೀಡುತ್ತಿದ್ದೇನೆ. ಹರಿಯಾಣ ಮತ್ತು ಕುರುಕ್ಷೇತ್ರ ಸತ್ಯದ ನೆಲ. ಆದ್ದರಿಂದ ಇಲ್ಲಿಂದಲೇ ನನ್ನ ದೇಶದ ಜನರಿಗೆ ಹೇಳಬಯಸುತ್ತೇನೆ: ಅವರ ಪ್ರೀತಿಯ ಡಿಕ್ಷನರಿ ಅಂದರೆ ಏನು ಮತ್ತು ನನಗೆ ಅವರು ಬಳಸಿದ ಪದಗಳೇನು ಅಂತ ಹೇಳುತ್ತೇನೆ.
ಕಾಂಗ್ರೆಸ್ ನ ನಾಯಕರೊಬ್ಬರು ನನ್ನನ್ನು ಕ್ರಿಮಿ ಅಂತ ಕರೆದಿದ್ದರು. ಒಬ್ಬ ನಾಯಕರು ಹುಚ್ಚು ನಾಯಿ ಅಂದಿದ್ದರು. ಇನ್ನೊಬ್ಬರು ಭಸ್ಮಾಸುರ ಅಂದರು. ಮತ್ತೊಬ್ಬರು, ವಿದೇಶಾಂಗ ಖಾತೆ ಸಚಿವರಾಗಿದ್ದವರು ನನ್ನನ್ನು ಕೋತಿ ಎಂದರು. ಇನ್ನೊಬ್ಬ ಸಚಿವರು ದಾವೂದ್ ಇಬ್ರಾಹಿಂ ಜತೆಗೆ ನನ್ನ ಹೋಲಿಕೆ ಮಾಡಿದರು ಎಂದು ಮೋದಿ ಆರೋಪಿಸಿದರು.

ಅವರು ನನ್ನ ತಾಯಿಯನ್ನು ಬಯ್ದರು. ಮತ್ತು ನನ್ನ ತಂದೆ ಯಾರು ಅಂತ ಕೇಳಿದರು. ಮತ್ತು ನೆನಪಿಟ್ಟುಕೊಳ್ಳಿ, ಇವೆಲ್ಲವನ್ನೂ ನಾನು ಪ್ರಧಾನಿ ನಂತರವೇ ಹೇಳಿದರು. ಕಾಂಗ್ರೆಸ್ ನಾಯಕರ ನಡತೆಯನ್ನು ಯಾರೂ ಪ್ರಶ್ನಿಸಲಿಲ್ಲ. ನನ್ನನ್ನು ತುಂಡಾಗಿ ಕತ್ತರಿಸುತ್ತೇನೆ ಎಂದು ಮಾತನಾಡಿದವರಿಗೆ ಟಿಕೆಟ್ ನೀಡುವ ಮೂಲಕ ಬೆಂಬಲಕ್ಕೆ ಕಾಂಗ್ರೆಸ್ ನಿಂತಿತು. ಏಕೆಂದರೆ, ಅವರು ಮೋದಿಯನ್ನು ತುಂಡಾಗಿ ಕತ್ತರಿಸಲು ಬಯಸುತ್ತಾರೆ ಎಂದು ಹೇಳಿದರು.
ಇಂಥ ಮಾತನ್ನು ಸಾರ್ವಜನಿಕವಾಗಿ ಆಡುವುದು ತಪ್ಪು ಎಂದು ನನಗೆ ಗೊತ್ತು. ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳೂ ನನ್ನ ಭಾಷಣ ಕೇಳುತ್ತಾರೆ. ಅವರು ಈ ಮಾತುಗಳನ್ನು (ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಬಳಸಿದ ಪದಗಳು) ಕಲಿಯಲೂ ಬಾರದು, ಮಾತನಾಡಲೂ ಬಾರದು ಎಂದು ಅವರು ಹೇಳಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications