ಪಂಜಾಬ್‌ನಲ್ಲಿ ಇನ್ನೋರ್ವ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನ ಕೊಲೆ

ಪಟಿಯಾಲ ಏಪ್ರಿಲ್ 6: ಪಂಜಾಬ್‌ನಲ್ಲಿ ಮತ್ತೋರ್ವ ಕಬ್ಬಡಿ ಆಟಗಾರನ ಹತ್ಯೆಯಾಗಿದೆ. ಪಂಜಾಬಿ ವಿಶ್ವವಿದ್ಯಾಲಯದ ಎದುರು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಬಳಿಕ ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಅವರನ್ನು ಪ್ರತಿಸ್ಪರ್ಧಿ ಬಣದ ಗುಂಪು ಗುರಿಯಾಗಿಸಿಕೊಂಡಿದೆ. ವಿರೋಧಿ ಬಣದ ದ್ವೇಷದಿಂದ ನಿನ್ನೆ ರಾತ್ರಿ ಧರ್ಮಿಂದರ್ ಸಿಂಗ್ ಅವರಿಗೆ ಗುಂಡು ಹಾರಿಸಲಾಗಿದ್ದು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಕುರಿತು ಪಟಿಯಾಲ ಪೊಲೀಸ್‌ನ ಎಸ್‌ಎಸ್‌ಪಿ ನಾನಕ್‌ ಸಿಂಗ್‌ ಮಾಹಿತಿಯನ್ನು ನೀಡಿದ್ದಾರೆ. ನಿನ್ನೆ ರಾತ್ರಿ ಆಟಗಾರ ಧರ್ಮಿಂದರ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಪೊಲೀಸರು ಆತನ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ರಾತ್ರಿ ಪಟಿಯಾಲ ವಿಶ್ವವಿದ್ಯಾಲಯದಲ್ಲಿ ದೌನ್ ಕಲಾನ್ ಮತ್ತು ಥೇರಿ ಗ್ರಾಮಗಳ ಪ್ರತಿಸ್ಪರ್ಧಿ ಗುಂಪುಗಳ ನಡುವೆ ಘರ್ಷಣೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಹೊರಗಿನ ಡಾಬಾದಲ್ಲಿ ಪ್ರತಿಸ್ಪರ್ಧಿ ಬಣಗಳ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಧರ್ಮಿಂದರ್ ತನ್ನ ಗ್ರಾಮಸ್ಥರನ್ನು ಪ್ರತಿನಿಧಿಸಿದರು. ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿರುವುದು ದೃಶ್ಯಗಳಿಂದ ಸ್ಪಷ್ಟವಾಗಿದೆ' ಎಂದು ಹೇಳಿದರು.

ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಹತ್ಯೆಯ ಸುದ್ದಿ ತಿಳಿದ ತಕ್ಷಣ ಅವರ ಗ್ರಾಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ದೌನ್ ಕಲಾನ್ ಗ್ರಾಮದ ಕಬಡ್ಡಿ ಕ್ಲಬ್ ಅಧ್ಯಕ್ಷರಾಗಿದ್ದ ಧರ್ಮಿಂದರ್ ರಾಜಕೀಯವಾಗಿಯೂ ಸಕ್ರಿಯರಾಗಿದ್ದರು. ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ಅವರು ಶಿರೋಮಣಿ ಅಕಾಲಿ ದಳವನ್ನು ತೊರೆದು ಘನೌರ್‌ನಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಕಬಡ್ಡಿ ಆಟಗಾರ ಗುರ್ಲಾಲ್ ಘನೂರ್ ಪರ ಪ್ರಚಾರವನ್ನೂ ಮಾಡಿದರು.

ಪಟಿಯಾಲ ಎಸ್‌ಎಸ್‌ಪಿ ನಾನಕ್‌ ಸಿಂಗ್‌ ಮಾತನಾಡಿ, ಧರ್ಮಿಂದರ್‌ ಹತ್ಯೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹವನ್ನು ಪಡೆದು ತನಿಖೆ ಆರಂಭಿಸಿದ್ದೇವೆ. ಇದುವರೆಗಿನ ತನಿಖೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಕೊಲೆಯ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.

Another International Kabaddi Player Killed in Punjab

ಮಾರ್ಚ್ 14 ರಂದು ಜಲಂಧರ್‌ನಲ್ಲಿ ಇನ್ನೋರ್ವ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಅವರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ನಂತರ ಈ ಘಟನೆ ನಡೆದಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಕೆನಡಾದ ಎನ್‌ಆರ್‌ಐ ಹೆಸರು ಕೇಳಿಬಂದಿದೆ.

ಧರ್ಮಿಂದರ್ ಹತ್ಯೆಯ ದಿನವಾದ ಮಂಗಳವಾರ, ಮುಖ್ಯಮಂತ್ರಿ ಭಗವಂತ್ ಮಾನ್ ಪಂಜಾಬ್ ಪೊಲೀಸ್ ಮುಖ್ಯಸ್ಥ ವಿಕೆ ಭಾವ್ರಾ ಅವರನ್ನು ಎಡಿಜಿಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ದರೋಡೆಕೋರ ವಿರೋಧಿ ಕಾರ್ಯಪಡೆ (ಎಜಿಟಿಎಫ್) ರಚಿಸುವಂತೆ ಕೇಳಿದ್ದರು. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾನ್, ಮಾದಕ ದ್ರವ್ಯ ವ್ಯಾಪಾರ ಮತ್ತು ಕಬಡ್ಡಿ ಆಟದಲ್ಲಿ ಅವರ ರೆಕ್ಕೆಯ ಕತ್ತರಿಸಲು ಪೊಲೀಸ್ ಪಡೆಗೆ ಸಾಕಷ್ಟು ಹಣದ ಜೊತೆಗೆ ಅಗತ್ಯವಾದ ಮಾನವಶಕ್ತಿ, ಇತ್ತೀಚಿನ ಉಪಕರಣಗಳು ಮತ್ತು ಮಾಹಿತಿ ತಂತ್ರಜ್ಞಾನದ ಅಧಿಕಾರಿಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+