ಬಂಡೀಪುರದಲ್ಲಿ ಆನೆ ಗಣತಿಗೆ ಸ್ವಯಂಸೇವಕರ ಸಾಥ್
ನಾಲ್ಕು ದಿನಗಳ ಕಾಲ ನಡೆಯುವ ಗಣತಿ ಕಾರ್ಯಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು. ಏಕಕಾಲಕ್ಕೆ ಆಯಾ ಬ್ಲಾಕ್ಗಳಿಂದ ಹೊರಟ ಸ್ವಯಂ ಸೇವಕರು ಕಾಡಿನೊಳಗೆ ಅರಣ್ಯ ಸಿಬ್ಬಂದಿಗಳ ಸಹಕಾರದಲ್ಲಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗುಂಡ್ಲುಪೇಟೆ, ಮೇ 17: ಬಂಡೀಪುರ ಅಭಯಾರಣ್ಯದಲ್ಲಿ 2017-18ನೇ ಸಾಲಿನ ಆನೆಗಣತಿಯು ಪ್ರಾರಂಭವಾಗಿದ್ದು, ಸ್ವಯಂಸೇವಕರು ಉತ್ಸಾಹದಿಂದ ತಮ್ಮನ್ನು ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯುವ ಗಣತಿ ಕಾರ್ಯಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಾಯಿತು. ಏಕಕಾಲಕ್ಕೆ ಆಯಾ ಬ್ಲಾಕ್ಗಳಿಂದ ಹೊರಟ ಸ್ವಯಂ ಸೇವಕರು ಕಾಡಿನೊಳಗೆ ಅರಣ್ಯ ಸಿಬ್ಬಂದಿಗಳ ಸಹಕಾರದಲ್ಲಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ.[ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ]

ಬಂಡೀಪುರ ಹುಲಿಯೋಜನೆಯ 12 ವಲಯಗಳಲ್ಲೂ ಬೆಳಿಗ್ಗೆ 7ರಿಂದಲೇ ಅರಣ್ಯಕ್ಕೆ ತೆರಳಿ ಗಣತಿಯನ್ನು ಆರಂಭಿಸಲಾಗಿದ್ದು, ಮುಂಜಾನೆ ಸಮಯದಲ್ಲಿ ಆನೆಗಳು ಸಿಗುವ ಗಸ್ತು ರಸ್ತೆಗಳಲ್ಲಿ ಮತ್ತು ಆನೆಪಥಗಳಲ್ಲಿ ಗಣತಿ ಕಾರ್ಯವನ್ನು ಚುರುಕಾಗಿ ನಡೆಸಲಾಯಿತು. ಸುಮಾರು 4 ರಿಂದ 6 ಕಿಲೋಮೀಟರ್ಗೆ ಒಂದು ಬ್ಲಾಕ್ ಎಂದು ಗುರುತಿಸಿಕೊಂಡು ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಗಣತಿ ಕಾರ್ಯ ನಡೆಸಲಾಗುತ್ತಿದೆ.

ಒಂದು ಬ್ಲಾಕ್ಗೆ ಒಬ್ಬ ಸ್ವಯಂಸೇವಕರು, ಜಿಪಿಎಸ್, ನಕ್ಷೆ, ಅಳತೆ ಪಟ್ಟಿ ಮೂವರು ಅರಣ್ಯ ಸಿಬ್ಬಂದಿ ಬಂದೂಕಿನೊಂದಿಗೆ ತೆರಳುತ್ತಿದ್ದಾರೆ. ಗಣತಿದಾರರಿಗೆ ಅರಣ್ಯ ಇಲಾಖೆಯು ಬೆಳಿಗ್ಗೆ ತಿಂಡಿ ಮತ್ತು ಊಟ ಹಾಗೂ ನೀರಿನ ವ್ಯವಸ್ಥೆ ಮಾಡಿದೆ. ಬಹುತೇಕ ವಿದ್ಯಾವಂತರೇ ಅದರಲ್ಲೂ ಹುದ್ದೆಯಲ್ಲಿರುವವರೇ ಹೆಚ್ಚಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ಓಂಕಾರ ಅರಣ್ಯದ ಮುಂಟಿನೆತ್ತಿ ರಸ್ತೆ ಹಾಗೂ ಸೌತ್ಕೆರೆ ಬಳಿ ಸ್ವಯಂ ಸೇವಕರು ಆನೆ ಗಣತಿಯಲ್ಲಿ ತೊಡಗಿರುವುದನ್ನು ಎಸಿಎಫ್ ಪೂವಯ್ಯ ಪರಿಶೀಲಿಸಿ ಗಣತಿ ಕಾರ್ಯ ವೇಳೆಯಲ್ಲಿ ಎಚ್ಚರ ವಹಿಸುವಂತೆ ಕಿವಿ ಮಾತು ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications