Get Updates
Get notified of breaking news, exclusive insights, and must-see stories!

ಪ್ರವಾಸಿಗರಿಗೆ ಸಿಹಿಸುದ್ದಿ: ಕರ್ನಾಟಕದಲ್ಲಿ ಇನ್ನೂ ಎರಡು ಹುಲಿ ಸಫಾರಿ ಆರಂಭ

ಚಾಮರಾಜನಗರ, ಡಿಸೆಂಬರ್ 28: ದೇಶದಲ್ಲಿಯೇ ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಕರ್ನಾಟಕ. ರಾಜ್ಯದಲ್ಲಿ ಹುಲಿ ಸಫಾರಿ ಆನಂದಿಸುವವರಿಗೆ ಅರಣ್ಯ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ ಈಗಿರುವ ಹುಲಿ ಸಫಾರಿಯ ಜೊತೆಗೆ ಇನ್ನೂ ಎರಡು ಸಫಾರಿ ಕೇಂದ್ರಗಳು ಆರಂಭವಾಗಲಿವೆ. ಅವು ಸಹ ಚಾಮರಾನಗರ ಜಿಲ್ಲೆಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಪರಿಸರದ ಕುರಿತು ಅರಿವು ಮೂಡಿಸಲು, ಪ್ರವಾಸೋದ್ಯಮ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಿದೆ. ಇಲ್ಲಿ ಕೆ. ಗುಡಿಯಲ್ಲಿ ಈಗಾಗಲೇ ಹುಲಿ ಸಫಾರಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡಲು ಇಲ್ಲಿ ಇನ್ನೂ ಎರಡು ಸಫಾರಿ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಅನುಮತಿ ಕೇಳಿದ್ದು, ಶೀಘ್ರವೇ ಹುಲಿ ಸಫಾರಿ ಆರಂಭವಾಗುವ ನಿರೀಕ್ಷೆ ಇದೆ.

Two New Tiger Safari Center To Come In BRT Chamarajanagar

ಹುಲಿಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇನ್ನೂ ಎರಡು ಹುಲಿ ಸಫಾರಿ ಆರಂಭವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ 4 ಹುಲಿ ಸಫಾರಿ ಇದ್ದು, ಅರಣ್ಯ ಇಲಾಖೆ ಇನ್ನೂ ಎರಡು ಸಫಾರಿ ಆರಂಭಿಸಲು ಮುಂದಾಗಿದೆ. ಇಲ್ಲಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದರಿಂದ ಹೊಸ ಎರಡು ಸಫಾರಿ ಆರಂಭವಾಗಲಿದೆ.

ಎಲ್ಲೆಲ್ಲಿ ಸಫಾರಿ ಕೇಂದ್ರ ನಿರ್ಮಾಣ?; ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆ. ಗುಡಿಯಲ್ಲಿ ಈಗಾಗಲೇ ಹುಲಿ ಸಫಾರಿ ಕೇಂದ್ರವಿದೆ. ಸದ್ಯದ ಮಾಹಿತಿ ಪ್ರಕಾರ ಅರಣ್ಯ ಇಲಾಖೆ ಗುಂಡಾಲ್ ಮತ್ತು ಬೂದಿಪಡಗದಲ್ಲಿ ಇನ್ನೂ ಎರಡು ಸಫಾರಿ ಕೇಂದ್ರವನ್ನು ಆರಂಭಿಸಲಿದೆ. ಇದರಿಂದಾಗಿ ರಾಜ್ಯದಲ್ಲಿ ಹುಲಿ ಸಫಾರಿ ನಡೆಸುವವರಿಗೆ ಅನುಕೂಲವಾಗಲಿದ್ದು, ಅರಣ್ಯ ಇಲಾಖೆಗೆ ಹೆಚ್ಚಿನ ಆದಾಯವೂ ಬರಲಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ಗುಂಡಾಲ್ ಮತ್ತು ಚಾಮರಾಜನಗರ ತಾಲೂಕಿನ ಬೂದಿಪಗಡದಲ್ಲಿ ಎರಡು ಹೊಸ ಹುಲಿ ಸಫಾರಿ ಆರಂಭವಾಗಲಿದೆ. ಬಹಳ ವರ್ಷಗಳಿಂದ ಹೊಸ ಸಫಾರಿ ಆರಂಭಿಸಲು ಬೇಡಿಕೆ ಇತ್ತು. ಅರಣ್ಯ ಇಲಾಖೆಯೂ ಈ ಕುರಿತು ಈಗ ಚಿಂತನೆ ನಡೆಸಿ, ಸಫಾರಿ ಆರಂಭಕ್ಕೆ ಮುಂದಾಗಿದೆ.

ರಜೆ ದಿನಗಳು ಮತ್ತು ವಾರಾಂತ್ಯದಲ್ಲಿ ಬಿಳಿಗಿರಿ ರಂಗನಾಥ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿಗೆ ನೂರಾರು ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿ ಉಂಟಾಗುವ ಪ್ರವಾಸಿಗರ ದಟ್ಟಣೆ ಕಡಿಮೆ ಮಾಡಲು ಎರಡು ಹೊಸ ಹುಲಿ ಸಫಾರಿ ಆರಂಭಿಸಲಾಗುತ್ತದೆ. ಇದರಿಂದಾಗಿ ಹೆಚ್ಚಿನ ಪ್ರವಾಸಿಗರು ಸಹ ಹುಲಿ ಸಫಾರಿ ಕೈಗೊಳ್ಳಲು ಅನುಕೂಲವಾಗುತ್ತದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಾಲ್ ಮತ್ತು ಬೂದಿಪಗಡದಲ್ಲಿ ಹೊಸ ಹುಲಿ ಸಫಾರಿ ಆರಂಭಿಸುವ ಜೊತೆಗೆ ಇಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹುಲಿ ಸಫಾರಿ ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ ಅನುಮತಿ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಳಿಗಿರಿ ರಂಗನಾಥ ಬೆಟ್ಟ ಆಗ್ನೇಯ ಕರ್ನಾಟಕ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿದೆ. ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯವಿದ್ದು, ಇದೇ ಹೆಸರಿನಲ್ಲಿ ವನ್ಯಜೀವಿ ಧಾಮ ಅಥವಾ ಅಭಯಾರಣ್ಯವಿದೆ. ಇಲ್ಲಿಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹುಲಿ ಸಫಾರಿ ನಡೆಸಿ, ಆನೆ, ಹುಲಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+