ರಾಂಪುರ ಕಾಡಿನಲ್ಲಿ ಬವಣೆಯ ಬದುಕು ನಡೆಸುತ್ತಿರುವ ಕಾವಡಿಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ಯಾವುದೇ ಉಪಯೋಗವಿಲ್ಲ. ಇದೀಗ ಕೆಲವು ಆನೆಗಳನ್ನು ರಾಂಪುರ ಶಿಬಿರಕ್ಕೆ ಸ್ಥಳಾಂತರಿಸಿದ್ದರಿಂದ ಕಾವಡಿಗಳು ಮಕ್ಕಳ ಸಹಿತ ಅಲ್ಲಿಗೆ ಅನಿವಾರ್ಯವಾಗಿ ತೆರಳಿದ್ದು ಅಲ್ಲಿ ಕಷ್ಟಪಡುತ್ತ
ಚಾಮರಾಜನಗರ, ಮೇ 24: ಸಂಚರಿಸಲು ಸಮರ್ಪಕ ರಸ್ತೆಯಿಲ್ಲ, ವಿದ್ಯುತ್ ಬೆಳಕಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೆ ಹತ್ತಿರದಲ್ಲಿ ಶಾಲೆಯಿಲ್ಲ! ಆನೆಗಳನ್ನು ತೊಳೆಯುವ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ! ಮಳೆ-ಗಾಳಿ ಬಂದರೆ ಕಿತ್ತೊಗುವಂತಹ ಜೋಪಡಿಯಲ್ಲೇ ವಾಸ... ಇವೆಲ್ಲವೂ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೊಳಪಡುವ ರಾಂಪುರ ಆನೆ ಶಿಬಿರದಲ್ಲಿ ಕಂಡು ಬರುವ ಸಮಸ್ಯೆಗಳು.
ಬಂಡೀಪುರದಲ್ಲಿ ಸಾಕಾನೆಗಳಿಗೆ ಸಮರ್ಪಕ ನೀರು ದೊರಕದ ಕಾರಣದಿಂದ ಕಾವಡಿಗಳ ಕುಟುಂಬಗಳ ಸಮೇತ 17 ಆನೆಗಳನ್ನು ಮೂಲೆಹೊಳೆ ಸಮೀಪದ ರಾಂಪುರ ಶಿಬಿರಕ್ಕೆ ಸ್ಥಳಾಂತರಗೊಳಿಸಿದ್ದು, ಇದೀಗ ಅಲ್ಲಿಗೆ ತೆರಳಿರುವ ಕಾವಡಿಗಳು ಮತ್ತು ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.[ಬತ್ತಿದ ಬಂಡೀಪುರದ ಕೆರೆಕಟ್ಟೆಗಳಿಗೆ ಜೀವ ನೀಡಿದ ವರುಣ!]
ಬಂಡೀಪುರದಲ್ಲಿ ಶಾಲೆಗೆ ತೆರಳುತ್ತಿದ್ದ ಹತ್ತು ಮಕ್ಕಳು ಶಾಲೆ ದೂರವಾದ ಕಾರಣ ಶಾಲೆಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸಾಕಾನೆಗಳಿಂದ ಅರಣ್ಯ ಇಲಾಖೆಗೆ ಯಾವುದೇ ಉಪಯೋಗವಿಲ್ಲ. ಇದೀಗ ಕೆಲವು ಆನೆಗಳನ್ನು ರಾಂಪುರ ಶಿಬಿರಕ್ಕೆ ಸ್ಥಳಾಂತರಿಸಿದ್ದರಿಂದ ಕಾವಡಿಗಳು ಮಕ್ಕಳ ಸಹಿತ ಅಲ್ಲಿಗೆ ಅನಿವಾರ್ಯವಾಗಿ ತೆರಳಿದ್ದು ಅಲ್ಲಿ ಕಷ್ಟಪಡುತ್ತಿದ್ದಾರೆ.[ಗುಂಡ್ಲುಪೇಟೆಯ ದೊಡ್ಡಕೆರೆ, ಚೋಳರ ಕಾಲದ ಕಲ್ಯಾಣಿಯೇ?]
1914ರಲ್ಲಿ ಬಂಡೀಪುರ ಶಿಬಿರದಲ್ಲಿ ಪ್ರಾರಂಭಿಸಲಾಗಿದ್ದ ಸಾಕಾನೆಗಳ ಒಟ್ಟು ಸಂಖ್ಯೆ 20, ಇವುಗಳನ್ನು ನಿರ್ವಹಿಸಲು 24 ಕಾವಡಿಗಳು, 3 ಮಾವುತರು ಹಾಗೂ ಕುಟುಂಬಗಳು ಬಂಡೀಪುರದಲ್ಲಿ ನೆಲೆಸಿದ್ದರು. ಅಲ್ಲಿಂದ ಇಲ್ಲಿ ತನಕ ಕಾವಡಿಗಳ ಕುಟುಂಬ ಅಲ್ಲಿಯೇ ನೆಲೆಸಿವೆ. ಆದರೆ ಬಂಡೀಪುರದಲ್ಲಿ ನೀರು ಮತ್ತಿತರ ಸಮಸ್ಯೆಗಳು ಕಂಡುಬಂದ ಕಾರಣದಿಂದ ಮೂಲೆಹೊಳೆಯ ರಾಂಪುರ ಶಿಬಿರಕ್ಕೆ ಆನೆ ಮತ್ತು ಕಾವಡಿಗಳ ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ದ್ವೀಪದಂತಾಗಿದೆ ಬದುಕು!

ಮನುಷ್ಯರಿಗೂ-ಆನೆಗೂ ಕುಡಿಯೋದಕ್ಕೆ ಒಂದೇ ನೀರು!

ಆನೆಗಳಿಗೆ ರಕ್ಷಣೆಯಿಲ್ಲ

ಶಿಬಿರದ ಸುರಕ್ಷತೆ ಅಂದರೆ ದಿವ್ಯ ನಿರ್ಲಕ್ಷ್ಯ
ಇಷ್ಟೆಲ್ಲ ಕಷ್ಟಗಳಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ಇದ್ಯಾವುದರ ಪರಿವೇ ಇಲ್ಲದೆ ಶಿಬಿರದ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ
ಇನ್ನು ಮುಂದೆಯಾದರೂ ಕಾವಡಿಗಳ ಮತ್ತು ಅವರ ಕುಟುಂಬದ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ಅವರಿಗೂ ಎಲ್ಲರಿಗೂ ಸಿಗುವಂತಹ ಸೌಲಭ್ಯ ನೀಡಬೇಕಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications