Bus accident: ಮೂಗೂರು ಕ್ರಾಸ್ ಬಳಿ ಖಾಸಗಿ ಬಸ್ ಪಲ್ಟಿ, 30ಕ್ಕೂ ಹೆಚ್ಚು ಮಂದಿಗೆ ಗಾಯ
ಚಾಮರಾಜನಗರ, ಜನವರಿ, 22: ಖಾಸಗಿ ಬಸ್ವೊಂದು ಅಪಘಾತವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಗೂರು ಕ್ರಾಸ್ ಬಳಿ ಭಾನುವಾರ ಮುಂಜಾನೆ 4ರ ಸುಮಾರಿಗೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಉದಯರಂಗ ಎಂಬ ಖಾಸಗಿ ಬಸ್ ಇದಾಗಿದ್ದು, ಚಾಲಾಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ. ಬಸ್ಸಿನಲ್ಲಿ 50 ರಿಂದ 60 ಜನ ಪ್ರಯಾಣಿಕರಿದ್ದು, ಅದರಲ್ಲಿ 30 ರಿಂದ 35 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಾಮರಾಜನಗರ ಹೊಯ್ಸಳ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂಕೋಲಾ:
ಕಾರು,
KSRTC
ಬಸ್
ನಡುವೆ
ಭೀಕರ
ಅಪಘಾತ,
ಕಾರಿನಲ್ಲಿದ್ದ
ತಮಿಳುನಾಡಿನ
ನಾಲ್ವರು
ಸಾವು
ಘಟನಾ
ಸ್ಥಳವು
ಮೈಸೂರು
ಜಿಲ್ಲೆಯ
ಟಿ
ನರಸೀಪುರ
ಪೊಲೀಸ್
ಠಾಣಾ
ವ್ಯಾಪ್ತಿಗೆ
ಸೇರುವುದರಿಂದ
ಚಾಮರಾಜನಗರ
ಪೊಲೀಸರು
ಮೈಸೂರು
ಪೊಲೀಸರಿಗೆ
ಮಾಹಿತಿ
ಕೊಟ್ಟಿದ್ದಾರೆ.
ಕಾಲೇಜು
ಬಸ್
ಅಪಘಾತ
ಹಾಗೆಯೇ
ಪಿಯುಸಿ
ಕಾಲೇಜು
ವಿದ್ಯಾರ್ಥಿಗಳು
ಪಿಕ್ನಿಕ್
ಮುಗಿಸಿಕೊಂಡು
ಹಿಂದಿರುಗುವ
ವೇಳೆ
ಬಸ್
ಅಪಘಾತಕ್ಕೀಡಾದ
ಘಟನೆ
ಮೂಡಿಗೆರೆ
ತಾಲೂಕಿನ
ಬಣಕಲ್
ಪೊಲೀಸ್
ಠಾಣಾ
ವ್ಯಾಪ್ತಿಯಲ್ಲಿ
ಇತ್ತೀಚೆಗಷ್ಟೇ
ನಡೆದಿತ್ತು.
ಅಪಘಾತದಲ್ಲಿ
ಐವರು
ವಿದ್ಯಾರ್ಥಿಗಳು
ಗಾಯಗೊಂಡಿದ್ದು,
ಅದೃಷ್ಟವಶಾತ್
ಎಲ್ಲರೂ
ಪ್ರಾಣಾಪಾಯದಿಂದ
ಪಾರಾಗಿದ್ದಾರೆ
ಎನ್ನುವ
ಮಾಹಿತಿ
ಲಭ್ಯವಾಗಿತ್ತು.
ಮುತ್ತಿಗೆಪುರದ
ಹರೀಶ್
ಪಿಯುಸಿ
ಕಾಲೇಜಿನಲ್ಲಿ
ವಿದ್ಯಾಭ್ಯಾಸ
ಮಾಡುತ್ತಿದ್ದ
ವಿದ್ಯಾರ್ಥಿಗಳು
ಮೂಡಿಗೆ
ತಾಲೂನಿಕ
ಪ್ರಸಿದ್ಧ
ಪ್ರವಾಸಿ
ತಾಣ
ದೇವರ
ಮನೆ
ಗುಡ್ಡಕ್ಕೆ
ಪಿಕ್ನಿಕ್
ತೆರಳಿದ್ದರು.
ಪಿಕ್ನಿಕ್
ಮುಗಿಸಿಕೊಂಡು
ಹಿಂದಿರುಗುವ
ವೇಳೆ
ಬಸ್
ಚಾಲಕನ
ನಿಯಂತ್ರಣ
ತಪ್ಪಿದ್ದು,
ಇದರ
ಪರಿಣಾಮ
ವಿದ್ಯುತ್
ಕಂಬಕ್ಕೆ
ಡಿಕ್ಕಿ
ಹೊಡೆದು
ಬಸ್
ಪಲ್ಟಿಯಾಗಿತ್ತು.
ಪೊಲೀಸರಿಂದ ಸ್ಥಳ ಪರಿಶೀಲನೆ
ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡ ಮಲೆನಾಡಿನಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಪ್ರತಿನಿತ್ಯ ಇಲ್ಲಿಗೆ ಪ್ರವಾಸಿಗರ ದಂಡೇ ಬರುತ್ತದೆ. ಇಲ್ಲಿ ಕಿರಿದಾದ ರಸ್ತೆಗಳು ಇದ್ದು, ಈ ರಸ್ತೆಯಲ್ಲಿ ಸಾಗುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯತೆಯೂ ಇದೆ. ಆದರೆ ಯಾವುದೇ ಸಮಸ್ಯೆ ಇಲ್ಲದೆ ಪಿಕ್ನಿಕ್ ಮುಗಿಸಿಕೊಂಡ ವಿದ್ಯಾರ್ಥಿಗಳು ಮತ್ತೆ ಊರಿನತ್ತ ಮರಳುವಾಗ ಈ ಘಟನೆ ಸಂಭವಿಸಿದೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿದೆ.